ಖಾದಿ ಭಂಡಾರ್ನಲ್ಲಿ 30 ಪಂಚೆ ಖರೀದಿಸಿದ ಸಿದ್ದರಾಮಯ್ಯ
ಬೆಂಗಳೂರು, ಜೂ. 1: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಬಿಡುವಿಲ್ಲದ ರಾಜಕೀಯದ ಮಧ್ಯೆಯೂ ತಮ್ಮ ವೈಯಕ್ತಿಕ ಜೀವನ, ಓದು, ಕಲೆಗೆ ಒಂದಷ್ಟು ಸಮಯ ಮೀಸಲು ಇಟ್ಟಿರುತ್ತಾರೆ. ಹೀಗೆ ಬುಧವಾರ ಮಧ್ಯಾಹ್ನ ಬಿಡುವಾಗಿದ್ದ ಸಿದ್ದರಾಮಯ್ಯ ಅವೆನ್ಯೂ ರಸ್ತೆಯಲ್ಲಿ ಶಾಪಿಂಗ್ಗೆ ತೆರಳಿದ್ದರು.
ಸದ್ಯ ರಾಜ್ಯದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದೆ. ಪ್ರತಿನಿತ್ಯವೂ ರಾಜಕೀಯದ ಚಟುವಟಿಕೆಗಳು ಬಿರುಸಾಗಿಯೇ ಇವೆ. ಈ ಮಧ್ಯೆ ಪಂಚೆಪ್ರಿಯ ಸಿದ್ದರಾಮಯ್ಯ ತಮ್ಮ ಕಾರು ಹತ್ತಿ ನೇರವಾಗಿ ಅವೆನ್ಯೂ ರಸ್ತೆಯ ಖಾದಿ ಭಂಡಾರ್ ಮಳಿಗೆಗೆ ಭೇಟಿ ನೀಡಿದರು. ಸಿದ್ದರಾಮಯ್ಯ ಬಂದಿದ್ದನ್ನು ಕಂಡು ಮಳಿಗೆ ಸಿಬ್ಬಂದಿಯೂ ಒಂದು ಕ್ಷಣ ಅಚ್ಚರಿಯಾದರು. ಪಂಚೆ ತೋರಿಸಯ್ಯಾ.. ಹೊಸದು ಯಾವುದು ಯಾವುದು ಬಂದಿದೆ ತೆಗಿಯಯ್ಯಾ ನೋಡೋಣ.. ಎಂದು ಅಂಗಡಿಯೊಳಗೆ ಹೆಜ್ಜೆ ಹಾಕಿದರು.

ಸದಾ ಪಂಚೆಯಲ್ಲಿಯೆ ಮಿಂಚುವ ಸಿದ್ದರಾಮಯ್ಯ ಮಾರುಕಟ್ಟೆಗೆ ಹೊಸದಾಗಿ ಬಂದಿರುವ ತರಹೇವಾರಿ ಪಂಚೆಗಳನ್ನು ನೋಡಿದರು. ತಮಗೆ ಇಷ್ಟವಾದಂತಹ 30ಕ್ಕೂ ಹೆಚ್ಚು ಪಂಚೆಗಳನ್ನು ಖರೀದಿ ಮಾಡಿದರು. ಪ್ರತಿ ಪಂಚೆಗೂ 650 ರೂ. ಬೆಲೆ ಇತ್ತು. ಅದರಲ್ಲಿಯೂ 40 ಪರ್ಸೆಂಟ್ ಡಿಸ್ಕೌಂಟ್ ಕೇಳಿ ಪಡೆದು ಬಿಲ್ ಹಾಕಿಸಿದರು ಸಿದ್ದರಾಮಯ್ಯ.
ಇತ್ತೀಚೆಗೆ ಶೂ ಖರೀದಿಸಿದ್ದ ಸಿದ್ದರಾಮಯ್ಯ:
ಕಳೆದ ಜನವರಿಯಲ್ಲಿ ನಡೆದಿದ್ದ ಮೇಕೆದಾಟು ಪಾದಯಾತ್ರೆಯಲ್ಲಿ ಪಾಳ್ಗೊಳ್ಳಬೇಕು, ಮೇಕೆದಾಟು ಯಿಂದ ಬೆಂಗಳೂರುವರೆಗೂ ನಡೆದುಬರಬೇಕು ಎಂದು ಸಿದ್ದರಾಮಯ್ಯ ಎಂ.ಜಿ. ರಸ್ತೆಯ ಮಳಿಗೆಯೊಂದಕ್ಕೆ ಹೋಗಿ ತಾವೇ ಶೂ ಖರೀದಿಸಿದ್ದರು. 8000 ಬೆಲೆಯ ಎರಡು ಜೊತೆ ಶೂ ಖರೀದಿಸಿದ್ದರು.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
ಹಿಂದಿ ಹೆಚ್ಚು ಜನ ಮಾತನಾಡುವ ಭಾಷೆ, ವಿದ್ಯಾರ್ಥಿಗಳು ಎಲ್ಲ ಭಾಷೆ ಕಲಿಯಬೇಕು: ಶ್ರೀರಾಮುಲು -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
ಸಕಲೇಶಪುರದಲ್ಲಿ ಫೋಟೋಗ್ರಾಫರ್ಗಳ ಮೇಲೆ ಹಲ್ಲೆ ಪ್ರಕರಣ: ದುಬಾರಿ ಕ್ಯಾಮೆರಾಗೆ ಹಾನಿ, ಆರೋಪಿಗಳ ಬಂಧನ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್












Click it and Unblock the Notifications