Volcano Eruption: ಜ್ವಾಲಾಮುಖಿ ಸ್ಫೋಟದ ಪರಿಣಾಮ ಹಲವು ವಿಮಾನಗಳ ಹಾರಾಟ ರದ್ದು!
12,000 ವರ್ಷಗಳ ನಂತರ ಇಥಿಯೋಪಿಯಾ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟದ ನಂತರ ಜಗತ್ತಿನಲ್ಲಿ ನಾನಾ ರೀತಿಯ ಸಮಸ್ಯೆ ಎದುರಾಗಿದೆ. ಭೀಕರವಾಗಿ ಸ್ಫೋಟಗೊಂಡಿರುವ ಈ ಜ್ವಾಲಾಮುಖಿ ಭಾರಿ ದೊಡ್ಡ ಪ್ರಮಾಣದಲ್ಲಿ ಬೂದಿ ಹೊರಗೆ ಹಾಕುತ್ತಿದೆ. ಹೀಗಾಗಿ ಈಗ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಜ್ವಾಲಾಮುಖಿ ಸ್ಫೋಟ ಪರಿಣಾಮ ಭಾರತದಲ್ಲೂ ಮಾಲಿನ್ಯ ಸೇರಿದಂತೆ ವಿಷಗಾಳಿ ಭೀತಿ ಎದುರಾಗಿದೆ. ಅದರಲ್ಲೂ ಉತ್ತರ ಭಾರತದಲ್ಲಿ ಬೂದಿಯ ಪರಿಣಾಮ ಹಲವು ವಿಮಾನಗಳ ಓಡಾಟವೇ ರದ್ದಾಗಿದೆ.
ಒಂದಾದ ನಂತರ ಒಂದೊಂದು ಪ್ರಾಕೃತಿಕ ವಿಕೋಪಗಳು ಭಯದ ವಾತಾವರಣ ಸೃಷ್ಟಿಸುತ್ತಿವೆ. ಇಥಿಯೋಪಿಯಾ ಹೈಲಿ ಗುಬ್ಬಿ ಪರ್ವತದಲ್ಲಿ ಜ್ವಾಲಾಮುಖಿ ದಿಢೀರ್ ಸ್ಫೋಟಗೊಂಡ ಬಳಿಕ ರಾಷ್ಟ್ರ ರಾಜಧಾನಿ ದೆಹಲಿ ಜನರು ನಿದ್ದೆ ಮಾಡಿಲ್ಲ. ಏಕೆಂದರೆ ಆಫ್ರಿಕಾದ ಇಥಿಯೋಪಿಯಾ ದೇಶದಲ್ಲಿ ಇರುವ ಹೈಲಿ ಗುಬ್ಬಿ ಪರ್ವತದ ಜ್ವಾಲಾಮುಖಿ ಮುನಿಸು ನಮ್ಮ ದೇಶಕ್ಕೂ ಸಮಸ್ಯೆ ಮಾಡುತ್ತಿದೆ. ಈ ಜ್ವಾಲಾಮುಖಿ ದಿಢೀರ್ ಸ್ಫೋಟಗೊಂಡ ಬಳಿಕ ಉತ್ತರ ಭಾರತದಲ್ಲಿ ಸಾಲು ಸಾಲು ಸಮಸ್ಯೆ ಶುರು ಆಗಿವೆ.

ವಿಮಾನ ಹಾರಟಕ್ಕೂ ಸಾಕಷ್ಟು ತೊಂದರೆ
ಪ್ರಮುಖವಾಗಿ ದೆಹಲಿ ಆಕಾಶದಲ್ಲಿ ದಟ್ಟ ಬೂದಿ ಆವರಿಸಿದ್ದು, ಇದರ ಪರಿಣಾಮವಾಗಿ ವಿಮಾನ ಹಾರಾಟ ಸೇರಿದಂತೆ ಹಲವು ಪ್ರಮುಖ ಚಟುವಟಿಕೆಗೆ ಬ್ರೇಕ್ ಹಾಕಲಾಗಿತ್ತು. ಹೀಗಿದ್ದಾಗ ಜನರು ಕೂಡ ತಮ್ಮ ಕೆಲಸ ಬಿಟ್ಟು ಮನೆಯಲ್ಲಿ ಕೂರುವಂತೆ ಆಗಿತ್ತು. ಪ್ರಮುಖವಾದ ವಿಮಾನಯಾನ ಸಂಸ್ಥೆಗಳೇ ವಿಮಾನಗಳ ಹಾರಾಟ ರದ್ದು ಮಾಡಿದ್ದವು.
ಬೂದಿ ಆವರಿಸಿದ ಪ್ರದೇಶಗಳಿಗೆ ತೆರಳುವ ಬಹುತೇಕ ವಿಮಾನಗಳು ಕ್ಯಾನ್ಸಲ್ ಆಗಿವೆ. ಹೀಗಿದ್ದಾಗ ಮಂಗಳವಾರ ರಾತ್ರಿಯಿಂದ ಬೂದಿಯು ಸಂಪೂರ್ಣ ಭಾರತ ಬಿಟ್ಟು ಹೊರಗೆ ಹೋಗಿದ್ದು, ಈಗ ದೆಹಲಿ ಜನ ಒಂದಷ್ಟು ನಿಟ್ಟುಸಿರನ್ನು ಬಿಟ್ಟಿದ್ದಾರೆ. ಆದರೂ ಮಾಲಿನ್ಯ ಮಾತ್ರ ಕಡಿಮೆ ಆಗಿಲ್ಲ, ಇದು ಚಿಂತೆಯನ್ನ ಹೆಚ್ಚು ಮಾಡಿದ್ದು ಮುಂದಿನ ಕೆಲವು ದಿನಗಳ ಕಾಲ ಇದೇ ರೀತಿ ವಾತಾವರಣ ಇರಲಿದೆ ಎನ್ನಲಾಗಿದೆ.
ಸಾಲು ಸಾಲು ಪ್ರಾಕೃತಿಕ ವಿಕೋಪ
ಪ್ರಕೃತಿಗೆ ಮನುಷ್ಯರು ನೀಡುತ್ತಿರುವ ತೊಂದರೆ ಈಗ ನಾನಾ ಸಮಸ್ಯೆಗೆ ದಾರಿ ಮಾಡಿಕೊಡುತ್ತಿದೆ. ಅದರಲ್ಲೂ ಪದೇ, ಪದೇ ಪ್ರಾಕೃತಿಕ ವಿಕೋಪ ಸಂಭವಿಸುತ್ತಿರುವ ಕಾರಣ, ಈಗಾಗಲೇ ಸಾವಿರಾರು ಸಮಸ್ಯೆ ಸುಳಿಗೆ ಸಿಲುಕಿದ್ದಾರೆ ಮಾನವರು. ಇಂತಹ ಪರಿಸ್ಥಿತಿ ಇರುವಾಗ ವಿಪರೀತ ಮಳೆ, ವಿಪರೀತ ಚಳಿ, ವಿಪರೀತ ಬಿಸಿಲು ಮನುಷ್ಯರನ್ನ ಕಾಡುತ್ತಿದೆ. ಇದೇ ವೇಳೆ ತಣ್ಣಗೆ ಮಲಗಿದ್ದ ಜ್ವಾಲಾಮುಖಿ ಕೂಡ ಸ್ಫೋಟವಾಗಿ ಭಯವನ್ನ ಹೆಚ್ಚು ಮಾಡಿದೆ. ಅಲ್ಲದೆ ಮನುಷ್ಯರಿಗೆ ಮತ್ತೊಂದು ಎಚ್ಚರಿಕೆ ಸಂದೇಶ ರವಾನೆಯಾಗಿದೆ.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications