Get Updates
Get notified of breaking news, exclusive insights, and must-see stories!

Air India Express Flight 141 ಜನರಿದ್ದ ವಿಮಾನದಲ್ಲಿ ದಿಢೀರ್‌ ಪ್ರಾಬ್ಲಂ, 3 ತಾಸು ಗಾಳಿಯಲ್ಲೇ ಹಾರಾಟ ಆಮೇಲೇನಾಯ್ತು ?

ಭಾರತದಲ್ಲಿ ಶುಕ್ರವಾರ ಭಾರೀ ವಿಮಾನ ಅವಘಡವೊಂದು ಸಂಭವಿಸಿದೆ. ಇದರಿಂದ ಬರೋಬ್ಬರಿ ಎರಡು ಗಂಟೆಗೂ ಹೆಚ್ಚು ಅವಧಿ ವಿಮಾನ ನಿಲ್ದಾಣದ ಮೇಲೆ ಗಿರಕಿ ಹೊಡೆದಿರುವ ಸಹ ನಡೆದಿದೆ. ಭಾರತದಲ್ಲಿ ಸಂಭವಿಸ ಬಹುದೊಡ್ಡ ದುರಂತ ಕೂದಲೆಳೆಯಲ್ಲಿ ಸಂಭವಿಸಿದ್ದರೂ ಅದರ ಭಯಾನಕತೆಯಿಂದ ಜನ ಇನ್ನೂ ಹೊರಗೆ ಬಂದಿಲ್ಲ. ನೆರೆಯ ತಮಿಳುನಾಡಿನಲ್ಲಿ ಈ ಅವಘಡ ಸಂಭವಿಸಿದೆ. ವಿಮಾನದಲ್ಲಿದ್ದ 141 ಜನ...

ದೇಶದಲ್ಲಿ ಬಹುದೊಡ್ಡ ವಿಮಾನದ ದುರಂತವೊಂದು ತಪ್ಪಿದೆ. ಆದರೆ, ಭಾರೀ ಆತಂಕವನ್ನೇ ಅದು ಸೃಷ್ಟಿ ಮಾಡಿದೆ. ಭಾರತದಿಂದ ಶಾರ್ಜಾಕ್ಕೆ ಹೋಗುತ್ತಿದ್ದ ಏರ್‌ ಇಂಡಿಯಾದಲ್ಲಿ ಈ ಭಾರೀ ಅವಘಡ ಸಂಭವಿಸಿದೆ. ವಿಮಾನದಲ್ಲಿ ಏಕಾಏಕಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದು, ಈ ವಿಮಾನವನ್ನು ತುರ್ತು ಭೂಸ್ಪರ್ಶ (ತುರ್ತು ಲ್ಯಾಂಡಿಂಗ್‌) ಮಾಡಿರುವುದು ವರದಿಯಾಗಿದೆ. ಆದರೆ, ಈ ರೀತಿ ಏಕಾಏಕಿ ಲ್ಯಾಂಡಿಂಗ್‌ (ಎಮರ್ಜೆನ್ಸಿ) ಮಾಡುವುದಕ್ಕಿಂತಲೂ ಮುಂಚೆ ಅಂದಾಜು ಎರಡು ಗಂಟೆಗಳಿಗೂ ಹೆಚ್ಚು ಕಾಲ ಗಾಳಿಯಲ್ಲೇ ಗಿರಕಿಯಾಕಿರುವುದು ವರದಿಯಾಗಿದೆ. ತಮಿಳುನಾಡಿನ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ತಿರುಚ್ಚಿ ನಗರದಲ್ಲಿ ಈ ಘಟನೆ ನಡೆದಿದ್ದು, ದೇಶದಾದ್ಯಂತ ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ.

A sudden problem in a plane with 141 people 2 hours of flying in the air

ಈ ವಿಮಾನವು ತುರ್ತು ಭುಸ್ಪರ್ಶ ಮಾಡುವ ಮುನ್ನ ಸುಮಾರು ಎರಡು ಗಂಟೆಗೂ ಹೆಚ್ಚಿನ ಅವಧಿ ತಮಿಳುನಾಡಿನ ತಿರುಚ್ಚಿ ನಗರದ ಆಕಾಶದಲ್ಲಿ ಗಿರಕಿಹೊಡೆದಿದೆ. ಈ ಸಂದರ್ಭದಲ್ಲಿ ವಿಮಾನದಲ್ಲಿ ಇದ್ದವರು ಭಯಭೀತರಾಗಿದ್ದಾರೆ. ವಿಮಾನದಲ್ಲಿ ಚಿರಾಟ, ಆತಂಕ ಮನೆ ಮಾಡಿತ್ತು ಎಂದು ಪ್ರಯಾಣಿಕರು ದುಗುಡದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ವಿಮಾನ ಈ ರೀತಿ ಆದ ಸಂದರ್ಭದಲ್ಲಿ ಜನ ಭಾರೀ ಆತಂಕಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ. ತಿರುಚಿರಾಪಳ್ಳಿಯಿಂದ ಶಾರ್ಜಾಗೆ ಹೋಗುತ್ತಿದ್ದ ಏರ್ ಇಂಡಿಯಾ ಫ್ಲೈಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು.

ಏರ್‌ ಇಂಡಿಯಾದ ವಿಮಾನ IX613 ಶುಕ್ರವಾರ 141 ಜನ ಪ್ರಯಾಣಿಕರನ್ನು ಹೊತ್ತು ಸಂಜೆ ವೇಳೆ 5:45ಕ್ಕೆ ತಮಿಳುನಾಡಿನ ತಿರುಚ್ಚಿ ವಿಮಾನ ನಿಲ್ದಾಣದಿಂದ ತನ್ನ ಹಾರಾಟನ್ನು ಅಂದರೆ, ಟೇಕಾಫ್ ಆಗಿತ್ತು. ಆದರೆ, ವಿಮಾನ ಹಾರಾಟವಾದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ವಿಮಾನದ ಸಿಬ್ಬಂಇ ಎಮರ್ಜೆನ್ಸಿ ಘೋಷಿಸಿದ್ದಾರೆ. ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನದ ಪೈಲಟ್‌ ಹಾಗೂ ಸಿಬ್ಬಂದಿ ಅಲರ್ಟ್‌ ಆಗಿದ್ದಾರೆ.

ಅಂದಾಜು ಮೂರು ಗಂಟೆಗಳಿಗೂ ಹೆಚ್ಚು ಕಾಲ ಆಕಾಶದಲ್ಲೇ ವಿಮಾನ ಗಿರಗಿಟ್ಲೆ (ಗಿರಕಿ) ಸುತ್ತಿದೆ. ಆ ಮೂರು ತಾಸುಗಳನ್ನು ವಿಮಾನದಲ್ಲಿ 141 ಜನ ಜೀವವನ್ನು ಕೈಯಲ್ಲೇ ಹಿಡಿದಿದ್ದಾರೆ. ಈ ಬೆಳವಣಿಗೆಗಳ ನಂತರ ತಿರುಚಿರಾಪಳ್ಳಿ ವಿಮಾನ ನಿಲ್ದಾಣದಲ್ಲಿ ಸೇಫ್ ಲ್ಯಾಂಡಿಂಗ್ ಮಾಡಲಾಗಿದೆ.

20ಕ್ಕೂ ಹೆಚ್ಚು ಆಂಬ್ಯುಲೆನ್ಸ್‌: ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ತುರ್ತು ಭೂಸ್ಪರ್ಶದ ಸುದ್ದಿಗಳು ತಿಳಿಯುತ್ತಿದ್ದಂತೆಯೇ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಹೈಅಲರ್ಟ್‌ ಘೋಷಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿನ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರು. ತಿರುಚ್ಚಿಯಿಂದ ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲರೂ ಆಘಾತಕ್ಕೆ ಒಳಗಾಗಿದ್ದರು. ವಿಮಾನದಲ್ಲಿ ಡ್ರಾಲಿಕ್ ವೈಫಲ್ಯ ಅಂದರೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ, ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಸುವ ಮೊದಲು ಅದರಲ್ಲಿ ಇದ್ದ ಇಂಧನವನ್ನು ಖಾಲಿ ಮಾಡಲಾಗಿದೆ. ಇದರಿಂದ ಭಾರೀ ದೊಡ್ಡ ಅನಾಹುತವನ್ನೇ ತಪ್ಪಿಸಲಾಗಿದೆ. ಇನ್ನು ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 20ಕ್ಕೂ ಅಧಿಕ ಆಂಬ್ಯುಲೆನ್ಸ್‌ ಹಾಗೂ ಅಗ್ನಿಶಾಮಕ ವಾಹನಗಳನ್ನು ವಿಮಾನ ನಿಲ್ದಾಣದಲ್ಲಿ ಕಾಯ್ದಿರಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+