ಹಳಿತಪ್ಪಿದ ಕನ್ಯಾಕುಮಾರಿ-ಬೆಂಗಳೂರು ರೈಲು
ಚೆನ್ನೈ, ಫೆಬ್ರವರಿ 05 : ಕನ್ಯಾಕುಮಾರಿಯಿಂದ ಬೆಂಗಳೂರಿಗೆ ಬರುತ್ತಿದ್ದ ರೈಲು ತಮಿಳುನಾಡಿನ ಜೋಲಾರ್ ಪೇಟ್ ಸಮೀಪ ಹಳಿ ತಪ್ಪಿದೆ. ಅಪಘಾತದಲ್ಲಿ 13 ಜನರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.
ಕನ್ಯಾಕುಮಾರಿ-ಬೆಂಗಳೂರು
ಎಕ್ಸ್ಪ್ರೆಸ್
ರೈಲಿನ
5ಬೋಗಿಗಳು
ಶುಕ್ರವಾರ
ಮುಂಜಾನೆ
4.30ರ
ಸುಮಾರಿಗೆ
ಹಳಿ
ತಪ್ಪಿವೆ.
1
ಬೋಗಿ
ಸಂಪೂರ್ಣವಾಗಿ
ಜಖಂಗೊಂಡಿದ್ದು,
13
ಪ್ರಯಾಣಿಕರು
ಅಪಘಾತದಲ್ಲಿ
ಗಾಯಗೊಂಡಿದ್ದು,
ವಿವಿಧ
ಆಸ್ಪತ್ರೆಯಲ್ಲಿ
ಚಿಕಿತ್ಸೆ
ಪಡೆಯುತ್ತಿದ್ದಾರೆ.
[ರೈಲ್ವೆ
ಪ್ರಯಾಣ
ದರ
ತುಸು
ದುಬಾರಿ]
2 ರೈಲುಗಳ ಸಂಚಾರ ರದ್ದು : ರೈಲು ಅಪಘಾತದಿಂದಾಗಿ ಬೆಂಗಳೂರು-ಚೈನ್ನೈ ಮಾರ್ಗದಲ್ಲಿನ ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಮಾರ್ಗದ ಎರಡು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಬೃಂದಾವನ ಎಕ್ಸ್ಪ್ರೆಸ್ ಮತ್ತು ಚೆನ್ನೈ-ಬೆಂಗಳೂರು ನಡುವಿನ ಡಬ್ಬಲ್ ಡೆಕ್ಕರ್ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. [ಮೈಸೂರು-ಚೆನ್ನೈ ನಡುವೆ ಸೆಮಿ ಸ್ಪೀಡ್ ರೈಲು ಸಂಚಾರ]
ರೈಲ್ವೆ ಹಳಿಗಳಲ್ಲಿ ಬಿರುಕು ಉಂಟಾಗಿದ್ದರಿಂದ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಸುರಕ್ಷಿತವಾಗಿರುವ ಪ್ರಯಾಣಿಕರನ್ನು ಬೆಂಗಳೂರಿಗೆ ತಲುಪಿಸಲು ರೈಲ್ವೆ ಇಲಾಖೆಯೇ ವ್ಯವಸ್ಥೆ ಮಾಡಿದೆ. ರೈಲು ಹಳಿ ತಪ್ಪಿದ್ದರಿಂದ ಈ ಮಾರ್ಗದಲ್ಲಿನ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಗಿದೆ.