ಪರಭಾಷಿಕರು ಕನ್ನಡ ಕಲಿಯುವಂತೆ ಮಾಡಲು ಬೆಂಗಳೂರು ಆಟೋ ಚಾಲಕರಿಗೆ ಸಲಹೆ ನೀಡಿದ ಮಹಿಳೆ: ಏನು ತಿಳಿಯಿರಿ?
ಬೆಂಗಳೂರು ನಗರದಲ್ಲಿ ಪರಭಾಷಿಕರಿಗೂ, ಸ್ಥಳೀಯರಿಗೂ ಆಗಾಗ ಘರ್ಷಣೆಗಳು ನಡೆಯವಂತಹ ವರದಿಗಳನ್ನು ನೋಡಿದ್ದೇವೆ. ಕಳೆದ ತಿಂಗಳು ಕೂಡ ಆಟೋರಿಕ್ಷಾ ಹಿಂದೆ ಪರಭಾಷಿಕರಿಗೆ ಕನ್ನಡ ಕಲಿಯುವಂತೆ ಬರೆದಿದ್ದ ಬರಹವೊಂದು ವೈರಲ್ ಆಗಿದ್ದಲ್ಲದೆ, ವಿವಾದಕ್ಕೂ ಕಾರಣವಾಗಿತ್ತು.
ಕನ್ನಡ ಕಲಿಯುವಂತೆ ಹೇಳಿದ್ದು ಒಳ್ಳೆಯದೆ ಆದರೆ ಪರಭಾಷಿಕರನ್ನು ಭಿಕ್ಷುಕರು ಎನ್ನುವಂತೆ ಉಲ್ಲೇಖಿಸಿದ್ದು ಸರಿಯಲ್ಲ ಎಂದು ಕೆಲವರು ಹೇಳಿದ್ದರು. ಆಟೋ ಚಾಲಕರು ಕನ್ನಡಾಭಿಮಾನಿಗಳು ಎನ್ನುವುದರಲ್ಲಿ ಯಾವ ಅನುಮಾನ ಇಲ್ಲ, ಆದರೆ ಪ್ರಯಾಣಿಕರು ಕನ್ನಡ ಮಾತನಾಡುವಂತೆ ಕೇಳುತ್ತಾರೆ.

ಈ ಎಲ್ಲದರ ನಡುವೆ, ದ್ರಾವಿಶಾ ಎಂಬ ಮಹಿಳೆ ಟ್ವಿಟರ್ನಲ್ಲಿ, ಪರಭಾಷಿಕರು ಕನ್ನಡ ಮಾತನಾಡಬೇಕು ಎಂದು ನಿರೀಕ್ಷಿಸುವ ಬೆಂಗಳೂರಿನ ಆಟೋ ಚಾಲಕರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ.
ಆಟೋಚಾಲಕರಿಗೆ ಕೊಟ್ಟ ಸಲಹೆಗಳು
ಟ್ವಿಟರ್ ನಲ್ಲಿ ಅವರು ಬರೆದಿದ್ದಾರೆ, "ಬೆಂಗಳೂರು ಆಟೋ ಚಾಲಕರಿಗೆ ಐಡಿಯಾ: ಜನರು ಕನ್ನಡ ಮಾತನಾಡಲಿ ಎಂದು ಅಸಭ್ಯವಾಗಿ ಪೋಸ್ಟರ್ ಹಾಕುವ ಬದಲು, ಉತ್ತಮವಾಗಿ ಕಾರ್ಯನಿರ್ವಹಿಸುವ ಸಂಗತಿ ಇಲ್ಲಿದೆ." ಎಂದು ಸಲಹೆಗಳನ್ನು ಹಂಚಿಕೊಂಡಿದ್ದಾರೆ.
ಆಟೋಗಳ ಒಳಗೆ ಸಣ್ಣ ಪೋಸ್ಟರ್ಗಳು/ಪ್ಲಕಾರ್ಡ್ಗಳನ್ನು ಹಾಕಿರಿ, ಅದು ನಮಗೆ ಸರಳ ಮತ್ತು ಅವಶ್ಯಕ ಪದಗಳನ್ನು ಕಲಿಯಲು ಸಹಾಯ ಮಾಡುತ್ತದೆ (ಉದಾ: ದರ ಎಷ್ಟು ಆಗಿದೆ? ನೀವು ಎಡಕ್ಕೆ ಹೋಗಬಹುದೇ? ಇತ್ಯಾದಿ.) ಚಾಲಕರೊಂದಿಗೆ ಕನ್ನಡದಲ್ಲಿ ಮಾತನಾಡಲು ಜನರನ್ನು ಕೇಳುವ ಸಭ್ಯವಾಗಿ ಮಾತನಾಡಿ. ಕನ್ನಡವನ್ನು ರಕ್ಷಿಸುವ ಉತ್ಸಾಹವನ್ನು ಪ್ರದರ್ಶಿಸಲು ಕನ್ನಡಕ್ಕೆ ಹೇಗೆ ತೊಂದರೆಯಾಗುತ್ತಿದೆ ಎಂಬುದರ ಕುರಿತು ಸಂಖ್ಯೆಗಳನ್ನು ಸೇರಿಸಿ. ಇದನ್ನು ಕಾರ್ಯಗತಗೊಳಿಸಲು ನಮ್ಮ ಯಾತ್ರಿ ಸಹಾಯ ಮಾಡುತ್ತದೆ ." ಎಂದು ಹೇಳಿದ್ದಾರೆ.
ನಂತರದ ಟ್ವೀಟ್ನಲ್ಲಿ ಅವರು ಬರೆದಿದ್ದಾರೆ, "ಇದರಿಂದ ಎಲ್ಲವೂ ಬದಲಾಗುತ್ತದೆ ಎಂದು ಅಂದುಕೊಳ್ಳವುದಿಲ್ಲ. ಆದರೆ ನಮ್ಮ ಯಾತ್ರಿ, ಉಬರ್ ಮತ್ತು ಓಲಾದಂತಹ ಅಪ್ಲಿಕೇಶನ್ಗಳು ಪ್ರಾದೇಶಿಕ ಭಾಷಾ ನುಡಿಗಟ್ಟುಗಳನ್ನು ಪರಿಚಯಿಸಲು ಸಾಧ್ಯ. ಭೌಗೋಳಿಕ ಸ್ಥಳವನ್ನು ಆಧರಿಸಿ ಸಂವಹನ ನಡೆಸಲು ಡ್ರೈವರ್ಗಳೊಂದಿಗೆ ಬಳಸಿ.
ನನ್ನ ಟ್ವೀಟ್ 100 ಪ್ರತಿಶತ ಮಾನ್ಯವಲ್ಲ ಆದರೆ ಈಗ ಆಗುತ್ತಿರುವ ಘರ್ಷಣೆಯನ್ನು ತಪ್ಪಿಸು ಆಲೋಚನೆಯಿಂದ ಉತ್ತಮವಾಗಿದೆ. ಎಲ್ಲರ ಪ್ರತಿಕ್ರಿಯೆಗಳಿಗೂ ಮುಕ್ತವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪೋಸ್ಟ್ಗೆ ವ್ಯಾಪಕ ಮೆಚ್ಚುಗೆ
ಮಹಿಳೆಯ ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹಲವರ ಮೆಚ್ಚುಗೆಗೆ ಕಾರಣವಾಗಿದೆ. ಟ್ವೀಟ್ ಮಾಡಿದ ನಂತರ, ಪೋಸ್ಟ್ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ಗಳಲ್ಲಿ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.
ಪೋಸ್ಟ್ನಲ್ಲಿ ಕಾಮೆಂಟ್ ಮಾಡುತ್ತಾ, ಬಳಕೆದಾರರು ಬರೆದಿದ್ದಾರೆ, "ಉಬರ್, ಓಲಾ ಕಾರ್ಯಗತಗೊಳಿಸಲು ಅದ್ಭುತವಾದ ಕಲ್ಪನೆಯಾಗಿದೆ. ಇದು ಪರಭಾಷಿಕರಿಗೆ ಕನ್ನಡ ಕಲಿಯಲು ಉತ್ತೇಜನ ನೀಡದೇ ಇದ್ದರೂ, ಅವರಿಗೆ ಎಲ್ಲರಿಗೂ ಹಿಂದಿ ಬರುವುದಿಲ್ಲ ಎನ್ನುವುದು ಅರ್ಥವಾಗುತ್ತದೆ" ಎಂದು ಹೇಳಿದ್ದಾರೆ.
"ಅನೇಕರು ಒಪ್ಪದಿರಬಹುದು ಆದರೆ ಖಂಡಿತವಾಗಿ ಅಂತರವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕಲ್ಪನೆಯನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ. ನೀವು ನಮ್ಮ ಯಾತ್ರಿ ತಂಡದೊಂದಿಗೆ ಮಾತನಾಡಬೇಕಾಗಬಹುದು ಇದು ಮೊಬೈಲ್ ಅಪ್ಲಿಕೇಶನ್ನ ಭಾಗವೂ ಆಗಿರಬಹುದು. ನಾವು ಪ್ರಪಂಚದ ಟ್ರಿಪ್ಗೆ ಹೋದಾಗ, ನಾವು ಫ್ರೆಂಚ್ ಅಥವಾ ಡಚ್ ಭಾಷಾ ಅನುವಾದಕವನ್ನು ಬಳಸುತ್ತೇವೆ ಕನ್ನಡ ಏಕೆ ಅಲ್ಲ" ಎಂದು ಮೂರನೇ ಬಳಕೆದಾರರು ಟ್ವಿಟರ್ನಲ್ಲಿ ಬರೆದಿದ್ದಾರೆ.
-
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ












Click it and Unblock the Notifications