ಟಿಸಿಎಸ್ ರಹಸ್ಯ ಉದ್ಯೋಗಿಯಿಂದ 'ಎಕ್ಸಿಟ್ ಇಂಟರ್ ವ್ಯೂ' ಲೀಕ್
ಚೆನ್ನೈ, ಜ.13:ದೇಶದ ಅತಿದೊಡ್ದ ಸಾಫ್ಟ್ ವೇರ್ ರಫ್ತು ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ನಡೆಸಲು ಉದ್ದೇಶಿಸಿರುವ ಮಹಾ 'ಪಿಂಕ್ ಸ್ಲಿಪ್ ವಿತರಣೆ' ಕಾರ್ಯಕ್ರಮಕ್ಕೆ ಈಗ ತಡೆ ಬಿದ್ದ್ದಿದೆ. ಸುಮಾರು 20 ರಿಂದ 30 ಸಾವಿರ ಉದ್ಯೋಗಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇದರ ಬೆನ್ನಲ್ಲೇ ಎಕ್ಸಿಟ್ ಇಂಟರ್ ವ್ಯೂ ನೀಡಿದ ಉದ್ಯೋಗಿಯೊಬ್ಬರು ಸಂಸ್ಥೆ ತೊರೆಯುವುದಕ್ಕೆ ಮುನ್ನ ನೀಡಿದ ಸಂದರ್ಶನದ ಆಡಿಯೋ ಕ್ಲಿಪ್ಪಿಂಗ್ ಸೌಂಡ್ ಕ್ಲೌಡ್ ನಿಂದ ಜಾರಿ ಫೇಸ್ ಬುಕ್ ಗೆ ಇಳಿದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ. [ಟಿಸಿಎಸ್ ವಿರುದ್ಧ ಉದ್ಯೋಗಿಗಳ ದಂಗೆ]
'ಟಿಸಿಎಸ್ ಸಂಸ್ಥೆ ಸುಳ್ಳುಗಳು ಬಹಿರಂಗ' ಎಂಬರ್ಥದ ಶೀರ್ಷಿಕೆ ಹೊಂದಿರುವ ಈ ಧ್ವನಿ ಮುದ್ರಿಕೆಯಲ್ಲಿ ಟಿಸಿಎಸ್ ಸಂಸ್ಥೆ ಗ್ರೇಡಿಂಗ್ ವ್ಯವಸ್ಥೆ, ಉದ್ಯೋಗಿಗಳನ್ನು ನಡೆಸಿಕಿಕೊಳ್ಳುವ ರೀತಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಮನೆಗೆ ಕಳಿಸುವ ಕಾರ್ಯಕ್ರಮದ ವಿವರ ಸಿಗುತ್ತದೆ.
ಟಿಸಿಎಸ್ ಯೋಜನೆಗೆ ಬ್ರೇಕ್: 25 ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಮನೆಗೆ ಕಳಿಸಲು ಟಿಸಿಎಸ್ ಯೋಜನೆ ಹಾಕಿಕೊಂಡಿತ್ತು. ಅದರೆ, ಇದರ ವಿರುದ್ಧ ದನಿ ಎತ್ತಿದ ಸಾಫ್ಟ್ ವೇರ್ ಇಂಜಿನಿಯರ್ ಗಳು ಕೋರ್ಟ್ ಮೆಟ್ಟಿಲೇರಿದ್ದರು. [ಮೈಕ್ರೋಸಾಫ್ಟ್ ನಿಂದ 18 ಸಾವಿರ ಉದ್ಯೋಗ ಕಡಿತ]
ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್ ಸಾಫ್ಟ್ ವೇರ್ ಇಂಜಿನಿಯರ್ ಪರ ತೀರ್ಪು ನೀಡಿದ್ದು, ಟಿಸಿಎಸ್ ಸದ್ಯಕ್ಕೆ ಯಾರಿಗೂ ಪಿಂಕ್ ಸ್ಲಿಪ್ ನೀಡಲು ಆಗದಂತೆ ತಡೆ ಒಡ್ಡಲಾಗಿದೆ.

ಲೆವೆಲ್ ಸಿ ಉದ್ಯೋಗಿಗಳು ಮಾತ್ರ ಎಂದ ಟಿಸಿಎಸ್
ಸಂಸ್ಥೆಯ ನಿರೀಕ್ಷೆ ಮಟ್ಟ ಮುಟ್ಟಿ ಉತ್ತಮ ಕಾರ್ಯಕ್ಷಮತೆ ಹೊಂದಿರುವ ಉದ್ಯೋಗಿಗಳನ್ನು ಮಾತ್ರ ಮನೆಗೆ ಕಳಿಸಲಾಗುತ್ತಿದೆ ಎಂದು ಟಿಸಿಎಸ್ ಹೇಳಿದೆ.
ಲೆವೆಲ್ ಸಿ ಸೇರಿದ 7 ರಿಂದ 10 ವರ್ಷ ಅನುಭವವುಳ್ಳ ಉತ್ತಮ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.ಉದ್ಯೋಗ ಕಡಿತಕ್ಕೆ ಒಳಗಾಗುವ ಭೀತಿಯಲ್ಲಿರುವ 25 ಸಾವಿರ ಮಂದಿ ಸಹಾಯಕ ಕನ್ಸಲ್ಟೆಂಟ್ ಅಥವಾ ಅದಕ್ಕಿಂತ ದೊಡ್ಡ ಹುದ್ದೆಯಲ್ಲಿದ್ದಾರೆ. ಇವರನ್ನು ಕೈ ಬಿಟ್ಟು 55,000 ಫ್ರೆಶರ್ ಗಳನ್ನು ನೇಮಕ ಮಾಡಿಕೊಳ್ಳಲು ಟಿಸಿಎಸ್ ಮುಂದಾಗಿದೆ.

ಕೋರ್ಟ್ ಮೆಟ್ಟಿಲೇರಿದ ಗರ್ಭಿಣಿ ಉದ್ಯೋಗಸ್ಥ ಮಹಿಳೆ
ಮಾರ್ಚ್ 2011ರಂದು ಚೆನ್ನೈನಲ್ಲಿ ಐಟಿ ಅನಾಲಿಸ್ಟ್ ಆಗಿ ಉದ್ಯೋಗಕ್ಕೆ ಸೇರಿದ ರೇಖಾ ಈಗ ಗರ್ಭಿಣಿಯಾಗಿದ್ದು ಡಿ.22, 2014ಕ್ಕೆ ಟರ್ಮಿನೇಷನ್ ಲೆಟರ್ ಪಡೆದುಕೊಂಡಿದ್ದಾರೆ. ಜ.21, 2015 ಕಚೇರಿಯಲ್ಲಿ ಕೊನೆ ದಿನವಾಗಿದೆ.
ಇದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ ರೇಖಾಗೆ ತಾತ್ಕಾಲಿಕ ಜಯ ಸಿಕ್ಕಿದ್ದು, ನಾಲ್ಕು ವಾರಗಳ ತಡೆಯಾಜ್ಞೆಯನ್ನು ಕೋರ್ಟ್ ನೀಡಿದೆ.

ಕೈಗಾರಿಕಾ ಕಾನೂನು ಏನು ಹೇಳುತ್ತದೆ?
ಸಾಮಾನ್ಯ ಕಾರ್ಮಿಕರ ಕುರಿತಂತೆ ಇರುವ ಕಾನೂನು ಐಟಿ ಉದ್ಯೋಗಿಗಳೂ ಅನ್ವಯವಾಗುವುದೇ? ಸದ್ಯಕ್ಕಂತೂ ಈ ಪ್ರಕರಣದಲ್ಲಿ ಕೈಗಾರಿಕಾ ವ್ಯಾಜ್ಯ ಕಾಯ್ದೆ 1947ರ ಅನ್ವಯ ರೇಖಾ ಉದ್ಯೋಗಕ್ಕೆ ಅರ್ಹಳಾಗಿದ್ದು, ಸಂಸ್ಥೆಯಿಂದಲೇ ಮೂರು ಬಾರಿ ಸಿ ರೇಟಿಂಗ್ ಸಿಕ್ಕಿದೆ. ಹೀಗಾಗಿ ಆಕೆಯ ಟರ್ಮಿನೇಷನ್ ಗೆ ತಡೆ ನೀಡಬಹುದಾಗಿದೆ.
ಕೈಗಾರಿಕಾ ಕಾಯ್ದೆ ಸೆಕ್ಷನ್ 25ರ ಅನ್ವಯ ಟಿಸಿಎಸ್ ಸಂಸ್ಥೆ ಹಿರಿಯ ಉದ್ಯೋಗಿಗಳ ಪಟ್ಟಿ ನೀಡುವಲ್ಲಿ ವಿಫಲವಾಗಿದೆ. ಉದ್ಯೋಗದಿಂದ ತೆಗೆಯುವುದಕ್ಕೂ ಮುನ್ನ ನೋಟಿಸ್ ಕೂಡಾ ನೀಡಿಲ್ಲ. ಪ್ರತಿ ವರ್ಷ ಪೂರೈಸಿದ್ದಕ್ಕೆ ಉದ್ಯೋಗಿಗೆ ನೀಡಬೇಕಿರುವ ಹೆಚ್ಚುವರಿ ಮೊತ್ತವನ್ನು ನೀಡಿಲ್ಲ ಎಂಬುದು ತಿಳಿದು ಬಂದಿದೆ.

ಸಿ ಲೆವಲ್ ಉದ್ಯೋಗಿ ಕೊನೆ ಸಂದರ್ಶನ ಆಡಿಯೋ
"We are against TCS LayOff", ಎಂಬ ಫೇಸ್ ಬುಕ್ ಪುಟಕ್ಕೆ ಸುಮಾರು 15Kಗೂ ಅಧಿಕ ಲೈಕ್ಸ್ ಬಂದಿದೆ. ಈ ಆಡಿಯೋ ಕ್ಲಿಪ್ಪಿಂಗ್ ನಲ್ಲಿ ಎ ಹಾಗೂ ಬಿ(ಸಂಸ್ಥೆಗೆ ಹೊಸ ಸೇರ್ಪಡೆ) ಉದ್ಯೋಗಿಗಳು ನಿಮಗಿಂತ(ಸಿ) ಹೆಚ್ಚಿನ ದುಡಿಮೆ ನೀಡುತ್ತಿದ್ದಾರೆ. ನಿಮ್ಮ ಅಗತ್ಯವಿಲ್ಲ ಎಂದು ಚೆನ್ನೈ ಮೂಲದ ಎಚ್ ಆರ್ ಮ್ಯಾನೇಜರ್ ಹೇಳುವುದನ್ನು ಕೇಳಬಹುದು.

ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ ಟಿಸಿಎಸ್ ಸುದ್ದಿ
ಟಿಸಿಎಸ್ ಉದ್ಯೋಗಿ 'ಎಕ್ಸಿಟ್ ಇಂಟರ್ ವ್ಯೂ' ಲೀಕ್ ಆಡಿಯೋ ಕೇಳಿ.. ಕೇಳಲು ನೇರ ಲಿಂಕ್ ಕ್ಲಿಕ್ ಮಾಡಿ
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications