ಅಕ್ರಮ ತಡೆಯಲು ಮುಂದಾದ ಪಿಎಸ್ಐಗೆ ಸರ್ಕಲ್ ಇನ್ಸ್ಪೆಕ್ಟರ್ ಆವಾಜ್
ಬೆಂಗಳೂರು, ಜೂನ್ 12: ಅಕ್ರಮ ಕಲ್ಲುಸಾಗಣಿಕೆ ಲಾರಿಯನ್ನು ತಡೆದ ಪಿಎಸ್ಐ ಮೇಲೆ ಸರ್ಕಲ್ ಇನ್ಸ್ಪೆಕ್ಟರ್ ಕಾದಾಟ ನಡೆಸಿರುವ ಘಟನೆ ಬೆಂಗಳೂರು ಹೊರವಲಯದ ದೇವನಹಳ್ಳಿಯಲ್ಲಿ ನಡೆದಿದೆ.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರದಲ್ಲಿ ಘಟನೆ ನಡೆದಿದ್ದು, ಅಕ್ರಮವಾಗಿ ಕಲ್ಲು ಸಾಗಾಣಿಕೆ ಮಾಡಲಾಗುತ್ತಿದೆ ಎನ್ನವು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಲಾರಿಯನ್ನು ಪಿಎಸ್ಐ ತಡೆದಿದ್ದಾರೆ ಆದರೆ ಲಾರಿಯನ್ನು ಏಕೆ ತಡೆದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ಪಿಎಸ್ಐ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ.
ಬನ್ನೇರುಘಟ್ಟ ಜೈವಿಕ ಉದ್ಯಾನ ಸುತ್ತ ಕಲ್ಲು ಗಣಿಗಾರಿಕೆ ರದ್ದು!
ಅಕ್ರಮ ಲಾರಿಗಳನ್ನು ಬಿಡುವಂತೆ ವಿಶ್ವನಾಥಪುರ ಪಿಎಸ್ಐ ಶ್ರೀನಿವಾಸ್ಗೆ ಮೊಬೈಲ್ ಮೂಲಕ ಅದೇ ತಾಲೂಕಿನ ವಿಜಯಪುರ ಸರ್ಕಲ್ ಇನ್ಸ್ಪೆಕ್ಟರ್ ಮಂಜುನಾಥ್ ಧಮ್ಕಿ ಹಾಕಿದ್ದಾರೆ.
ಜೆಡಿಎಸ್ ಮುಖಂಡರೊಬ್ಬರಿಗೆ ಸೇರಿದ ಅಕ್ರಮ ಲಾರಿಗಳಾಗಿದ್ದು, ಅದನ್ನು ತಡೆದಿದ್ದಕ್ಕೆ ಪಿಎಸ್ಐ-ಸರ್ಕಲ್ ಇನ್ಸ್ ಪೆಕ್ಟರ್ ನಡುವೆ ಮಾತಿನ ಸಂಘರ್ಷ ನಡೆದಿದೆ. ಇಬ್ಬರು ಅಧಿಕಾರಿಗಳ ಏಕವಚನದ ನಿಂದನೆ ಜನರಿಗೆ ಮನರಂಜನೆ ಸಿಕ್ಕಿದ್ದು, ಇಬ್ಬರ ನಡುವಿನ ಮಾತಿನ ಸಂಘರ್ಷ ಈಗ ವೈರಲ್ ಆಗಿದೆ. ಈ ಸಂಬಂಧ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.