ಆಹಾ ಎಷ್ಟು ಚೆಂದ..! ಬಾನಂಗಳದಲ್ಲಿ ರಂಗಿನ ರಂಗೋಲಿ ಬರೆದ ರಕ್ತಚಂದ್ರ!
Recommended Video

ನವದೆಹಲಿ, ಜುಲೈ 28: ಶತಮಾನದ ಸುದೀರ್ಘ ಚಂದ್ರಗ್ರಹಣಕ್ಕೆ ಭಾರತ ಸೇರಿದಂತೆ ವಿಶ್ವದ ನಾನಾ ದೇಶಗಳು ಸಾಕ್ಷಿಯಾದವು.
ಜುಲೈ 27, ಶುಕ್ರವಾರ ಮಧ್ಯರಾತ್ರಿ 11.55 ರಿಂದ ಆರಂಭವಾದ ಗ್ರಹಣ ಜು.28 ಶನಿವಾರ ಬೆಳಗ್ಗಿನ ಜಾವದವರೆಗೂ ಕಾಣಿಸಿಕೊಂಡು ಚಂದ್ರಪ್ರಿಯರ ಮನತಣಿಸಿತು!
2001 ರಿಂದ 2100 ರ ಅವಧಿಯಲ್ಲಿ ಇಂಥ ಗ್ರಹಣ ಸಂಭವಿಸಿಲ್ಲ, ಸಂಭವಿಸುವುದೂ ಇಲ್ಲ! 1 ಗಂಟೆ 42 ನಿಮಿಷ 57 ಸೆಕೆಂಡ್ ನಷ್ಟು ದೀರ್ಘ ಕಾಲ ಖಗ್ರಾಸ ಗ್ರಹಣ ಸಂಭವಿಸಿದ್ದು, ಒಟ್ಟು ಸುಮಾರು 3:45 ನಿಮಿಷಗಳಷ್ಟು ದೀರ್ಘಕಾಲ ಈ ಗ್ರಹಣ ಕಾಣಿಸಿಕೊಂಡಿದೆ.
ಬೆಂಗಳೂರು ಸೇರಿದಂತೆ ಕೆಲವೆಡೆ ಮೋಡ ಕವಿದ ವಾತಾವರಣ ಇದ್ದಿದ್ದರಿಂದ ರಕ್ತಚಂದ್ರನನ್ನು ನೋಡುವ ಅವಕಾಶ ಕೈತಪ್ಪಿತು! ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ರಕ್ತ ಚಂದ್ರ ಬಾನಂಗಳದಲ್ಲಿ ಬರೆದ ರಂಗಿನ ರಂಗೋಲಿ ರಾರಾಜಿಸುತ್ತಿದೆ.
| Array |
ಶತಮಾನದ ಸುಂದರ ದೃಶ್ಯ
ಭಾರತದಲ್ಲಿ ಕಂಡ ರಕ್ತಚಂದ್ರನ ಚಿತ್ರ ಇದು. ಭಾರತದ ಎಲ್ಲಾ ಕಡೆಯೂ ಗ್ರಹಣ ಬರಿಗಣ್ಣಿನಲ್ಲಿ ಕಾಣುತ್ತಿದ್ದಾರೂ, ಮೋಡದ ಕಾರಣದಿಂದಾಗಿ ಶತಮಾನದ ಈ ಸುಂದರ ದೃಶ್ಯವನ್ನು ನೋಡಲು ಹಲವರಿಗೆ ಸಾಧ್ಯವಾಗಲಿಲ್ಲ.
| Array |
ನೈಲ್ ನದಿಯೆಲ್ಲ ಕೆಂಪು ಕೆಂಪು!
ಈಜಿಪ್ಟಿನ ನೈಲ್ ನದಿಯನ್ನೆಲ್ಲ ಕೆಂಪಾಗಿಸಿದ ರಕ್ತ ಚಂದ್ರನ ಚಿತ್ರ ಇದು! ಹಿನ್ನೆಲೆಯಲ್ಲಿ ಕಪ್ಪು ಆಕಾಶ, ಅಲ್ಲೊಂದು ಕೇಸರಿ ಚೆಂಡು... ಅಡಿಯಲ್ಲಿ ಕೆಂಪು ನೀರು. ಕಣ್ತುಂಬಲು ಇನ್ನೇನು ಬೇಕು?!
In Pics: ವಿಶ್ವದೆಲ್ಲೆಡೆ ರಕ್ತವರ್ಣದಲ್ಲಿ ಕಂಡ ಚಂದಿರನ ಕಣ್ತುಂಬಿಸಿಕೊಳ್ಳಿ
|
ಜರ್ಮನಿಯಲ್ಲಿ ಕಂಡ ಕೆಂಪು ಚಂದ್ರ
ಜರ್ಮನಿಯಲ್ಲಿ ಚೆಂದದ ಕಟ್ಟಡವೊಂದರ ಪಕ್ಕ ಕಂಡ ಕೆಂಪು ಚಂದ್ರ ಚೆಂದವೊ ಚೆಂದ! ಈ ಶತಮಾನದ ಸುದೀರ್ಘ ಚಂದ್ರ ಗ್ರಹಣ ಮತ್ತು 2036 ರವರೆಗೂ ಮತ್ತೆ ಕಾಣದ ಖಗ್ರಾಸ ಚಂದ್ರಗ್ರಹಣ ಇದು ಎಂಬ ಕಾರಣಕ್ಕೆ ಸಾಕಷ್ಟು ವಿಶೇಷತೆ ಪಡೆದಿತ್ತು.
|
ಎಂಥ ಚೆಂದ ಈ ಚಂದಮಾಮ!
ವಿಶ್ವದ ಹಲವೆಡೆ ಕಂಡ ಚಂದ್ರಗ್ರಹಣದ ಅಮೋಘ ದೃಶ್ಯವನ್ನು ಸೆರೆ ಹಿಡಿದಿರುವ ಬಿಬಿಸಿ ನ್ಯೂಸ್, ಅದನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಈ ಚೆಂದದ ಚಂದ್ರಂಗೆ ಸಾಟಿ ಯಾರು ಹೇಳಿ?!
|
ವಿವಿಧ ಹಂತಗಳಲ್ಲಿ
ಗ್ರಹಣ ಸ್ಪರ್ಶದಿಂದ ಹಿಡಿದು ಗ್ರಹಣ ಮೋಕ್ಷದವರೆಗೂ ತೆಗೆದ ಚಿತ್ರವನ್ನು ಉಲ್ರಿಚ್ ಜೇನ್ಸ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇಂಥ ಗ್ರಹಣದ ಚಿತ್ರ ತೆಗೆಯುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದವರು ಬರೆದುಕೊಂಡಿದ್ದಾರೆ.
|
ಬಾನಂಗಳದಲ್ಲಿ ಕೆಂಪು ಚೆಂಡು!
ಇಂಡೋನೇಶ್ಯಾದಲ್ಲಿ 103 ನಿಮಿಷಗಳ ದೀರ್ಘ ಕಾಲ ಕಾಣಿಸಿಕೊಂಡ ಈ ಚಂದ್ರ ಬಾನಂಗಳದಲ್ಲೊಂದು ಕೆಂಪು ಚೆಂಡನಿಟ್ಟಂತೆ ಕಂಡ!
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
Summer Camp: ಶೃಂಗೇರಿ ಶಾರದಾ ಪೀಠದಿಂದ ವಟುಗಳಿಗಾಗಿ 15 ದಿನಗಳ ಉಚಿತ 'ಸಂಸ್ಕಾರ' ಬೇಸಿಗೆ ಶಿಬಿರ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ












Click it and Unblock the Notifications