ಬೆಂಗಳೂರಿನಿಂದ ಶಿರಡಿಗೆ ವಾರದ 6 ದಿನ ವಿಮಾನ
ಬೆಂಗಳೂರು, ಡಿಸೆಂಬರ್ 19: ಬೆಂಗಳೂರಿನಿಂದ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳುವವರಿಗೆ ಸ್ಪೈಸ್ ಜೆಟ್ ವಿಮಾನ ಸೌಲಭ್ಯ ಒದಗಿಸುತ್ತಿದೆ. ಮಂಗಳವಾರ ಹೊರತುಪಡಿಸಿ ವಾರದ 6 ದಿನಗಳ ವಿಮಾನಯಾನ ಲಭ್ಯವಿರಲಿದೆ.
2019ರ ಜನವರಿ 6 ರಿಂದ ಈ ಸೇವೆ ಆರಂಭವಾಗಲಿದ್ದು, ಒಂದು ಗಂಟೆ ನಲವತ್ತೈದು ನಿಮಿಷದ ಪ್ರಯಾಣದ ಅವಧಿಗೆ ಆರಂಭಿಕ ಟಿಕೆಟ್ ದರ ಸುಮಾರು 4,367 ರೂಪಾಯಿಗಳಾಗಿದೆ.
ಟಿಕೆಟ್ ಬುಕ್ಕಿಂಗ್ ಈಗಾಗಲೇ ಆರಂಭವಾಗಿದ್ದು, ಮಧ್ಯಾಹ್ನ 2.25 ಕ್ಕೆ ಹೊರಡುವ ವಿಮಾನ ಸಂಜೆ 4.10 ಕ್ಕೆ ತಲುಪುತ್ತದೆ. ಸ್ಪೈಸ್ ಜೆಟ್ ನ 90ಸೀಟುಗಳ ಎರಡು ಏರ್ ಕ್ರಾಫ್ಟ್ ವಿಮಾನಗಳು(ಎಸ್ ಜಿ 1268) ಕಾರ್ಯ ನಿರ್ವಹಿಸಲಿವೆ. ಶಿರಡಿಯಿಂದ ವಿಮಾನಗಳು 12.10PM ಗೆ ಹೊರಟು 1.55pmಗೆ ತಲುಪಲಿವೆ.

ಹೈದರಾಬಾದ್ ಮೂಲಕ ಸಂಪರ್ಕ ವಿಮಾನಯಾನ
ಎಸ್ ಜಿ 3577 ಇದಕ್ಕೆ ಸಂಪರ್ಕ ವಿಮಾನವಾಗಿದ್ದು, 11.20amಗೆ ಶಿರಡಿ ಬಿಟ್ಟು ಹೈದರಾಬಾದಿಗೆ 12.40PM ಗೆ ತಲುಪಲಿವೆ. ನಂತರ ಹೈದರಾಬಾದ್ 4.45pm ಬಿಟ್ಟು 5.20pm ಗೆ ಬೆಂಗಳೂರು ತಲುಪಲಿವೆ.
ಹನ್ನೆರೆಡು ದೇಶೀಯ ವಿಮಾನಯಾನ ಸಂಸ್ಥೆಗಳು ಅನುಮೋದನೆ ಪಡೆದಿದೆ. ಈಗಾಗಲೇ ದೇಶದ ವಿವಿಧ ನಗರಗಳಿಗೆ ಹಾರಾಟ ನಡೆಸಲು ಸ್ಪೈಸ್ ಜೆಟ್, ಜೆಟ್ ಏರ್, ಟ್ರು ಏರ್ ಸಂಸ್ಥೆಗಳು ಸಿದ್ಧವಾಗಿವೆ.

ವಾರಪೂರ್ತಿ ನೇರ ವಿಮಾನ ಶೀಘ್ರದಲ್ಲೇ
ಏರ್ ಕ್ರಾಫ್ಟ್ ಎಸ್ ಜಿ 1268 ಮಂಗಳವಾರ ಒಂದು ದಿನ ಹೊರತುಪಡಿಸಿ ಉಳಿದೆಲ್ಲ ದಿನ ಸಂಚರಿಸಲಿದೆ. ಮಂಗಳವಾರ ಸಂಚಾರಕ್ಕೆ ಎಸ್ ಜಿ 3577 ಬಳಕೆಯಾಗುತ್ತಿದ್ದು, ಸದ್ಯದಲ್ಲೇ ವಾರಪೂರ್ತಿ ಬೆಂಗಳೂರಿನಿಂದ ಶಿರಡಿಗೆ ನೇರ ವಿಮಾನ ಸೇವೆ ಒದಗಿಸಲಾಗುವುದು ಎಂದು ಸ್ಪೈಸ್ ಜೆಟ್ ಹೇಳಿದೆ.

ನೇರ ಬೋಯಿಂಗ್ ವಿಮಾನ ಸೇವೆ
ಬೆಂಗಳೂರು ಅಷ್ಟೇ ಅಲ್ಲದೆ ಮುಂಬೈ, ಹೈದರಾಬಾದ್ ಇತರೆ ಪ್ರದೇಶಗಳಿಗೂ ವಿಮಾನಯಾನ ಸಂಸ್ಥೆಗಳು ಸೇವೆ ಒದಗಿಸಲು ಮುಂದಾಗಿದೆ. ಹೈದರಾಬಾದ್ ಹಾಗೂ ಮುಂಬೈ ನಿಂದ ಶಿರಡಿಗೆ ತೆರಳುವ ವಿಮಾನಗಳಿಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. 189 ಆಸನ ಸಾಮರ್ಥ್ಯ ಗಳನ್ನು ಒಳಗೊಂಡಿರುವ ದೆಹಲಿ-ಶಿರಡಿ ನೇರ ಬೋಯಿಂಗ್ ವಿಮಾನ ಸೇವೆಯನ್ನು ಆರಂಭಿಸಲಾಗುತ್ತಿದೆ.

ವಿವಿಧ ನಗರಗಳಿಂದ ವಿಮಾನ ಸಂಪರ್ಕ
ಚೆನ್ನೈನಿಂದಲೂ ಶಿರಡಿಗೆ ವಾರಣಸಿಗೆ ವಿಮಾನಯಾನ ಆರಂಭವಾಗಲಿದೆ. ಜನವರಿ 10, 2019ರ ನಂತರ ಎಲ್ಲಾ ವಾಣಿಜ್ಯ ವಿಮಾನ ಹಾರಾಟ ಆರಂಭವಾಗಲಿದೆ, ಫೆಬ್ರವರಿ 11ರ ವೇಳೆಗೆ ದೇಶದ ವಿವಿಧ ನಗರಗಳಿಂದ ಶಿರಡಿಗೆ ವಿಮಾನ ಸಂಪರ್ಕ ಸಾಧ್ಯವಾಗಲಿದೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications