ಐಎಂಎ ಹಗರಣದಲ್ಲಿ ಭಾಗಿ ಆರೋಪ: ರೋಶನ್ ಬೇಗ್ ಹೇಳಿದ್ದು ಏನು?
ಬೆಂಗಳೂರು, ಜೂನ್ 12: ಐಎಂಎ ಜ್ಯುವೆಲರ್ಸ್ ಹಗರಣದ ಹೆಸರು ತಳುಕು ಹಾಕಿಕೊಂಡ ಕಾರಣ ಶಾಸಕ ರೋಶನ್ ಬೇಗ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ನನಗೂ ಐಎಂಎ ಜ್ಯುವೆಲರ್ಸ್ಗೂ ಯಾವುದೇ ಸಂಬಂಧ ಇಲ್ಲ, ಅಷ್ಟೆ ಅಲ್ಲ ನನ್ನ ಕುಟುಂಬಸ್ತರು, ಸ್ನೇಹಿತರಿಗೂ ಈ ಸಂಸ್ಥೆಯೊಂದಿಗೆ ಯಾವುದೇ ಸಂಬಂಧ ಇಲ್ಲ ಹಾಗೊಮ್ಮೆ ಇದ್ದರೆ ಸಾಕ್ಷ್ಯ ನೀಡಿ ಎಂದು ರೋಶನ್ ಬೇಗ್ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಂಎ ಜ್ಯುವೆಲರ್ಸ್ ವಂಚನೆ ಪ್ರಕರಣವನ್ನು ಕರ್ನಾಟಕ ಸರ್ಕಾರ ಎಸ್ಐಟಿಗೆ ಒಪ್ಪಿಸಿರುವುದನ್ನು ಸ್ವಾಗತಿಸುತ್ತೇನೆ ಆದರೆ ಆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದರೆ ಉತ್ತಮ ಎಂದು ಅವರು ಹೇಳಿದರು.
ಮನ್ಸೂರ್ ಖಾನ್ ಒಬ್ಬ ವಂಚಕ, ಆತ ನನಗೆ ಹಣ ಕೊಟ್ಟಿದ್ದೇನೆ ಎಂದು ಹೇಳಿ ತಲೆಮರೆಸಿಕೊಂಡಿದ್ದಾನೆ, ಅವನ ಮಾತು ನಂಬುವುದು ಹೇಗೆ, ಹಣ ಪಡೆದುದರ ಬಗ್ಗೆ ಸಾಕ್ಷಿಗಳೇನಾದರೂ ಇದ್ದರೆ ನೀಡಿ ಎಂದು ಅವರು ಸವಾಲು ಹಾಕಿದರು.

ಶಾಲೆ ಅಭಿವೃದ್ಧಿಪಡಿಸಿಕೊಟ್ಟಿದ್ದರು: ಬೇಗ್
ನನ್ನ ಕ್ಷೇತ್ರದಲ್ಲಿ ಇದ್ದ ಒಂದು ಹಳೆಯ ಸರ್ಕಾರಿ ಶಾಲೆಯನ್ನು ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿಪಡಿಸಿ ಕೊಡುತ್ತೇನೆ ಎಂದು ಹೇಳಿದ್ದರು ಅಂತೆಯೇ ಮಾಡಿಕೊಟ್ಟಿದ್ದರು, ಆ ಕಾರ್ಯಕ್ರಮಕ್ಕೆ ಅಂದಿನ ಸಿಎಂ ಸಹ ಬಂದಿದ್ದರು, ನಂತರ ನಮ್ಮ ಸಿಯಾಸತ್ ಪತ್ರಿಕೆ ಕಚೇರಿಗೆ ಬೆಂಕಿ ಬಿದ್ದು ನಷ್ಟವಾದಾಗ ಪತ್ರಿಕೆ ನಡೆಸಲು ದೇಣಿಗೆ ನೀಡಿದ್ದ, ಅದೂ ಸಹ ಎಲ್ಲವೂ ಚೆಕ್ನಲ್ಲಿಯೇ ಪಡೆದಿದ್ದೇವೆ ಎಂದು ರೋಶನ್ ಬೇಗ್ ಹೇಳಿದರು.

'ಮೊಬೈಲ್ ಸಂಖ್ಯೆ ಮಾಹಿತಿ ಪಡೆಯಿರಿ'
ಮನ್ಸೂರ್ ಖಾನ್ ಅವರ ಮೊಬೈಲ್ ಸಂಖ್ಯೆಯ ಕರೆ ಮಾಹಿತಿ ಪಡೆಯಿರಿ, ಕಾಣೆಯಾಗುವ ಹಿಂದಿನ 48 ಗಂಟೆಗಳಲ್ಲಿ ಆತನು ಯಾರ್ಯಾರನ್ನು ಸಂಪರ್ಕಿಸಿದ್ದಾನೆ, ಆತನನ್ನು ಯಾರು ಸಂಪರ್ಕಿಸಿದ್ದಾರೆ, ಆತನಿಗೆ ಬಂದಿರುವ ಮೆಸೆಜ್ಗಳ ಮಾಹಿತಿ ಪಡೆಯಿರಿ, ಆತನಿಗೆ ಯಾರು ಸಹಾಯ ಮಾಡಿದ್ದಾರೆ, ಆತನ ಜೊತೆ ಯಾರಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಅವರು ಹೇಳಿದರು.

'ಎಲ್ಲಾ ವಂಚನೆ ಕಂಪೆನಿಗಳ ತನಿಖೆ ನಡೆಯಲಿ'
ಐಎಂಎ ಜೊತೆಗೆ ಆಂಬಿಡಂಟ್, ಆಜ್ಮೇರಾ, ಅಲಾ, ಕ್ಯಾಪಿಟಲ್ ಸಂಸ್ಥೆಗಳ ಬಗ್ಗೆಯೂ ತನಿಖೆ ಆಗಲಿ, ಹೂಡಿಕೆದಾರರ ಪರವಾಗಿ ನಾನು ಇದ್ದೇನೆ, ಅವರಿಗಾಗಿ ನನ್ನ ಹೃದಯ ಮಿಡಿಯುತ್ತದೆ, ಅವರ ಹೋರಾಟದಲ್ಲಿ ನಾನೂ ಪಾಲ್ಗೊಳ್ಳುತ್ತೇನೆ ಎಂದು ಬೇಗ್ ಹೇಳಿದರು.

'ಎಸ್ಐಟಿಗೆ ನನ್ನ ಪೂರ್ಣ ಸಹಕಾರ ಇದೆ'
ಎಸ್ಐಟಿ ತನಿಖೆಗೆ ನನ್ನ ಸಂಪೂರ್ಣ ಸಹಕಾರ ಇರುತ್ತದೆ, ನಾನಾಗಲಿ, ನನ್ನ ಕುಟುಂಬವಾಗಲಿ, ನನ್ನ ಸ್ನೇಹಿತರಾಗಲಿ ಐಎಂಎ ಹಗರಣದಲ್ಲಿ ಇಂಚೂ ಭಾಗೀದಾರರಲ್ಲ, ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ, ಪ್ರಕರಣದ ತನಿಖೆ ಪಾರದರ್ಶಕವಾಗಿ ಆಗಿ ಸತ್ಯಾಂಶ ಹೊರಗೆ ಬರಲಿ ಎಂದು ಅವರು ಹೇಳಿದರು.

ಆಡಿಯೋ ಕ್ಲಿಪ್ನಲ್ಲಿ ರೋಶನ್ ಬೇಗ್ ಹೆಸರು
ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ನಾಪತ್ತೆಯಾದ ನಂತರ ಬಿಡುಗಡೆ ಮಾಡಿದ ಎರಡೂ ಆಡಿಯೋ ಕ್ಲಿಪ್ಗಳಲ್ಲಿ ರೋಶನ್ ಬೇಗ್ ಅವರ ಬಗ್ಗೆ ಉಲ್ಲೇಖ ಇದೆ. ರೋಶನ್ ಬೇಗ್ಗೆ 400 ಕೋಟಿ ನೀಡಿರುವುದಾಗಿ ಮನ್ಸೂರ್ ಖಾನ್ ಆಡಿಯೋದಲ್ಲಿ ಹೇಳಿದ್ದಾರೆ. ಹಾಗಾಗಿ ರೋಶನ್ ಬೇಗ್ ವಿರುದ್ಧವೂ ಅನುಮಾನಗಳು ಎದ್ದಿವೆ, ಹಾಗಾಗಿಯೇ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
-
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು











Click it and Unblock the Notifications