ಒಸಾಮಾ ಬಿನ್ ಲಾಡೆನ್ ಸಂಹಾರಕ್ಕೆ ಬಳಸಿದ್ದ ಶ್ವಾನದ ತಳಿ ಈಗ ದಾವಣಗೆರೆಯಲ್ಲಿ: ಇದರ ವಿಶೇಷತೆಗಳು ಏನು ಗೊತ್ತಾ?, ಇಲ್ಲಿದೆ ವಿವರ
ದಾವಣಗೆರೆ, ಆಗಸ್ಟ್, 17: ಆಗಿನ ಕಾಲದಲ್ಲಿ ಭಯೋತ್ಪಾದನಾ ಚಟುವಟಿಕೆ ಮೂಲಕ ವಿಶ್ವವನ್ನೇ ನಡುಗಿಸಿದ್ದ ಉಗ್ರ ಒಸಾಮಾ ಬಿನ್ ಲಾಡೆನ್ನ ಪತ್ತೆಗೆ ಅಮೆರಿಕಾ ಪಟ್ಟ ಶ್ರಮ ಅಷ್ಟಿಷ್ಟಲ್ಲ. ಆದರೆ ಕೊನೆಗೆ ಈತನ ಪತ್ತೆಗೆ ಸಹಕಾರಿಯಾಗಿದ್ದೇ ಈ ಚಾಣಕ್ಷ ಶ್ವಾನ. ಈ ಶ್ವಾನ ಇದೀಗ ಬೆಣ್ಣೆನಗರಿ ದಾವಣಗೆರೆಯಲ್ಲಿದೆ. ಇದರ ಕಾರ್ಯಚಟುವಟಿಗೆ ಹೇಗಿತ್ತು ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.
ಅಮೆರಿಕಾ ದೇಶವು ಈತನ ಸಂಹಾರಕ್ಕೆ ಮಾಡಿದ ಪ್ರಯತ್ನಗಳು ಅಷ್ಟಿಷ್ಟಲ್ಲ. ಆಲ್ ಖೈದಾ ಎಂಬ ಉಗ್ರ ಸಂಘಟನೆಯ ಪ್ರಮುಖ ರೂವಾರಿಯಾದ ಲಾಡೆನ್ ಬಿಲ ಹುಡುಕಲು ಅಮೆರಿಕಾ ಸತತ ಪರಿಶ್ರಮ ಹಾಕಿತ್ತು. ಬಳಿಕ ಆತನನ್ನು ಹತ್ಯೆ ಮಾಡಲಾಗಿತ್ತು. ಈ ವಿಚಾರ ಈಗ ಯಾಕೆ ಅಂತೀರಾ. ವಿಶ್ವದ ಅಪಾಯಕಾರಿ ಉಗ್ರನ ಪತ್ತೆಗೆ ಚಾಣಾಕ್ಷ ಶ್ವಾನ ಬಳಕೆಯಾಗಿತ್ತು. ಆ ಶ್ವಾನ ಈಗ ದಾವಣಗೆರೆಯಲ್ಲಿ ಅಪರಾಧ ಚಟುವಟಿಕೆ ನಡೆಸುವವರ ಎದೆ ನಡುಗುವಂತೆ ಮಾಡಿದೆ.

ಒಸಾಮಾ ಬಿನ್ ಲಾಡೆನ್ ಹತ್ಯೆ ಮಾಡಲು ಅಮೆರಿಕಾ ನಡೆಸಿದ ತಂತ್ರಗಳು ಒಂದೆರಡಲ್ಲ. ಬಳಿಕ ಆತ ಅಡಗಿಕೊಂಡಿದ್ದ ಬಿಲ ಹುಡುಕಲು ಅಮೆರಿಕಾ ಈ ಶ್ವಾನ ಬಳಕೆ ಮಾಡಿತ್ತು. ಕೇವಲ ಅಮೆರಿಕಾ ಮಾತ್ರವಲ್ಲ, ಬೇರೆ ಬೇರೆ ರಾಷ್ಟ್ರಗಳಲ್ಲಿಯೂ ಜಗದ್ವಿಖ್ಯಾತಿ ಹೊಂದಿದೆ ಈ ಡಿಟೆಕ್ಟಿವ್ ಶ್ವಾನ. ದಾವಣಗೆರೆಗೆ ಬಂದಿರುವ ಈ ತಳಿಯ ಶ್ವಾನ ಶುರುವಿನಿಂದಲೇ ಕ್ರಿಮಿನಲ್ಗಳ ಹೆಡೆಮುರಿ ಕಟ್ಟಲು ಪೊಲೀಸರಿಗೆ ಸೇತುವೆಯಾಗಿ ನಿಂತಿದೆ.
2001ರ ಸೆಪ್ಟಂಬರ್ 11ರಂದು ನ್ಯೂಯಾರ್ಕ್ನ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರದ ಮೇಲೆ ವಿಮಾನ ದಾಳಿ ನಡೆದಾಗ ವಿಶ್ವವೇ ಬೆಚ್ಚಿಬಿದ್ದಿತ್ತು. ಆ ಬಳಿಕ ಅಮೆರಿಕಾ ಉಗ್ರನ ಸಂಹಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿತ್ತು. ಈ ಪ್ಲಾನ್ನಲ್ಲಿ ಶ್ವಾನವೊಂದು ಬಳಕೆಯಾಗಿತ್ತು. ಪಾಕಿಸ್ತಾನದ ಅಬೋಟಾಬಾದ್ನಲ್ಲಿನ ಕಾಂಪೌಂಡ್ನಲ್ಲಿ ಬಿನ್ ಲಾಡೆನ್ ಹತ್ಯೆಗೀಡಾಗಿದ್ದ. ಆದರೆ ಈತನ ಪತ್ತೆ ಕಾರ್ಯದಲ್ಲಿ ಈ ಶ್ವಾನದ ಪರಿಶ್ರಮ ತಳ್ಳಿ ಹಾಕುವಂತಿಲ್ಲ.
ತುಂಗಾ ಸ್ಥಾನ ತುಂಬ್ತಿರೋ ತಾರಾ
ಅಂದಹಾಗೆ, ದಾವಣಗೆರೆಯಲ್ಲಿ ಅಪರಾಧಿಗಳನ್ನು ಹಿಡಿಯಲು ಇದನ್ನು ಬಳಸಿಕೊಳ್ಳಲಾಗುತ್ತಿದೆ. ಈ ಶ್ವಾನಕ್ಕೆ ತಾರಾ ಎಂದು ಹೆಸರು ಇಡಲಾಗಿದೆ. ತುಂಗಾ ನಿಧನದ ಬಳಿಕ ಆ ಸ್ಥಾನ ತುಂಬುವ ಎಲ್ಲಾ ಲಕ್ಷಣ ಗೋಚರಿಸಿದೆ. ಹಲವಾರು ಪ್ರಕರಣಗಳನ್ನು ಭೇದಿಸಿದ್ದ ತುಂಗಾ ಸಾವಿನ ಬಳಿಕ ಪೊಲೀಸ್ ಶ್ವಾನ ಪಡೆಗೆ ಚಾಣಾಕ್ಷ ಶ್ವಾನ ಬೇಕಿತ್ತು. ಬಂದ ಕಡಿಮೆ ಅವಧಿಯಲ್ಲಿ 14 ಪ್ರಕರಣಗಳಲ್ಲಿ ಆರೋಪಿಗಳ ಸುಳಿವು ನೀಡಿ ಶಹಬ್ಬಾಸ್ ಎನಿಸಿಕೊಂಡಿದೆ.
8 ಕಿ.ಮೀ. ಕ್ರಮಿಸಿ ಕೊಲೆಗಾರನನ್ನ ಪತ್ತೆಹಚ್ಚಿದ್ದ ತಾರಾ
ಕಳೆದ ಆಗಸ್ಟ್ 7ರಂದು ರಾಮನಗರದಲ್ಲಿ ತನ್ನ ಸ್ನೇಹಿತ ನರಸಿಂಹ ಎಂಬಾತನನ್ನು ಶಿವಯೋಗೀಶ್ ಅಲಿಯಾಸ್ ಯೋಗಿ ಎಂಬಾತ ಕೊಂದಿದ್ದ. ಆತನ ಸುಳಿವು ನೀಡಿದ್ದೇ ತಾರಾ. ಸುಮಾರು 8 ಕಿಲೋ ಮೀಟರ್ವರೆಗೆ ಸಂಚರಿಸಿ ಆರೋಪಿಯನ್ನು ಬಂಧಿಸಲು ಪೊಲೀಸ್ ಇಲಾಖೆಗೆ ತಾರಾ ಸಹಾಯ ಮಾಡಿತ್ತು. ಕೊಲೆಗೈದಿದ್ದಾತನ ಮನೆ ಬಳಿ ಹೋಗಿ ನಿಂತಿತ್ತು. ಶಿವಯೋಗೀಶ್ನನ್ನು ವಿಚಾರಣೆಗೊಳಪಡಿಸಿದಾಗ ಹಣಕಾಸಿನ ವಿಚಾರಕ್ಕೆ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು.
ಬೆಲ್ಜಿಯನ್ ಮಾಲಿನೋಯಿಸ್ ಈ ಶ್ವಾನದ ಹೆಸರು. ಬೆಲ್ಜಿಯಂ ಮೂಲದ ನಾಲ್ಕು ದನ ಕುರಿ, ನಾಯಿ, ನರಿ ಕಾವಲುಗಳಲ್ಲಿ ಒಂದು. ಬೆಲ್ಜಿಯಂನ ಮಲಿನ್ ನಗರದಲ್ಲಿ ಈ ತಳಿ ಅಭಿವೃದ್ಧಿಪಡಿಸಲಾಯಿತು. ಎಕೆಶಿ ಅರ್ಡಿನ್ ಗ್ರೂಪ್ಗೂ ಸೇರಿಸಲಾಗಿದೆ. ಬೆಲ್ಜಿಯಂ ಫೀಡಿಂಗ್ ವರ್ಕಿಂಗ್ ಡಾಗ್ ಆಗಿದ್ದು, ಅಧಿಕ ಶಕ್ತಿಯ ಅಗತ್ಯತೆ ಹಾಗೂ ಉತ್ತಮ ದರ್ಜೆ ಆಹಾರ ಪೂರೈಕೆ ಬೇಕೇ ಬೇಕು.
ಈ ಶ್ವಾನಕ್ಕೆ ಬೇಕಾಗುವ ಪ್ರೋಟೀನ್
ಅಸೋಸಿಯೇಷನ್ ಆಫ್ ಅಮೆರಿಕನ್ ಫೀಡ್ ಕಂಟ್ರೋಲ್ ಅಫಿಶಿಯಲ್ ಪ್ರಕಾರ ಈ ಶ್ವಾನಕ್ಕೆ ಅಧಿಕ ಪ್ರೋಟಿನ್ ಅಗತ್ಯವಾಗಿದೆ. ಸ್ನಾಯು ಮತ್ತು ಮೂಳೆ ಬಲವರ್ಧನೆ, ಕೊಬ್ಬು, ಕಾರ್ಬೋಹೈಡ್ರೆಟ್ಸ್ ಸೇರಿದಂತೆ ವಿಟಮಿನ್ ಅಗತ್ಯವಾಗಿ ಬೇಕೆಬೇಕು.
ಬೆಲ್ಜಿಯನ್ ಮಾಲಿನೋಯಿಸ್ ಆ್ಯಕ್ಟಿವ್ ಡಾಗ್. ಯಾವಾಗಲೂ ಕ್ರಿಯಾಶೀಲವಾಗಿರುತ್ತವೆ. ಅಪಾರ್ಟ್ಮೆಂಟ್ ವಾಸಕ್ಕೆ ಯೋಗ್ಯವಾಗಿಲ್ಲ. ಪ್ರತಿದಿನ ವ್ಯಾಯಾಮ ಅಗತ್ಯ. ನಿಗದಿತ ವ್ಯಾಯಾಮ, ಆಹಾರದಲ್ಲಿ ನಿಯಂತ್ರಣ ಇಲ್ಲದಿದ್ದರೆ ದಢೂತಿ ಆಗಿಬಿಡುತ್ತವೆ. ಹೆಚ್ಚಿನ ಚಟುವಟಿಕೆ ಬಯಸುವ ಶ್ವಾನ ಇದಾಗಿದೆ. ಅಲ್ಲದೆ 20 ನಿಮಿಷದಂತೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಯೋಗಾಭ್ಯಾಸ ಅಗತ್ಯತೆ ಇದೆ. ವಾಕಿಂಗ್ ಕರೆಯುವುದು, ಫ್ಲೆಚ್ ಗೇಮ್, ಬೈಕ್ ಹಿಂದೆ ಓಡಿಸಬಹುದು, ವಿಶಾಲವಾದ ಕಾಂಪೌಂಡ್ ಒಳಗೆ ಬಿಡುವುದು, ಇತರ ನಾಯಿಗಳೊಂದಿಗೆ ಆಡಲು ಬಿಡುವುದು ಉತ್ತಮ.
ಬೆಲ್ಜಿಯಂ ಮಾಲಿನೋಯಿಸ್ ನಾಯಿಗಳು ಚಾಣಾಕ್ಷ, ವೇಗ, ಅತ್ಯಂತ ಸಾಮರ್ಥ್ಯ ಹೊಂದಿವೆ. ಜಗತ್ತಿನ ಅನೇಕ ರಾಷ್ಟ್ರಗಳು ಮತ್ತು ಸೇನೆಗಳು ಅಧಿಕವಾಗಿ ಬಳಸುವ ಶ್ವಾನ ಇದು. ಲಾಡೆನ್ ಹತ್ಯೆ ವೇಳೆ ಅಮೆರಿಕಾ ಸೇನೆ ಕೂಡ ಇವುಗಳನ್ನು ಬಳಸಿಕೊಂಡಿತ್ತು. ಚತುರ ನಾಯಿ ಕೂಡ ಹೌದು. 2018ರಿಂದ ಭಾರತದ ಪೊಲೀಸ್ ಪಡೆ ಶ್ವಾನ ದಳದಲ್ಲಿ ಬಳಸಲು ಪ್ರಾರಂಭಿಸಿದೆ.
ಈ ಶ್ವಾನಕ್ಕೆ ಯಾರನ್ನು ಕಂಡರೆ ಆಗದು?
ಬೆಲ್ಜಿಯಂ ಮಾಲಿನೋಯಿಸ್ ಅತ್ಯಂತ ಸೂಕ್ಷ್ಮ ಸಂವೇದನೆ ಹೊಂದಿರುವ ಶ್ವಾನ. ಅಪರಿಚಿತರನ್ನು ಕಂಡರೆ ಆಗದು. ಇತರೆ ನಾಯಿಗಳನ್ನು ಕಂಡರೆ ಎಗರಿಬಿಡುತ್ತದೆ. ಹಾಗಾಗಿ, ಈ ಶ್ವಾನವು ಮರಿಯಾಗಿದ್ದಾಗಿನಿಂದಾಗಲೇ ಬೆರೆಯುವಂಥ ಗುಣ ಮೈಗೂಡಿಸುವ ಅವಶ್ಯಕತೆ ಇದೆ. ಎಳೆ ಮರಿಯಿಂದ ಇದ್ದಾಗಲೇ ಫ್ರೆಂಡ್ಲಿಯಾಗಿ ಬೆಳೆಸಿದರೆ ಬೆಳೆದ ಮೇಲೆ ಹೊಂದಿಕೊಂಡು ಹೋಗುವ ಗುಣ ಹೊಂದಿದೆ. 2 ತಿಂಗಳ ನಂತರ ತರಬೇತಿ ಚಿಕ್ಕದಾಗಿ ಬೆಳೆಸಬೇಕು.
ಇನ್ನು ರಿವಾರ್ಡ್ ಆಧಾರಿತ ತರಬೇತಿ ಇಷ್ಟಪಡುತ್ತವೆ. ದಂಡಿಸಿ ಕಲಿಸದೇ ಮುದ್ದಿಸಿ ಕಲಿಸುವುದು ಧನಾತ್ಮಕವಾಗುದೆ. ಡಬಲ್ ಕೋಟ್ ಹೊಂದಿದ ನಾಯಿ ಇದಾಗಿದೆ. ಇದಕ್ಕೆ ವರ್ಷದಲ್ಲಿ ಎರಡು ಬಾರಿ ಕೂದಲು ತೆಗೆಯಬೇಕು. ಪ್ರತಿದಿನ ಗ್ರೋಮಿಂಗ್ ಮಾಡಬೇಕು, ನಿಯಮಿತ ಸ್ನಾನ, ಉಗುರು ಕತ್ತರಿಸಬೇಕು,
ಸ್ನಾನ ಮಾಡಿಸಬೇಕು.
ಅಮೆರಿಕಾದ ಪ್ರಕಾರ ಬೆಲ್ಜಿಯಂ ಮಾಲಿನೋಯಿಸ್ 14 ರಿಂದ 16 ವರ್ಷ ಬದುಕುತ್ತದೆ. ಥೈರಾಯ್ಡ್ ಸಂಬಂಧಿತ ರೋಗಕ್ಕೆ ತುತ್ತಾಗುತ್ತದೆ. ಆದ್ದರಿಂದ ಇದಕ್ಕೆ ನಿಯಮಿತವಾಗಿ ವ್ಯಾಕ್ಸಿನೇಷನ್ ಮಾಡಿಸಬೇಕಾಗುತ್ತದೆ.
ಹೇಗೆ ಅಭಿವೃದ್ಧಿಯಾಯ್ತು ಈ ತಳಿ?
ಬೆಲ್ಜಿಯಂ ಮಾಲಿನೋಯಿಸ್ ತಳಿಯು ಮೂಲ ಬೆಲ್ಜಿಯಂ ದೇಶವಾಗಿದ್ದು, ಕುರಿ ಮತ್ತು ದನಗಳನ್ನ ಕಾಯಲು ಈ ತಳಿಯನ್ನಾಗಿ ಇಂಪ್ರೂವ್ ಮಾಡಲಾಯಿತು. ತೋಳ ಮತ್ತು ನರಿಯ ಜೀನ್ಗಳಿಂದ ಉತ್ಪತ್ತಿಯಾದ ಶ್ವಾನ ಅತ್ಯಂತ ಸೂಕ್ಷ್ಮವಾಗಿದೆ ಎಂದು ನಂಬಲಾಗಿದೆ. ಇದು ಸಾವಿರಾರು ವರ್ಷಗಳಿಂದ ಹಿಂದಿನಿಂದಲೂ ಮಾನವನ ಸ್ನೇಹಜೀವಿಯಾಗಿ ಬಂದಿದೆ. ಇಷ್ಟೇ ವರ್ಷಗಳಿಂದ ಇಂಪ್ರೂವ್ ಮಾಡಲಾಗುತ್ತಿದೆ ಎಂದು ಯಾವುದೇ ಪುರಾವೆಗಳು ಇಲ್ಲ. ಒಂದು ಅಂದಾಜಿನ ಪ್ರಕಾರ ಬೆಲ್ಜಿಯಂ ಮೆಲೋನಿಸ್ ತಳಿಯನ್ನು 150 ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಯಿತು.
ಏನೆಲ್ಲಾ ಆಹಾರ ಕೊಡಲಾಗುತ್ತದೆ?
1. 1 ಕೆಜಿ ಮಾಂಸ
2. 200 ಗ್ರಾಂ ರೈಸ್
3. 100 ಗ್ರಾಂ ತರಕಾರಿ
4. ಒಂದು ಮೊಟ್ಟೆ
5. ಅರ್ಧ ಲೀಟರ್ ಹಾಲು
6. 50 ಗ್ರಾಂ ಕಾಳು
7. 50 ಗ್ರಾಂ ರಾಯಲ್ ಕೆನೆ
8. 200 ಗ್ರಾಂ ಬಾರ್ಲಿ ಮತ್ತು ವಿಟಮಿನ್ ಸಿರಪ್
9. ವಿಟಮಿನ್ ಜನರಲ್ ಟಾನಿಕ್, ಮಲ್ಟಿ ವಿಟಮಿನ್ ಟ್ಯಾಬ್ಲೆಟ್ಗಳು
ತರಬೇತುದಾರರು ಹೇಳುವುದೇನು?
ಬೆಲ್ಜಿಯಂ ಮಾಲಿನೋಯಿಸ್ ಶ್ವಾನವು ಅಧಿಕ ಬುದ್ಧಿ ಶಕ್ತಿ ಹೊಂದಿದೆ. ಇದು ಅತ್ಯಂತ ಚುರುಕುತನ ಮತ್ತು ಕ್ಷಣ ಕಳೆದಂತೆ ಚಾಣಾಕ್ಷತೆ ಬರುತ್ತದೆ. ಹೆಚ್ಚಿನ ಸಿದ್ಧಾಹಾರ, ಶಕ್ತಿಯುತವಾದ ವಿಟಮಿನ್ ಬೇಕಾಗಿರುತ್ತದೆ. ಇದಕ್ಕೆ ಅತ್ಯಧಿಕ ವ್ಯಾಯಾಮ ದಿನನಿತ್ಯ ಬೇಕು. ಆಲ್ ಖೈದಾ ಸಂಘಟನೆಯ ಒಸಾಮಾ ಬಿನ್ ಲಾಡೆನ್ ಹಿಡಿಯಲು ಅಮೆರಿಕ ದೇಶವು ಇದನ್ನು ಉಪಯೋಗಿಸಿಕೊಂಡಿತ್ತು. ಭಾರತ ದೇಶವು ಸೇನೆಗಳಿಗೆ ಪ್ರಯೋಗ ಮಾಡುತ್ತಾ ಬಂದಿದೆ. ಕರ್ನಾಟಕ ಪೊಲೀಸ್ 2018ರಲ್ಲಿ ಈ ಶ್ವಾನವನ್ನು ಪೊಲೀಸ್ ಇಲಾಖೆಗೆ ಸೇರಿಸಿಕೊಂಡಿದೆ ಎಂದರು.
ಅತ್ಯಂತ ಸೂಕ್ಷ್ಮ ಹಾಗೂ ಜಾಗೃತೆ ಹೊಂದಿರುವ ತಾರಾಳು ತುಂಗಾ ಸ್ಥಾನ ತುಂಬುತ್ತಿದೆ. ದಾವಣಗೆರೆಯಲ್ಲಿ ಈ ಶ್ವಾನ ಇರುವುದು ಖುಷಿಯ ವಿಚಾರ ಎನ್ನುತ್ತಾರೆ ಈ ಶ್ವಾನಕ್ಕೆ ತರಬೇತಿ ನೀಡುತ್ತಿರುವ ಪ್ರಕಾಶ್.
ಒಟ್ಟಿನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿನ ಸೇನೆಯಲ್ಲಿ ಬಳಸಿಕೊಳ್ಳುತ್ತಿದ್ದ ಚಾಣಾಕ್ಷತೆ ಹೊಂದಿರುವ ಶ್ವಾನವು ದಾವಣಗೆರೆ ಪೊಲೀಸ್ ಇಲಾಖೆಯ ಬಳಸಿಕೊಳ್ಳುತ್ತಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಷ್ಟೇ ಅಲ್ಲದೆ ಅಪರಾಧಿಗಳ ಸುಳಿವು ನೀಡುವಲ್ಲಿ ನಿಪುಣತೆ ಹೊಂದಿರುವ ಈ ಶ್ವಾನ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications