Bank Holidays: ಮುಂದಿನ 09 ದಿನ ಬ್ಯಾಂಕ್ಗಳಿಗೆ ಸಾಲು ಸಾಲು ರಜೆ: ಯಾವ ದಿನಾಂಕ? ಕಾರಣಗಳು
Bank Holidays Updates: ಹಣಕಾಸು ವಹೀವಾಟು ಸೇರಿದಂತೆ ಬ್ಯಾಂಕಿಂಗ್ ಯಾವುದೇ ಕೆಲಸಗಳು ಇದ್ದರೂ ಸಹಿತ ಬೇಗ ಮುಗಿಸಿಕೊಳ್ಳುವುದು ಒಳಿತು. ಏಕೆಂದರೆ ಸಾಲು ಸಾಲು ರಜೆಗಳು ಎದುರಾಗಲಿದ್ದು, ಬ್ಯಾಂಕ್ಗಳು ಕೆಲವು ದಿನಗಳವರೆಗೆ ಬಂದ್ ಆಗಲಿವೆ. ಮುಂದಿನ ಸುಮಾರು 09 ದಿನಗಳ ಕಾಲ ಬ್ಯಾಂಕ್ಗಳು ಕಾರ್ಯಾಚರಣೆ ಮಾಡುವುದಿಲ್ಲ. ಅದಕ್ಕೆ ಕಾರಣ, ರಜಾದಿನಗಳು, ದಿನಾಂಕದ ವಿವರ ಇಲ್ಲಿದೆ.
ಏಪ್ರಿಲ್ ಅಂತ್ಯದಲ್ಲಿ ಹಾಗೂ ಮೇ ತಿಂಗಳ ಆರಂಭದಲ್ಲಿ ನಿರಂತರ ರಜೆಗಳು ಎದುರಾಗಲಿವೆ. ಏಪ್ರಿಲ್ 26ರಿಂದ ಮುಂದಿನ ತಿಂಗಳ ಮೇ 12ರ ಮಧ್ಯದಲ್ಲಿ ಬ್ಯಾಂಕುಗಳು ಒಟ್ಟು 9 ದಿನಗಳವರೆಗೆ ಮುಚ್ಚಲಿವೆ. ಈ ರಜೆ ಪಟ್ಟಿಯಲ್ಲಿ ಎರಡು ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರ ಇವೆ.

ಬುದ್ಧ ಪೂರ್ಣಿಮಾ ಮತ್ತು ರವೀಂದ್ರನಾಥ ಟ್ಯಾಗೋರ್ ಜಯಂತಿ ಸೇರಿದಂತೆ ಇತರ ಹಬ್ಬಗಳ ಆಚರಣೆ ನಡೆಯಲಿದೆ. ಈ ಸಂಬಂಧ ಬ್ಯಾಂಕ್ ರಜೆ ಪಡೆಯಲಿದ್ದು, ನಿಮ್ಮ ಪಾಸ್ಬುಕ್, ಇತರ ಹಣಕಾಸು ವಹೀವಾಟ, ಖಾತೆ ತೆರೆಯುವುದು ಸೇರಿದಂತೆ ಇನ್ನಿತರ ವಹೀವಾಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಈ ರಜೆಗಳು ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಆಗುವುದಿಲ್ಲ. ಚೆಕ್ಬುಕ್ ಪಾಸ್ಬುಕ್ ಸೇರಿದಂತೆ ಬ್ಯಾಂಕಿಂಗ್ ಸಂಬಂಧಿತ ಕೆಲಸಗಳ ಮೇಲೆ ಪರಿಣಾಮ ಬೀರಬಹುದು. ಆದಾಗ್ಯೂ, ನೀವು ಆನ್ಲೈನ್ ಸೇವೆಗಳನ್ನು ಪಡೆಯಬಹುದು.
ದೇಶದಲ್ಲಿ ಬ್ಯಾಂಕ್ ರಜಾದಿನಗಳಲ್ಲಿ ರಾಷ್ಟ್ರೀಯ ರಜಾದಿನಗಳು (ಗೆಜೆಟೆಡ್ ರಜಾದಿನಗಳು) ಹಾಗೂ ಸರ್ಕಾರಿ ರಜಾದಿನಗಳು ಸೇರಿದಂತೆ ಪಟ್ಟಿ ಸಿದ್ಧಪಡಿಸಲಾಗಿರುತ್ತದೆ. ಎಲ್ಲ ರಾಜ್ಯಗಳಲ್ಲಿ ಬ್ಯಾಂಕ್ ರಜೆಗಳು ಒಂದೇ ರೀತಿಯಾಗಿರುವುದಿಲ್ಲ. ಅಲ್ಲಿನ ಹಬ್ಬ ಹರಿದಿನ, ಆಚರಣೆ ನೋಡಿಕೊಂಡು ರಜೆ ಇರುತ್ತವೆ. ರಾಷ್ಟ್ರೀಯ ರಜೆಗಳು ಎಲ್ಲ ಬ್ಯಾಂಕ್ಗಳಿಗೆ ಅನ್ವಯಿಸುತ್ತವೆ. ಪ್ರಾದೇಶಿಕ ಬ್ಯಾಂಕ್ ರಜೆಗಳು ಆಯಾ ರಾಜ್ಯಗಳಿಗೆ ಬಿಟ್ಟದ್ದಾಗಿರುತ್ತದೆ. 09 ದಿನಗಳ ಬ್ಯಾಂಕ್ ರಜೆ ಪಟ್ಟಿ ವಿವರ ಹೀಗಿದೆ.

ಬ್ಯಾಂಕ್ ಏಪ್ರಿಲ್-ಮೇ ರಜಾ ದಿನ ಪಟ್ಟಿ
ಏಪ್ರಿಲ್ 26 : 4ನೇ ಶನಿವಾರ
ಏಪ್ರಿಲ್ 27: ಭಾನುವಾರ
ಏಪ್ರಿಲ್ 29: ಪರಶುರಾಮ ಜಯಂತಿ (ಶಿಮ್ಲಾ)
ಏಪ್ರಿಲ್ 30: ಅಕ್ಷಯ ತೃತೀಯ (ಬೆಂಗಳೂರು)
ಮೇ 4: ಭಾನುವಾರ
ಮೇ 7 : ಗುರು ರವೀಂದ್ರನಾಥ ಟ್ಯಾಗೋರ್ ಜಯಂತಿ
ಮೇ 10 : 2ನೇ ಶನಿವಾರ
ಮೇ 11: ಭಾನುವಾರ
ಮೇ 12 ಬುದ್ಧ ಪೂರ್ಣಿಮಾ
ಈ ಮೇಲಿನ ರಜೆ ದಿನಗಳಂತೆ ಸಾರ್ವಜನಿಕರು ನೀವು ಆನ್ಲೈನ್ ಸೇವೆಗಳನ್ನು ಪಡೆಯಬಹುದಾಗಿದೆ. ಎಂದಿನಂತೆ ಯುಪಿಐ, ಮೊಬೈಲ್ ಬ್ಯಾಂಕಿಂಗ್, ಇಂಟರ್ನೆಟ್ ಬ್ಯಾಂಕಿಂಗ್ ಸೇರಿ ಡಿಜಿಟಲ್ ಎಲ್ಲ ಸೇವೆ ಇರುತ್ತದೆ. ನೀವು ಹಣ ವರ್ಗಾವಣೆಗೆ, ಇತರರಿಂದ ಹಣ ಜಮೆ ಮಾಡಿಸಿಕೊಳ್ಳಲು ಯುಪಿಐ ಆಧಾರಿತ ಹಣಕಾಸು ಆಪ್ ಬಳಸಬೇಕಿರುತ್ತದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications