'0' ಗೆ ಇಳಿದ ಹಣದುಬ್ಬರ; ಇದು 3 ವರ್ಷದಲ್ಲೇ ಕನಿಷ್ಠ
ನವದೆಹಲಿ, ಡಿ. 15: ಇದಕ್ಕೆ 'ಅಚ್ಚೇ ದಿನ್' ಎನ್ನಬಹುದು. ಆದರೆ, ಇದಕ್ಕೆ ನರೇಂದ್ರ ಮೋದಿ ಪರಿಣಾಮವೋ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಕಡಿಮೆಯಾದ ಕಾರಣವೋ ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ. ಒಟ್ಟು ಹಣದುಬ್ಬರದ ದರವು ನವೆಂಬರ್ ತಿಂಗಳಿನಲ್ಲಿ ಹೆಚ್ಚು ಕಡಿಮೆ ಶೇ. '0' ದಾಖಲಾಗಿದೆ. ಇದಕ್ಕೆ ನೇರ ಕಾರಣ ದೇಶದಲ್ಲಿ ಆಹಾರ, ಇಂಧನ ಮತ್ತು ಮಾನವ ಉತ್ಪಾದಿತ ವಸ್ತುಗಳ ಬೆಲೆ ಕಡಿಮೆಯಾಗುತ್ತಿರುವುದು.
ದೇಶದಲ್ಲಿ 'ಸಗಟು ಬೆಲೆ ಸೂಚ್ಯಂಕ' ಆಧಾರಿತ ಹಣದುಬ್ಬರದವು 2013ರ ಅಕ್ಟೋಬರ್ ತಿಂಗಳಿನಲ್ಲಿ ಶೇ. 1.77 ಹಾಗೂ ನವೆಂಬರ್ನಲ್ಲಿ ಶೇ. 7.52ರಷ್ಟಿತ್ತು. ಆದರೆ, 2014ರ ಮೇ ತಿಂಗಳಿನಿಂದ ಆಹಾರ ಹಣದುಬ್ಬರ ಇಳಿಲಾರಂಭಿಸಿತ್ತು. ಸೋಮವಾರ ಸರ್ಕಾರವು ಬಿಡುಗಡೆ ಮಾಡಿರುವ ಅಂಕಿ ಅಂಶದ ಪ್ರಕಾರ ಈ ಪ್ರಮಾಣವು ಮೂರು ವರ್ಷಗಳ ಕನಿಷ್ಠವಾದ ಶೇ. 0.63 ರಷ್ಟು ದಾಖಲಾಗಿದೆ. [ಹಣದುಬ್ಬರ ಕುಸಿತ, ಪೆಟ್ರೋ ಬೆಲೆ ಇಳಿಕೆ]

'ಸಗಟು ಬೆಲೆ ಸೂಚ್ಯಂಕ' ಬೆಲೆಯು 2009ರ ಜುಲೈ ತಿಂಗಳಿನಲ್ಲಿ ಶೇ. (-)0.3 ಪ್ರಮಾಣದಷ್ಟಿತ್ತು. ಅಕ್ಟೋಬರ್ ತಿಂಗಳಿನಲ್ಲಿ ಈರುಳ್ಳಿ ದರದ ಇಳಿಕೆ ಶೇ. 59.77ರಷ್ಟಿತ್ತು. ಈ ಪ್ರಮಾಣವು ಶೇ. 56.28 ಕ್ಕೆ ಕಡಿಮೆಯಾಗಿದೆ. ತರಕಾರಿಗಳ ಸಂಕೋಚನ ಪ್ರಮಾಣವು ಶೇ. 28.57ರಷ್ಟಿದೆ.
ಈ ಮಧ್ಯೆಯೂ, ಪ್ರೊಟೀನ್ ಭರಿತ ಆಹಾರಗಳಾದ ಮೊಟ್ಟಿ, ಮಾಂಸ ಮತ್ತು ಮೀನುಗಳು ನವೆಂಬರ್ ತಿಂಗಳಿನಲ್ಲಿ ಶೇ. 4.36ಕ್ಕೆ ಹೆಚ್ಚಳವಾಗಿವೆ. ಈ ಸಂದರ್ಭದಲ್ಲಿ ಬಟಾಟೆಯ ಹಣದುಬ್ಬರ ಪ್ರಮಾಣವು ಶೇ. 34.10ರಷ್ಟಿತ್ತು. [5 ವರ್ಷದಲ್ಲೇ ಅತಿ ಕಡಿಮೆ ಹಣದುಬ್ಬರ]
ಆದರೆ, ಮಾನವ ಉತ್ಪಾದಿತ ಆಹಾರ ಪದಾರ್ಥಗಳಾದ ಸಕ್ಕರೆ, ಖಾದ್ಯ ತೈಲ, ಪಾನೀಯಗಳು ಮತ್ತು ಸಿಮೆಂಟ್ ನವೆಂಬರ್ನಲ್ಲಿ ಶೇ. 2.04ಕ್ಕೆ ಬಿದ್ದವು. ಈ ಪ್ರಮಾಣವು ಅಕ್ಟೋಬರ್ನಲ್ಲಿ 2.43ರಷ್ಟಿತ್ತು. ಇಂಧನ ಮತ್ತು ವಿದ್ಯುತ್ ವಿಭಾಗದಲ್ಲಿ ಹಣದುಬ್ಬರ ಪ್ರಮಾಣದ ಇಳಿಕೆಯು ಅಕ್ಟೋಬರ್ನಲ್ಲಿ ಶೇ. 0.43ರಷ್ಟಿದ್ದರೆ ನವೆಂಬರ್ನಲ್ಲಿ ಶೇ. 4.91ರಷ್ಟು ದಾಖಲಾಗಿತ್ತು.
ಆರು ತಿಂಗಳುಗಳ ಕಾಲ ನಿರಂತರವಾಗಿ 'ಸಗಟು ಬೆಲೆ ಸೂಚ್ಯಂಕ' ಹಣದುಬ್ಬರದಲ್ಲಾದ ಇಳಿಕೆಯು ಚಿಲ್ಲರೆ ಮಾರಾಟದ ಇಳಿಕೆಯು ನವೆಂಬರ್ ತಿಂಗಳಿನಲ್ಲಿ ಕನಿಷ್ಠ ದಾಖಲೆಯಾದ ಶೇ. 4.38ರಷ್ಟು ಹಣದುಬ್ಬರಕ್ಕೆ ಕಾರಣವಾಯಿತು.
-
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ












Click it and Unblock the Notifications