39 ಹೆಂಡತಿಯರು, 64 ಮಕ್ಕಳು, 14 ಸೊಸೆಯಂದಿರು, 40ಕ್ಕೂ ಹೆಚ್ಚು ಮೊಮ್ಮಕ್ಕಳನ್ನೊಂದಿದ ಭಾರತದ ಈ ವ್ಯಕ್ತಿ
ಇಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳು ಕಂಡುಬರುವುದು ತೀರಾ ಕಡಿಮೆ. ಏನಿಲ್ಲ ಅಂದರೂ ಒಂದು ಕುಟುಂಬದಲ್ಲಿ 4-5 ಜನ ವಾಸ ಮಾಡುತ್ತಾರೆ. ಅದರು ಗರಿಷ್ಠ 6 ಜನ ಆಗಿರುತ್ತಾರೆ. ಆದರೆ ಭಾರತದ ಈಶಾನ್ಯ ರಾಜ್ಯವಾದ ಮಿಜೋರಾಂನಲ್ಲಿರುವ ಬಕ್ತಾಂಗ್ ಎಂಬ ಗ್ರಾಮದಲ್ಲಿ ಒಂದೇ ಕುಟುಂದಲ್ಲಿ ಒಟ್ಟು 181 ಸದಸ್ಯರು ಇದ್ದಾರೆ. ಇದು ವಿಶ್ವದಲ್ಲೇ ಅತಿ ದೊಡ್ಡ ಕುಟುಂಬವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಈ ಕುಟುಂಬದ ಯಜಮಾನರು ಯಾರು ಹಾಗೂ ಸಂಪೂರ್ಣ ಹಿನ್ನೆಲೆ ಏನು ಎಂದು ಇಲ್ಲಿ ತಿಳಿಯಿರಿ.
ಈ ಅತಿ ದೊಡ್ಡ ಕುಟುಂಬದ ಜವಾಬ್ದಾರಿಯನ್ನು ಜಿಯೋನಾ ಚಾನಾ ಎಂಬುವರು ಹೊತ್ತಿದ್ದರು. ಈ ಚಾನ ಕ್ರಿಶ್ಚಿಯನ್ ಧರ್ಮದ ಒಂದು ಪಂಗಡದ ನಾಯಕ. ಇದು ಪುರುಷರಿಗೆ ಬಹುಪತ್ನಿತ್ವವನ್ನು ಅಭ್ಯಾಸ ಮಾಡಲು ಅವಕಾಶ ನೀಡುತ್ತದೆ. ಹೀಗಾಗಿ ಇವರ ಕುಟುಂಬವೂ ಕೂಡ ದೊಡ್ಡದಾಗಿ ಬೆಳೆದಿತ್ತು.

ಇನ್ನು ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳಿಂದಾಗಿ ಜಿಯೋನಾ ಚಾನಾ 2011ರಲ್ಲಿ 76ನೇ ವಯಸ್ಸಿನಲ್ಲಿ ನಿಧನರಾದರು. ಮಾಹಿತಿಯ ಪ್ರಕಾರ, ಇದೀಗ ಚಾನಾ ನಾಲ್ಕು ಅಂತಸ್ತಿನ ಮನೆಯಲ್ಲಿ ತನ್ನ 39 ಹೆಂಡತಿಯರು, 64 ಮಕ್ಕಳು ಮತ್ತು 14 ಸೊಸೆಯಂದಿರು ಮತ್ತು 40ಕ್ಕೂ ಅಧಿಕ ಮೊಮ್ಮಕ್ಕಳೊಂದಿಗೆ 181 ಸದಸ್ಯರೊಂದಿಗೆ ಕುಟುಂಬವು ಒಟ್ಟಾಗಿ ವಾಸಿಸುತ್ತಿದೆ.
ಇಲ್ಲಿಯವರೆಗೆ, ಚಾನಾ ಅವರ ಕುಟುಂಬವು ಒಟ್ಟಿಗೆ ವಾಸಿಸುತ್ತಿದೆ. ಸುಮಾರು 100 ಕೊಠಡಿಗಳಿರುವ ನಾಲ್ಕು ಅಂತಸ್ತಿನ ಮನೆಯಲ್ಲಿ ಈ ಅತೀ ದೊಡ್ಡ ಕುಟುಂಬ ವಾಸಿಸುತ್ತಿದೆ. ಕಾಲಾನಂತರದಲ್ಲಿ, ಚಾನಾ ಅವರ ಮನೆ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಝಿಯೋನಾ ಚಾನಾ 1942ರಲ್ಲಿ ಜಿಯೋನಾ ತಂದೆಯಿಂದ ಸ್ಥಾಪಿಸಲ್ಪಟ್ಟ "ಚಾನಾ" ಎಂಬ ಹೆಸರಿನ ಪಂಥಕ್ಕೆ ಸೇರಿದವರು ಮತ್ತು ನೂರಾರು ಕುಟುಂಬಗಳ ಸದಸ್ಯತ್ವವನ್ನು ಹೊಂದಿದ್ದಾರೆ.
ಜಿಯೋನಾ ಚಾನಾ ತನ್ನ ಮೊದಲ ಹೆಂಡತಿಯನ್ನು ಮದುವೆಯಾದಾಗ ಅವರಿಗೆ ಕೇವಲ 17 ವರ್ಷ. ಚನಾ ಒಮ್ಮೆ ಒಂದು ವರ್ಷದಲ್ಲಿ 10 ಮಹಿಳೆಯರನ್ನು ಮದುವೆಯಾಗಿದ್ದರಂತೆ. ವರದಿಯ ಪ್ರಕಾರ, ಪತ್ನಿಯರು ಚಾನಾ ಅವರ ಮಲಗುವ ಕೋಣೆಯ ಬಳಿ ವಸತಿ ನಿಲಯವನ್ನು ಹಂಚಿಕೊಳ್ಳುತ್ತಿದ್ದರು. ಈ ದೊಡ್ಡ ಕುಟುಂಬವು ತಮ್ಮ ದೊಡ್ಡ ಡೈನಿಂಗ್ ಹಾಲ್ನಲ್ಲಿ ಊಟವನ್ನು ಮಾಡಲು ಒಟ್ಟಿಗೆ ಕುಳಿತುಕೊಳ್ಳುತ್ತಿದ್ದರು.
ಅವರ ಕುಟುಂಬವು 2011ರಲ್ಲಿ ವರ್ಲ್ಡ್ ರೆಕಾರ್ಡ್ ಅಕಾಡೆಮಿ ಮತ್ತು ನಂತರ 2019ರಲ್ಲಿ ಲಂಡನ್ ವರ್ಲ್ಡ್ ರೆಕಾರ್ಡ್ಸ್ನಿಂದ ವಿಶ್ವದ 'ದೊಡ್ಡ ಕುಟುಂಬ' ಎಂದು ಪ್ರಖ್ಯಾತಿ ಪಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
-
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ












Click it and Unblock the Notifications