ಪತ್ರಕರ್ತರಿಗೆ ಸುರೇಶ್ ಪ್ರಭು ನೀಡಿದ 'ವರ'
ನವದೆಹಲಿ, ಮಾರ್ಚ್, 16: ಪತ್ರಕರ್ತರಿಗೆ ರೈಲು ಸಂಚಾರ ಇನ್ನು ಮುಂದೆ ಮತ್ತಷ್ಟು ಸರಳವಾಗಲಿದೆ. ಕೇಂದ್ರ ಸರ್ಕಾರ ಬಜೆಟ್ನಲ್ಲಿ ಹೇಳಿದಂತೆ ಪತ್ರಕರ್ತರಿಗೆ ರೈಲಿನಲ್ಲಿ ಇ-ಟಿಕೆಟ್ ಬುಕಿಂಗ್ ಸೌಲಭ್ಯ ನೀಡಿಕೆ ಮಾಡಿದೆ.
ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಯೋಜನೆಗೆ ಚಾಲನೆ ನೀಡಿದ್ದಾರೆ. ಯೋಜನೆ ರಿಯಾಯಿತಿ ಪಾಸ್ ಹೊಂದಿರುವ ಪತ್ರಕರ್ತರಿಗೆ ಅನುಕೂಲ ಮಾಡಿಕೊಡಲಿದೆ. ಈ ಮೊದಲು ಪಿಆರ್ಎಸ್ ಕೌಂಟರ್ಗಳ ಮೂಲಕ ಟಿಕೆಟ್ ಬುಕ್ ಮಾಡಬೇಕಾಗಿತ್ತು. ಇದೀಗ ರೈಲ್ವೆ ಒದಗಿಸಿರುವ ಐಡಿ ಕಾರ್ಡ್ ಸಂಖ್ಯೆ ಬಳಸಿ ಪತ್ರಕರ್ತರು ಆನ್ಲೈನ್ನಲ್ಲಿ ಟಿಕೆಟ್ ಬುಕ್ ಮಾಡಬಹುದು.[ವಾಸನೆ ಬಟ್ಟೆಗಳಿಗೆ ಗುಡ್ ಬೈ: ರೈಲ್ವೆ ಪ್ರಯಾಣ ಮತ್ತಷ್ಟು ಹಿತಕರ]
ರೈಲ್ವೆ ಇಲಾಖೆ ಪತ್ರಕರ್ತರಿಗೆ ನೀಡಿರುವ ಕಾರ್ಡ್ ನ್ನು ಟಿಕೆಟ್ ಬುಕಿಂಗ್ ವೇಳೆ ನೀಡಬೇಕಾಗುತ್ತದೆ. ನೋಂದಣಿ ಸಂಖ್ಯೆಯ ಆಧಾರದಲ್ಲಿ ಟಿಕೆಟ್ ನೀಡಿಕೆ ಮಾಡಲಾಗುತ್ತದೆ.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ಕಿಂಗ್ ಹೇಗೆ?]
ಭಾರತೀಯ ರೈಲ್ವೆ ಸಕಲವನ್ನು ಆನ್ ಲೈನ್ ಮಯ ಮಾಡುತ್ತಿದೆ. ಹೊಸ ಹಾಸಿಗೆ ವಸ್ತ್ರಗಳನ್ನು ನೀಡುತ್ತೇನೆ ಎಂದು ರೈಲ್ವೆ ಇಲಾಖೆ ಹೇಳಿದ್ದು ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡುತ್ತೇನೆ ಎಂದು ತಿಳಿಸಿತ್ತು.