Get Updates
Get notified of breaking news, exclusive insights, and must-see stories!

ತೆರೆಮರೆಯ ಸಾಧಕರಿಗೆ ಮಾ.7ರಂದು ಪ್ರಣಾಮ್ ಕಾರ್ಯಕ್ರಮ

ಬೆಂಗಳೂರು, ಮಾರ್ಚ್ 6: ಮಹಿಳಾ ಸಬಲೀಕರಣ, ಸೇವಾಬಸ್ತಿಗಳಲ್ಲಿ ಸಂಸ್ಕಾರವರ್ಧನೆ, ಮಕ್ಕಳ ಮನೋವಿಕಾಸ ಸೇರಿ ಹಲವು ಸೇವಾ ಚಟುವಟಿಕೆಗಳಲ್ಲಿ ತೊಡಗಿರುವ ಸೋದರಿ ನಿವೇದಿತಾ ಪ್ರತಿಷ್ಠಾನವು ಸಮಾಜದ ತೆರೆಮರೆಯ ಸಾಧಕರನ್ನು, ಅವರ ಜೀವನಗಾಥೆಯನ್ನು ಪರಿಚಯಿಸುತ್ತಿದೆ.

ಮಾರ್ಚ್ 7ರಂದು (ಭಾನುವಾರ) ಪ್ರಣಾಮ್' ಶೀರ್ಷಿಕೆಯಲ್ಲಿ ನಡೆಯಲಿರುವ ಈ ವಿಶೇಷ ಕಾರ್ಯಕ್ರಮದಲ್ಲಿ ಅಪೂರ್ವ ಸಾಧಕರು, ಪ್ರೇರಣಾಶಕ್ತಿಗಳು ಅವರ ಸಾಧನಾಪಥವನ್ನು ವಿವರಿಸಲಿದ್ದಾರೆ.

ಯಶವಂತಪುರದ ಬಾಪು ವಿದ್ಯಾ ಸಂಸ್ಥೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪ್ರಣಾಮ್'ಗೆ ಚಾಲನೆ ಸಿಗಲಿದೆ. ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ಕಾದಾಡಿ ವೀರಮರಣವನ್ನಪ್ಪಿದ ಯೋಧ ಮೇಜರ್ ಅಕ್ಷಯ ಗಿರೀಶ್ ಅವರ ತಾಯಿ ಮೇಘನಾ ಗಿರೀಶ್ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Sister Nivedita Pratishtana Organisations The Pranam Event On May 7th For Backstage Achievers

ಮೊದಲ ದೃಷ್ಟಿಹೀನ ಲೆಕ್ಕ ಪರಿಶೋಧಕಿ (ಸಿಎ) ರಜನಿ ಗೋಪಾಲಕೃಷ್ಣ ಪಾಲ್ಗೊಳ್ಳಲಿದ್ದಾರೆ. ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನದ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಉಪಸ್ಥಿತರಿರಲಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+