ಪರಭಾಷಿಕರು ಕನ್ನಡ ಕಲಿಯುವಂತೆ ಮಾಡಲು ಬೆಂಗಳೂರು ಆಟೋ ಚಾಲಕರಿಗೆ ಸಲಹೆ ನೀಡಿದ ಮಹಿಳೆ: ಏನು ತಿಳಿಯಿರಿ?
ಬೆಂಗಳೂರು ನಗರದಲ್ಲಿ ಪರಭಾಷಿಕರಿಗೂ, ಸ್ಥಳೀಯರಿಗೂ ಆಗಾಗ ಘರ್ಷಣೆಗಳು ನಡೆಯವಂತಹ ವರದಿಗಳನ್ನು ನೋಡಿದ್ದೇವೆ. ಕಳೆದ ತಿಂಗಳು ಕೂಡ ಆಟೋರಿಕ್ಷಾ ಹಿಂದೆ ಪರಭಾಷಿಕರಿಗೆ ಕನ್ನಡ ಕಲಿಯುವಂತೆ ಬರೆದಿದ್ದ ಬರಹವೊಂದು ವೈರಲ್ ಆಗಿದ್ದಲ್ಲದೆ, ವಿವಾದಕ್ಕೂ ಕಾರಣವಾಗಿತ್ತು.
ಕನ್ನಡ ಕಲಿಯುವಂತೆ ಹೇಳಿದ್ದು ಒಳ್ಳೆಯದೆ ಆದರೆ ಪರಭಾಷಿಕರನ್ನು ಭಿಕ್ಷುಕರು ಎನ್ನುವಂತೆ ಉಲ್ಲೇಖಿಸಿದ್ದು ಸರಿಯಲ್ಲ ಎಂದು ಕೆಲವರು ಹೇಳಿದ್ದರು. ಆಟೋ ಚಾಲಕರು ಕನ್ನಡಾಭಿಮಾನಿಗಳು ಎನ್ನುವುದರಲ್ಲಿ ಯಾವ ಅನುಮಾನ ಇಲ್ಲ, ಆದರೆ ಪ್ರಯಾಣಿಕರು ಕನ್ನಡ ಮಾತನಾಡುವಂತೆ ಕೇಳುತ್ತಾರೆ.

ಈ ಎಲ್ಲದರ ನಡುವೆ, ದ್ರಾವಿಶಾ ಎಂಬ ಮಹಿಳೆ ಟ್ವಿಟರ್ನಲ್ಲಿ, ಪರಭಾಷಿಕರು ಕನ್ನಡ ಮಾತನಾಡಬೇಕು ಎಂದು ನಿರೀಕ್ಷಿಸುವ ಬೆಂಗಳೂರಿನ ಆಟೋ ಚಾಲಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಆಟೋಚಾಲಕರಿಗೆ ಕೊಟ್ಟ ಸಲಹೆಗಳು
ಟ್ವಿಟರ್ ನಲ್ಲಿ ಅವರು ಬರೆದಿದ್ದಾರೆ, "ಬೆಂಗಳೂರು ಆಟೋ ಚಾಲಕರಿಗೆ ಐಡಿಯಾ: ಜನರು ಕನ್ನಡ ಮಾತನಾಡಲಿ ಎಂದು ಅಸಭ್ಯವಾಗಿ ಪೋಸ್ಟರ್ ಹಾಕುವ ಬದಲು, ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಗತಿ ಇಲ್ಲಿದೆ." ಎಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಆಟೋಗಳ ಒಳಗೆ ಸಣ್ಣ ಪೋಸ್ಟರ್ಗಳು/ಪ್ಲಕಾರ್ಡ್ಗಳನ್ನು ಹಾಕಿರಿ, ಅದು ನಮಗೆ ಸರಳ ಮತ್ತು ಅವಶ್ಯಕ ಪದಗಳನ್ನು ಕಲಿಯಲು ಸಹಾಯ ಮಾಡುತ್ತದೆ (ಉದಾ: ದರ ಎಷ್ಟು ಆಗಿದೆ? ನೀವು ಎಡಕ್ಕೆ ಹೋಗಬಹುದೇ? ಇತ್ಯಾದಿ.) ಚಾಲಕರೊಂದಿಗೆ ಕನ್ನಡದಲ್ಲಿ ಮಾತನಾಡಲು ಜನರನ್ನು ಕೇಳುವ ಸಭ್ಯವಾಗಿ ಮಾತನಾಡಿ. ಕನ್ನಡವನ್ನು ರಕ್ಷಿಸುವ ಉತ್ಸಾಹವನ್ನು ಪ್ರದರ್ಶಿಸಲು ಕನ್ನಡಕ್ಕೆ ಹೇಗೆ ತೊಂದರೆಯಾಗುತ್ತಿದೆ ಎಂಬುದರ ಕುರಿತು ಸಂಖ್ಯೆಗಳನ್ನು ಸೇರಿಸಿ. ಇದನ್ನು ಕಾರ್ಯಗತಗೊಳಿಸಲು ನಮ್ಮ ಯಾತ್ರಿ ಸಹಾಯ ಮಾಡುತ್ತದೆ ." ಎಂದು ಹೇಳಿದ್ದಾರೆ.
ನಂತರದ ಟ್ವೀಟ್ನಲ್ಲಿ ಅವರು ಬರೆದಿದ್ದಾರೆ, "ಇದರಿಂದ ಎಲ್ಲವೂ ಬದಲಾಗುತ್ತದೆ ಎಂದು ಅಂದುಕೊಳ್ಳವುದಿಲ್ಲ. ಆದರೆ ನಮ್ಮ ಯಾತ್ರಿ, ಉಬರ್ ಮತ್ತು ಓಲಾದಂತಹ ಅಪ್ಲಿಕೇಶನ್ಗಳು ಪ್ರಾದೇಶಿಕ ಭಾಷಾ ನುಡಿಗಟ್ಟುಗಳನ್ನು ಪರಿಚಯಿಸಲು ಸಾಧ್ಯ. ಭೌಗೋಳಿಕ ಸ್ಥಳವನ್ನು ಆಧರಿಸಿ ಸಂವಹನ ನಡೆಸಲು ಡ್ರೈವರ್ಗಳೊಂದಿಗೆ ಬಳಸಿ.
ನನ್ನ ಟ್ವೀಟ್ 100 ಪ್ರತಿಶತ ಮಾನ್ಯವಲ್ಲ ಆದರೆ ಈಗ ಆಗುತ್ತಿರುವ ಘರ್ಷಣೆಯನ್ನು ತಪ್ಪಿಸು ಆಲೋಚನೆಯಿಂದ ಉತ್ತಮವಾಗಿದೆ. ಎಲ್ಲರ ಪ್ರತಿಕ್ರಿಯೆಗಳಿಗೂ ಮುಕ್ತವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪೋಸ್ಟ್ಗೆ ವ್ಯಾಪಕ ಮೆಚ್ಚುಗೆ
ಮಹಿಳೆಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಟ್ವೀಟ್ ಮಾಡಿದ ನಂತರ, ಪೋಸ್ಟ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
ಪೋಸ್ಟ್ನಲ್ಲಿ ಕಾಮೆಂಟ್ ಮಾಡುತ್ತಾ, ಬಳಕೆದಾರರು ಬರೆದಿದ್ದಾರೆ, "ಉಬರ್, ಓಲಾ ಕಾರ್ಯಗತಗೊಳಿಸಲು ಅದ್ಭುತವಾದ ಕಲ್ಪನೆಯಾಗಿದೆ. ಇದು ಪರಭಾಷಿಕರಿಗೆ ಕನ್ನಡ ಕಲಿಯಲು ಉತ್ತೇಜನ ನೀಡದೇ ಇದ್ದರೂ, ಅವರಿಗೆ ಎಲ್ಲರಿಗೂ ಹಿಂದಿ ಬರುವುದಿಲ್ಲ ಎನ್ನುವುದು ಅರ್ಥವಾಗುತ್ತದೆ" ಎಂದು ಹೇಳಿದ್ದಾರೆ.
"ಅನೇಕರು ಒಪ್ಪದಿರಬಹುದು ಆದರೆ ಖಂಡಿತವಾಗಿ ಅಂತರವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಲ್ಪನೆಯನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ. ನೀವು ನಮ್ಮ ಯಾತ್ರಿ ತಂಡದೊಂದಿಗೆ ಮಾತನಾಡಬೇಕಾಗಬಹುದು ಇದು ಮೊಬೈಲ್ ಅಪ್ಲಿಕೇಶನ್ನ ಭಾಗವೂ ಆಗಿರಬಹುದು. ನಾವು ಪ್ರಪಂಚದ ಟ್ರಿಪ್ಗೆ ಹೋದಾಗ, ನಾವು ಫ್ರೆಂಚ್ ಅಥವಾ ಡಚ್ ಭಾಷಾ ಅನುವಾದಕವನ್ನು ಬಳಸುತ್ತೇವೆ ಕನ್ನಡ ಏಕೆ ಅಲ್ಲ" ಎಂದು ಮೂರನೇ ಬಳಕೆದಾರರು ಟ್ವಿಟರ್ನಲ್ಲಿ ಬರೆದಿದ್ದಾರೆ.
-
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್












Click it and Unblock the Notifications