ಕಲಾಂಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು
ಚೆನ್ನೈ, ಜುಲೈ, 30 : ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಇಹಲೋಕ ಯಾತ್ರೆ ಮುಗಿಸಿ ಮೂರು ದಿನ ಕಳೆದಿದೆ. ಇದೀಗ ಪಾರ್ಥಿವ ಶರೀರ ತಮಿಳುನಾಡಿನ ರಾಮೇಶ್ವರಂ ತಲುಪಿದ್ದು, ಅಂತ್ಯ ಸಂಸ್ಕಾರಕ್ಕಾಗಿ ಪೂರ್ಣ ತಯಾರಿ ನಡೆಸಲಾಗಿದೆ. [ಚಿತ್ರಗಳು : ಅಬ್ದುಲ್ ಕಲಾಂಗೆ ಅಂತಿಮ ನಮನ]
ರಾಮೇಶ್ವರಂನಲ್ಲಿ ಕಲಾಂ ಅವರ ಅಂತಿಮ ಸಂಸ್ಕಾರ ನಡೆಯುವುದೆಂಬ ಮಾಹಿತಿ ತಿಳಿದ ಅನೇಕ ಗಣ್ಯರು, ಅಂತಿಮ ನಮನ ಸಲ್ಲಿಸಲು ಆಗಮಿಸಿದ್ದಾರೆ. ಗೌರವಪೂರ್ವಕವಾಗಿ ನಮನ ಸಲ್ಲಿಸಿದ ಹಲವಾರು ಗಣ್ಯರು ಕಣ್ಣೀರು ಮಿಡಿದಿದ್ದಾರೆ.[ರಾಮೇಶ್ವರಂನಲ್ಲಿ ಡಾ.ಕಲಾಂ ಅಂತ್ಯ ಸಂಸ್ಕಾರ Live]
ಸುಮಾರು 12.30ಕ್ಕೆ ವಿಧಿವಿಧಾನಗಳು ನಡೆಯಲಿದ್ದು, ರಾಮೇಶ್ವರಂಗೆ ತೆರಳಿ ಕಲಾಂ ಅವರಿಗೆ ನಮನ ಸಲ್ಲಿಸುವಲ್ಲಿ ಭಾವತಪ್ತರಾದ ನಾನಾ ಗಣ್ಯರು...In Pics
ಕಲಾಂಗೆ ಕೊನೆಯ ಸಲಾಂ
ಮಾಜಿ ಇಸ್ರೋ ಮುಖ್ಯಸ್ಥ ಮಾಧವನ್ ನಾಯರ್ ಅವರಿಂದ ಶ್ರದ್ಧಾಪೂರ್ವಕ ನಮನ
ಕಲಾಂಗೆ ಕೊನೆಯ ಸಲಾಂ
ಡಿಎಂಕೆ ಪಕ್ಷದ ಮುಖ್ಯಸ್ಥ ಎಂಕೆ ಸ್ಟ್ಯಾಲಿನ್
ಕಲಾಂಗೆ ಕೊನೆಯ ಸಲಾಂ
ಡಿಎಂಕೆ ಪಕ್ಷದ ವಿಜಯಕಾಂತ್ ಮತ್ತು ಅವರ ಪತ್ನಿ ನಮನ ಸಲ್ಲಿಸುತ್ತಿರುವುದು.
ಕಲಾಂಗೆ ಕೊನೆಯ ಸಲಾಂ
ತಮಿಳುನಾಡಿನ ಹಲವಾರು ರಾಜಕಾರಣಿಗಳಿಂದ ನಮನ ಸಲ್ಲಿಕೆ
ಕಲಾಂಗೆ ಕೊನೆಯ ಸಲಾಂ
ತಮಿಳುನಾಡಿನ ಗವರ್ನರ್ ಕೆ.ರೋಸಯ್ಯ ಅವರಿಂದ ಕಲಾಂಗೆ ಕೊನೆಯ ನಮನ
ಕಲಾಂಗೆ ಕೊನೆಯ ಸಲಾಂ
ಕೊನೆಯ ನಮನ ಸಲ್ಲಿಸಿದ ಭಾರತೀಯ ಕ್ರಿಕೆಟ್ ಆಟಗಾರರು
ಕಲಾಂಗೆ ಕೊನೆಯ ಸಲಾಂ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಲಾಂ ಅವರ ಪಾರ್ಥೀವ ಶರೀರಕ್ಕೆ ಭಕ್ತಿಪೂರ್ವಕ ನಮನ ಅರ್ಪಿಸಿದರು.