ಕಳಸಾ-ಬಂಡೂರಿಗಾಗಿ ವಾಟಾಳ್ ಹಾಸಿಗೆ-ದಿಂಬು ಪ್ರತಿಭಟನೆ
ಬೆಂಗಳೂರು, ನವೆಂಬರ್ 20 : ಕಳಸಾ-ಬಂಡೂರಿ ನಾಲಾ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ವಾಟಾಳ್ ನಾಗರಾಜ್ ಶುಕ್ರವಾರ ಪ್ರತಿಭಟನೆ ನಡೆಸಿದರು. ಹೈದ್ರಾಬಾದ್-ಕರ್ನಾಟಕ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಯೋಜನೆಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಂಪೇಗೌಡ
ಬಸ್
ನಿಲ್ದಾಣದ
ಬಳಿಗೆ
ತಟ್ಟೆ,
ಲೋಟ,
ಹಾಸಿಗೆ,
ದಿಂಬುಗಳೊಂದಿಗೆ
ಬಂದ
ಕನ್ನಡ
ಚಳವಳಿ
ವಾಟಾಳ್
ಪಕ್ಷದ
ಅಧ್ಯಕ್ಷ
ವಾಟಾಳ್
ನಾಗರಾಜ್
ಅವರು,
ಹಾಸಿಗೆ
ಹಾಸಿಕೊಂಡು
ಮಲಗಿ,
ಪ್ರತಿಭಟನೆ
ನಡೆಸುವ
ಮೂಲಕ
ಜನರನ್ನು
ಸೆಳೆದರು.
[ಕಳಸಾ-ಬಂಡೂರಿ
:
ನ್ಯಾಯಾಧೀಕರಣದ
ಮುಂದೆ
ಮಧ್ಯಂತರ
ಅರ್ಜಿ]
ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಕಳಸಾ-ಬಂಡೂರಿ ಯೋಜನೆ ಹಾಗೂ ಮೇಕೆದಾಟು ಕುಡಿಯುವ ನೀರಿನ ಯೋಜನೆ ಶೀಘ್ರವಾಗಿ ಕಾರ್ಯಗತವಾಗಬೇಕು. ಗೋವಾದಲ್ಲಿರುವ ಕನ್ನಡಿಗರಿಗೆ ರಕ್ಷಣೆ ಸಿಗಬೇಕು' ಎಂದು ಒತ್ತಾಯಿಸಿದರು. [ಏನಿದು ಕಸಳಾ-ಬಂಡೂರಿ ಯೋಜನೆ]
ಹೈದರಾಬಾದ್-ಕರ್ನಾಟಕ
ಭಾಗದ
ಅಭಿವೃದ್ಧಿ
ಬಗ್ಗೆ
ಬೆಳಗಾವಿ
ಹಾಗೂ
ಬೆಂಗಳೂರಿನಲ್ಲಿ
ನಡೆದ
ಅಧಿವೇಶನದಲ್ಲಿ
ಚರ್ಚೆಯಾಗುತ್ತಿಲ್ಲ
ಎಂದು
ಆರೋಪಿಸಿದ
ವಾಟಾಳ್
ನಾಗರಾಜ್
ಅವರು,
ಹೈದ್ರಾಬಾದ್
ಕರ್ನಾಟಕದ
ಜನರ
ನಿರೀಕ್ಷೆಗಳು
ಹುಸಿಯಾಗಿವೆ
ಎಂದು
ದೂರಿದರು.
'ಸದ್ಯ ನಡೆಯುತ್ತಿರುವ ಅಧಿವೇಶನದಲ್ಲಿ ಕಳಸಾ-ಬಂಡೂರಿ ಸೇರಿದಂತೆ ಎಲ್ಲಾ ಯೋಜನೆಗಳ ಬಗ್ಗೆ ಚರ್ಚೆ ನಡೆಸಬೇಕು. ಗೋವಾ-ಮಹಾರಾಷ್ಟ್ರ-ಕರ್ನಾಟಕದ ಮುಖ್ಯಮಂತ್ರಿಗಳ ಸಭೆಯನ್ನು ಪ್ರಧಾನಿ ಅವರು ಕರೆಯಬೇಕು' ಎಂದು ಆಗ್ರಹಿಸಿದರು.