ಫ್ಲಿಪ್ ಕಾರ್ಟ್ ನ 6 ಸಾವಿರ ಕೋಟಿ ರು. ಆಫರ್ ಒಪ್ಪಿದ ಸ್ನಾಪ್ ಡೀಲ್ ?
ಫ್ಲಿಪ್ ಕಾರ್ಟ್ ನ ಹೊಸ ಆಫರ್ ಒಪ್ಪಿಕೊಂಡ ಸ್ನಾಪ್ ಡೀಲ್. ಆನ್ ಲೈನ್ ಕಂಪನಿಗಳ ಹೊಸ ಡೀಲ್ ಬಗ್ಗೆ ಕೆಲ ಮೂಲಗಳಿಂದ ಮಾಹಿತಿ. ಆದರೆ, ಎರಡೂ ಕಂಪನಿಗಳು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಬೆಂಗಳೂರು, ಜುಲೈ 26: ಹೆಸರಾಂತ ಆನ್ ಲೈನ್ ಮಾರಾಟ ಸಂಸ್ಥೆಯಾದ ಸ್ನಾಪ್ ಡೀಲ್ ಕಂಪನಿಯನ್ನು ಕೊಳ್ಳುವ ಪೈಪೋಟಿಯಲ್ಲಿ ಜನಪ್ರಿಯ ಆನ್ ಲೈನ್ ಜಾಲತಾಣವಾದ ಫ್ಲಿಪ್ ಕಾರ್ಟ್ ಕೊನೆಗೂ ಗೆದ್ದಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ, ಫ್ಲಿಪ್ ಕಾರ್ಟ್ ಸಂಸ್ಥೆಯ ಸ್ವಾಧೀನ ವಿಚಾರದ ಮಾತುಕತೆ ವೇಳೆ 4, 800 ಕೋಟಿ ರು.ಗಳ ಆಫರ್ ಅನ್ನು ಸ್ನಾಪ್ ಡೀಲ್ ಮುಂದಿಟ್ಟಿತ್ತು. ಆದರೆ, ಇದಕ್ಕೆ ಸ್ನಾಪ್ ಡೀಲ್ ಆಡಳಿತ ಮಂಡಳಿ ಒಪ್ಪಿರಲಿಲ್ಲ. ಅದಕ್ಕೂ ಮುನ್ನ 4,500 ಕೋಟಿ ರು.ಗಳ ಆಫರ್ ಅನ್ನೂ ಸ್ನಾಪ್ ಡೀಲ್ ತಿರಸ್ಕರಿಸಿತ್ತು.

ಆದರೀಗ, ಅಂದಾಜು 5,700 ಕೋಟಿ ರು.ಗಳಿಂದ 6 ಸಾವಿರ ಕೋಟಿ ರು. ನಡುವಿನ ಹೊಸ ಆಫರ್ ಅನ್ನು ಫ್ಲಿಪ್ ಕಾರ್ಟ್, ಸ್ನಾಪ್ ಡೀಲ್ ಮುಂದಿಟ್ಟಿರುವುದರಿಂದ ಈ ಮೊತ್ತದ ಬಗ್ಗೆ ಸ್ನಾಪ್ ಡೀಲ್ ಆಡಳಿತ ಮಂಡಳಿ ಆಸಕ್ತಿ ತೋರಿದೆ ಎಂದು ಹೇಳಲಾಗಿದೆ. ಆದರೆ, ಈ ಬಗ್ಗೆ ಎರಡೂ ಕಂಪನಿಗಳಿಂದ ಯಾವುದೇ ಅಧಿಕೃತ ಘೋಷಣೆಯಾಗಿಲ್ಲ.
ಫ್ಲಿಪ್ ಕಾರ್ಟ್ ನೀಡಿರುವ ಈ ಹೊಸ ಆಫರ್ ಬಗ್ಗೆ ಸ್ನಾಪ್ ಡೀಲ್ ನಲ್ಲಿ ಹೇರಳವಾಗಿ ಹೂಡಿಕೆ ಮಾಡಿರುವ ಜಪಾನ್ ನ ಸಾಫ್ಟ್ ಬ್ಯಾಂಕ್ ಸಂಸ್ಥೆಯ ಅಧಿಕಾರಿಗಳು ಹಾಗೂ ಸ್ನಾಪ್ ಡೀಲ್ ಆಡಳಿತ ಮಂಡಳಿಗಳು ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿವೆ ಎಂದು ಹೇಳಲಾಗಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications