27 ವರ್ಷಗಳ ಶ್ರಮದಿಂದ ಕೆರೆ ನಿರ್ಮಿಸಿ ಹಳ್ಳಿಯ ಬರ ನೀಗಿಸಿದ ಸಾಧಕ
ಛತ್ತೀಸ್ ಗಢ, ಸೆಪ್ಟೆಂಬರ್ 1: ಇಲ್ಲಿನ ಕೊರಿಯಾದಲ್ಲಿರುವ ಚಿರ್ಮಿ ಊರಿಗೆ ಯಾರಾದರೂ ಭೇಟಿ ನೀಡಿದರೆ ಇಲ್ಲೊಂದು ಸುಂದರ ಕೆರೆ ಕಣ್ಸೆಳೆಯುತ್ತದೆ. ಇದೀಗ ಮಳೆ ಬಂದು ಕೆರೆ ತುಂಬಿಕೊಂಡಿದೆ. ಕೆರೆ ಸುತ್ತ ಹಸಿರು ಬೆಳೆದು ನಿಂತಿದೆ. ಇದರ ನೀರಿನಲ್ಲಿ ಹಲವು ಜಲಚರಗಳೂ ಜೀವನ ನಡೆಸುತ್ತಿವೆ.
ನಾವು ಹೇಳಲು ಹೊರಟಿರುವ ಕಥೆ ಕೆರೆಯದ್ದಲ್ಲ. ಇಂಥಹದ್ದೊಂದು ಅತ್ಯದ್ಭುತ ಕೆರೆ ನಿರ್ಮಿಸಿದ ಆಧುನಿಕ ಭಗೀರಥ ಶಾಮ್ಲಾಲ್ ರಾಜ್ವಾಡರದ್ದು.
ಸದ್ಯ ಶಾಮ್ಲಾಲ್ ರಾಜ್ವಾಡರಿಗೆ 42 ವರ್ಷ ವಯಸ್ಸು. ಅವರು ಈ ಕೆರೆ ತೆಗೆಯಲು ಆರಂಭಿಸಿದಾಗ ಅವರಿಗೆ ಕೇವಲ 15 ವರ್ಷ ವಯಸ್ಸು.

27 ವರ್ಷಗಳ ನಿರಂತರ ಕಾಯಕ
ಅವತ್ತಿಂದ ಗುದ್ದಲಿ ಹಿಡಿದು ಕೆರೆ ತೆಗೆಯಲು ಆರಂಭಿಸಿದವರು, ನಿರಂತರ 27 ವರ್ಷ ಅದೇ ಕಾಯಕ ಮುಂದುವರಿಸಿದ್ದಾರೆ. ಇದೀಗ ಕೊನೆಗೂ ಅವರ ಕನಸಿನ ಸುಂದರ ಕೆರೆ ಚಿರ್ಮಿಯಲ್ಲಿ ನಿರ್ಮಾಣವಾಗಿದೆ.

ಬರಗಾಲದಿಂದ ಬೇಗೆಗೆ ಮುಕ್ತಿ
"ನನ್ನ ಊರಿನಲ್ಲಿ ಬರದ ಬೇಗೆ ಜೋರಾಗಿತ್ತು. ಅದಕ್ಕಾಗಿ ಕೆರೆ ಅಗೆಯಲು ಆರಂಭಿಸಿದೆ. 27 ವರ್ಷ ನಾನು ಶ್ರಮಪಟ್ಟಿದ್ದಕ್ಕೆ ಇವತ್ತು ಕೆರೆ ನಿರ್ಮಾಣವಾಗಿದೆ. ಇದಕ್ಕೆ ನನಗೆ ಯಾರೂ ಸಹಾಯ ಮಾಡಿಲ್ಲ. ಕೆರೆ ನಿರ್ಮಿಸುವ ಈ ಕೆಲಸವನ್ನು ಜೀವ ಇರುವವರೆಗೂ ಮುಂದುವರೆಸುತ್ತೇನೆ," ಎಂದು ಹೆಮ್ಮೆಯಿಂದ ಹೇಳುತ್ತಾರೆ ಶ್ಯಾಮ್ಲಾಲ್ ರಾಜ್ವಾಡ್.

ಆಧುನಿಕ ಭಗೀರಥನಿಗೆ ಸರಕಾರಿ ಗೌರವ
ಶ್ಯಾಮ್ಲಾಲ್ ರಾಜ್ವಾಡ್ ಏಕಾಂಗಿಯಾಗಿ ಕೆರೆ ನಿರ್ಮಿಸಿದ್ದು ಸರಕಾರಿ ಅಧಿಕಾರಿಗಳ ಗಮನವನ್ನೂ ಸೆಳೆದಿದೆ. ಇದೀಗ ಅಲ್ಲಿನ ಜಿಲ್ಲಾಧಿಕಾರಿ ನಾವು ಅವರಿಗೆ ಸರಕಾರಿ ಸೌಲಭ್ಯಗಳನ್ನು ನೀಡುತ್ತಿವೆ. ನಾವು ಅವರ ಹೆಸರನ್ನು ತಕ್ಷಣ ಸರಕಾರಕ್ಕೆ ಶಿಫಾರಸ್ಸು ಮಾಡುತ್ತೇನೆ ಎಂದಿದ್ದಾರೆ.

ಆಗದು ಎಂದು ಕೈಕಟ್ಟಿ ಕುಳಿತರೆ
ಎಲ್ಲವೂ ಸರಕಾರವೇ ಮಾಡಬೇಕು ಎಂದು ಆಶಿಸುತ್ತಾ ಕೂರುವವರಿಗೆ ಶ್ಯಾಮ್ಲಾಲ್ ರಾಜ್ವಾಡ್ ಬಿಸಿ ಮುಟ್ಟಿಸಿದ್ದಾರೆ. ಏಕಾಂಗಿಯಾಗಿ ಕೆರೆ ನಿರ್ಮಸಿ ಸಾಧನೆ ಮೆರೆದಿದ್ದಲ್ಲದೆ, ಕೈಕಟ್ಟಿ ಕೂತರೆ ಏನೂ ಆಗುವುದಿಲ್ಲ ಎಂಬ ಸಂದೇಶವನ್ನೂ ಸಾರಿದ್ದಾರೆ.
-
Property: ಕಟ್ಟಡ ಮಾಲೀಕರಿಗೆ ಬಂಪರ್ ಆಫರ್: ಶೇ.15ರವರೆಗಿನ ನಿಯಮ ಉಲ್ಲಂಘನೆ ಸಕ್ರಮಕ್ಕೆ ಜಿಬಿಎ ಅವಕಾಶ! -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications