Q3: ನಿರೀಕ್ಷೆ ಮಟ್ಟ ಮುಟ್ಟದ ಟಿಸಿಎಸ್, 100% ಬೋನಸ್ ಘೋಷಣೆ
ಮುಂಬೈ, ಜ.16: ದೇಶದ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ತನ್ನ ಮೂರನೇ ತ್ರೈಮಾಸಿಕ ವರದಿಯನ್ನು ಶುಕ್ರವಾರ ಪ್ರಕಟಿಸಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆಗೆ ತಕ್ಕ ಫಲಿತಾಂಶ ಹೊರಹಾಕದಿದ್ದರೂ ತಕ್ಕಮಟ್ಟಿನ ಲಾಭ, ಆದಾಯ ಗಳಿಸಿದೆ. ತ್ರೈಮಾಸಿಕ ವರದಿ ಪ್ರಕಟಣೆ ಬೆನ್ನಲ್ಲೆ ಸಿಇಒ ಎನ್ ಚಂದ್ರಶೇಖರನ್ ಅವರು ಉದ್ಯೋಗಿಗಳಿಗೆ ಶೇ 100ರಷ್ಟು ವೆರಿಯಬಲ್ ಪೇ ಬೋನಸ್ ಘೋಷಿಸಿದ್ದಾರೆ.
ಇದರ ಬೆನ್ನಲ್ಲೇ ಬಹು ನಿರೀಕ್ಷಿತ ಉದ್ಯೋಗ ಕಡಿತ ಯೋಜನೆ ಬಗ್ಗೆ ಎನ್ ಚಂದ್ರಶೇಖರನ್ ಅವರು ಸ್ಪಷ್ಟನೆ ನೀಡಿದ್ದಾರೆ. ಟಿಸಿಎಸ್ ಉತ್ತಮ ಪ್ರಗತಿ ಸಾಧಿಸುತ್ತಿದ್ದು, ನೇಮಕಾತಿ ಗಣನೀಯವಾಗಿ ಹೆಚ್ಚಿದೆ, ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತಗೊಳಿಸುವ ಯಾವುದೇ ಯೋಜನೆ ಸಂಸ್ಥೆ ಕೈಗೊಂಡಿಲ್ಲ. ಹೆಚ್ಚೆಂದರೆ 1000 ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತದೆ ಎಂದಿದ್ದಾರೆ. [ಉದ್ಯೋಗಿಯಿಂದ 'ಎಕ್ಸಿಟ್ ಇಂಟರ್ ವ್ಯೂ' ಲೀಕ್]

ನೇಮಕಾತಿ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸುಮಾರು 55,000 ಹೊಸ ನೇಮಕಾತಿ ಯೋಜನೆ ಹಾಕಿಕೊಳ್ಳಲಾಗಿದೆ. ಈ ವರ್ಷ 52,000 ಅಭ್ಯರ್ಥಿಗಳನ್ನು ಸೇರಿಸಿಕೊಳ್ಳಲಾಗಿದೆ. ಮೂರನೇ ತ್ರೈಮಾಸಿಕದಲಿ 4,868 ಹೊಸ ನೇಮಕಾತಿ ನಡೆದಿದೆ. ಮೂರನೇ ತ್ರೈಮಾಸದ ಅಂತ್ಯಕ್ಕೆ ಟಿಸಿಎಸ್ ಉದ್ಯೋಗಿಗಳ ಸಂಖ್ಯೆ 3,18,625ನಷ್ಟಿದೆ. attrition rate ಶೇ 13.4 ಆಗಿದೆ ಎಂದು ಸಂಸ್ಥೆಯ ಜಾಗತಿಕ ಎಚ್ ಆರ್ ಅಜೊಯ್ ಮುಖರ್ಜಿ ಹೇಳಿದ್ದಾರೆ. [ಕೇವಲ ಶೇ 1 ರಷ್ಟು ಮಾತ್ರ ಉದ್ಯೋಗ ಕಡಿತ!]
ತ್ರೈಮಾಸಿಕ ವರದಿ: ಅಕ್ಟೋಬರ್-ಡಿಸೆಂಬರ್ ಅವಧಿಯ ಮೂರನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭ ಶೇ 2.94ರಂತೆ 5,328 ಕೋಟಿ ರು ಲಾಭ ಹಾಗೂ ತ್ರೈಮಾಸಿಕ ಆದಾಯ ಶೇ 2.87 ಏರಿಕೆ ಕಂಡು 24,501 ಕೋಟಿ ರು ಗಳಿಸಿದೆ. ಮಾರುಕಟ್ಟೆ ತಜ್ಞರ ನಿರೀಕ್ಷೆ 5,496 ಕೋಟಿ ರು ಲಾಭ ಹಾಗೂ 24,498 ಆದಾಯ ಹಾಗೂ ಡಾಲರ್ ಆದಾಯ 3.9 ಯುಎಸ್ ಡಾಲರ್ ಬರಬೇಕಿತ್ತು.
ಬೋನಸ್: ಉದ್ಯೋಗಿಗಳಿಗೆ 100% ವೇರಿಯಬಲ್ ಪೇಔಟ್ ನೀಡಲಾಗಿದೆ. ಇತ್ತೀಚೆಗೆ ಇನ್ಫೋಸಿಸ್ ಕೂಡಾ ಇದೆ ರೀತಿ ಬೋನಸ್ ನೀಡಿತ್ತು. ಎಚ್ ಸಿಎಲ್ ಸಂಸ್ಥೆ ಉದ್ಯೋಗಿಗಳಿಗೆ ಮರ್ಸಿಡೀಸ್ ಕಾರು ಹಾಗೂ ವಿದೇಶಿ ಟೂರ್ ಪ್ಯಾಕೇಜ್ ಘೋಷಿಸಿತ್ತು. [ಐಫೋನ್ ಕೊಡುಗೆ ನೀಡಿದ ಸಿಕ್ಕಾ]
ಷೇರುಪೇಟೆಯಲ್ಲಿ: ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್ ಷೇರುಗಳು ಶೇ 2 ರಂತೆ ಇಳಿಕೆ ಕಂಡು 2595 ರು ನಂತೆ ಟ್ರೆಂಡ್ ನಲ್ಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications