ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಸಮರ್ಥ ಸರಕಾರದಿಂದ ಜಿಎಸ್ ಟಿ ಜಾರಿ: ರಾಹುಲ್ ಟೀಕೆ

By ಅನುಷಾ ರವಿ
|
Google Oneindia Kannada News

ನವದೆಹಲಿ, ಜೂನ್ 30: ಅಸಮರ್ಥ ಹಾಗೂ ಸೂಕ್ಷ್ಮವಲ್ಲದ ಸರಕಾರವೊಂದರಿಂದ ಜಿಎಸ್ ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿಯಾಗುತ್ತಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಜಿಎಸ್ ಟಿ ಜಾರಿ ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಬೇಕು ಎಂದು ಕಾಂಗ್ರೆಸ್ ನಿರ್ಧರಿಸಿದ ನಂತರ ಮೊದಲ ಬಾರಿಗೆ ರಾಹುಲ್ ಗಾಂಧಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶ್ರೀಸಾಮಾನ್ಯರಿಗೆ ಅನ್ವಯವಾಗುವ ಜಿಎಸ್ಟಿ ದರಗಳ ಅಂತಿಮ ಪಟ್ಟಿ ಇಲ್ಲಿದೆಶ್ರೀಸಾಮಾನ್ಯರಿಗೆ ಅನ್ವಯವಾಗುವ ಜಿಎಸ್ಟಿ ದರಗಳ ಅಂತಿಮ ಪಟ್ಟಿ ಇಲ್ಲಿದೆ

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಯಾವುದೇ ಯೋಜನೆ ಹಾಗೂ ದೂರದೃಷ್ಟಿ ಇಲ್ಲದೆ ಈ ಸರಕಾರ ಜಿಎಸ್ ಟಿ ಅನ್ನು ಜಾರಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಜಿಎಸ್ ಟಿ ಸುಧಾರಣೆಯ ಹಿಂದೆ ಇರುವುದು ಕಾಂಗ್ರೆಸ್ ನ ಶ್ರಮ. ಭಾರತಕ್ಕೆ ಜಿಎಸ್ ಟಿ ಬೇಕು. ಆದರೆ ಸಾಮಾನ್ಯ ನಾಗರಿಕರನ್ನು, ವರ್ತಕರು ಹಾಗೂ ವ್ಯಾಪಾರಿಗಳನ್ನು ನೋವು ಹಾಗೂ ಆತಂಕದಿಂದ ನರಳುವಂತೆ ಮಾಡಬಾರದು ಎಂದಿದ್ದಾರೆ.

'GST being executed by incompetent and insensitive government,' says Rahul Gandhi

ಜಿಎಸ್ ಟಿ ಜಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಭಾಗವಹಿಸುವಂತೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮನವಿ ಮಾಡಿದ್ದಾರೆ. ಇನ್ನು ಕೇಂದ್ರ ಸರಕಾರದ ನಿರ್ಧಾರವನ್ನು ಪ್ರಬಲವಾಗಿ ವಿರೋಧಿಸಿರುವ ರಾಹುಲ್ ಗಾಂಧಿ, "ಜಿಎಸ್ ಟಿ ಜಾರಿ ಎಂಬುದು ಅತ್ಯುತ್ತಮ ಸುಧಾರಣೆ. ಅದನ್ನು ಅರೆಬೆಂದ ಸ್ಥಿತಿಯಲ್ಲಿ ಜಾರಿ ಮಾಡಲು ಹೊರಟಿದ್ದಾರೆ. ಇದರ ಹಿಂದೆ ತಮ್ಮ ದೊಡ್ಡಸ್ತಿಕೆ ತೋರುವ ಉದ್ದೇಶವಿದೆ" ಎಂದು ಅವರು ಟೀಕಿಸಿದ್ದಾರೆ.

English summary
Breaking his silence for the first time after Congress decided to boycott the special GST event, Rahul Gandhi called the Narendra Modi government incompetent and insensitive. The Vice President of the AICC took to Twitter to accuse the government of implementing the Goods and Services Tax regime without planning and foresight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X