48 ಲಕ್ಷ ರೂ. ವಂಚಿಸಿದ ಕಿರಾತಕ ವಾಪಸು ಕೊಟ್ಟಿದ್ದು ಚಿತ್ರಹಿಂಸೆ !
ಬೆಂಗಳೂರು, ಡಿಸೆಂಬರ್ 21: ಕೇರಳ ಸ್ವಾಮೀಜಿಯೊಬ್ಬರ ಖಾತೆಯಿಂದ ಹಣ ದೇಣಿಗೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 48 ಲಕ್ಷ ರೂಪಾಯಿ ವಂಚಿಸಿರುವ ಅಂತರರಾಜ್ಯ ವಂಚಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಹಣ ನೀಡಿದ್ದ ವ್ಯಕ್ತಿಯ ಸಂಬಂಧಿಯನ್ನು ಅಕ್ರಮ ಬಂಧನದಲ್ಲಿಟ್ಟು ಮೂರು ತಿಂಗಳು ಕಾಲ ಚಿತ್ರಹಿಂಸೆ ನೀಡಿರುವ ಆರೋಪಿಯ ಇನ್ನೊಂದು ಮುಖ ವಿಡಿಯೋದಲ್ಲಿ ಅನಾವರಣಗೊಂಡಿದೆ.
ಸ್ವರೂಪ್ ಶೆಟ್ಟಿ ಅಲಿಯಾಸ್ ಅಜಿತ್ ಶೆಟ್ಟಿ ಬಂಧಿತ ಆರೋಪಿ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಮಂಗಳೂರು ಮೂಲದ ಸ್ವರೂಪ್ ಎಂಎನ್ ಸಿ ಕಂಪನಿ ಮಾಲೀಕ ಎಂದು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದ. ಮಂಗಳೂರಿನ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಏಳು ಪ್ರಕರಣ ದಾಖಲಾಗಿವೆ.
ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅರ್ಶಾದ್ ಎಂಬಾತ ನನ್ನ ಗೆಳೆಯ. ಅವನು ಸಾಲ ಮಾಡಿಕೊಂಡು ಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾನೆ. ಆರ್ಶಾದ್ ಗೆ ನಾನು ಕೂಡ ಐವತ್ತು ಸಾವಿರ ರೂಪಾಯಿ ಸಾಲ ನೀಡಿದ್ದೇನೆ. ನನಗೆ ಅಪಘಾತವಾಗಿ ಕೈ ಮೂಳೆ ಮುರಿದುಕೊಂಡಿದ್ದು, ಕೂಡಲೇ ಹಣ ಬೇಕು ಎಂದು ಅರ್ಶಾದ್ ಮಾವ ಮಹಮದ್ ರಫಿ ಎಂಬುವರಿಗೆ ಕರೆ ಮಾಡಿ ವಂಚಕ ನಂಬಿಸಿದ್ದಾನೆ. ರಫಿ ಅವರ ತಂಗಿಯ ಪುತ್ರ ಅರ್ಶಾದ್ ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಿದ್ದು ನಿಜ. ಹೀಗಾಗಿ ಸ್ವರೂಪ್ ಮಾತು ನಂಬಿ ಮೊದಲು ಐವತ್ತು ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.
![Pradeep SEO Office, [21.12.20 10:35] Title: Notorious inter-state criminal held in Bengaluru Pradeep SEO Office, [21.12.20 10:35] Title: Notorious inter-state criminal held in Bengaluru](https://imagesvs.oneindia.com/kn/img/2020/12/1-1608527551.jpg)
ಇದಾದ ಕೆಲ ದಿನಗಳ ಬಳಿಕ ರಫಿ ಅವರಿಗೆ ಕರೆ ಮಾಡಿ, ನಿಮ್ಮ ಅರ್ಶಾದ್ ಕಷ್ಟ ನೋಡಿ ಕೇರಳ ಶ್ರೀಪದ ವಿಶ್ವನಾಥ ಸ್ವಾಮೀಜಿ ಇಪ್ಪತ್ತೈದು ಲಕ್ಷ ರೂಪಾಯಿ ದೇಣಿಗೆ ನೀಡಲು ಒಪ್ಪಿದ್ದಾರೆ. ಆರ್ಶದ್ ಮೇಲೆ ತುಂಬಾ ಪ್ರೀತಿ ಇದೆ. ಹಣ ನಿಮ್ಮ ಅರ್ಶಾದ್ ಖಾತೆಗೆ ಹಾಕಿರುವುದನ್ನು ನಾನು ನೋಡಿದ್ದೇನೆ. ಆದರೆ ಆ ಖಾತೆಯನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ನೀವು 5.85 ಲಕ್ಷ ರೂಪಾಯಿ ತೆರಿಗೆ ಪಾವತಿಸಿದರೆ ಇಪ್ಪತ್ತೈದು ಲಕ್ಷ ರೂಪಾಯಿ ಹಣ ವಾಪಸು ಬರುತ್ತದೆ ಎಂದು ನಂಬಿಸಿದ್ದಾನೆ. ಕೆಲವು ನಕಲಿ ದಾಖಲೆಗಳನ್ನು ತೋರಿಸಿದ್ದು, ಅದನ್ನು ನಂಬಿದ ರಫೀಕ್ ಹಂತ ಹಂತವಾಗಿ 48 ಲಕ್ಷ ರೂಪಾಯಿ ಕೊಟ್ಟಿದ್ದಾನೆ.
![Pradeep SEO Office, [21.12.20 10:35] Title: Notorious inter-state criminal held in Bengaluru Pradeep SEO Office, [21.12.20 10:35] Title: Notorious inter-state criminal held in Bengaluru](https://imagesvs.oneindia.com/kn/img/2020/12/2-1608527558.jpg)
Recommended Video
ರಫೀಕ್ ಬಳಿ ವಸೂಲಿ ಮಾಡುವ ವರೆಗೂ ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅರ್ಶಾದ್ ನನ್ನು ಕಾಡುಗೋಡಿಯ ಅಪಾರ್ಟ್ ಮೆಂಟ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಕಾಲಿನಲ್ಲಿ ಹಿಂಬದಿಯಿಂದ ಹೊದ್ದು ಅರ್ಶಾದ್ ನನ್ನ ಕೆಳಗೆ ಬೀಳಿಸಿ, ಮರ್ಮಾಂಗದ ಮೇಲೆ ಕಾಲಿಟ್ಟು ಹಿಂಸೆ ಕೊಡುವ ವಿಡಿಯೋ ಹೊರ ಬಿದ್ದಿದೆ. ಮೂರು ತಿಂಗಳು ಕಾಲ ಚಿತ್ರಹಿಂಸೆ ನೀಡಿದ್ದು, ಘಟನೆ ಕುರಿತು ಅರ್ಶಾದ್ ತನ್ನ ಮಾವನೊಂದಿಗೆ ಹಂಚಿಕೊಂಡಿದ್ದಾರೆ. ಅರ್ಶಾದ್ ಮಾವ ಮಹಮದ್ ರಫೀ ಅವರು ನೀಡಿದ ದೂರಿನ ಮೇರೆಗೆ ಸ್ವರೂಪ್ ಶೆಟ್ಟಿಯನ್ನು ಬಂಧಿಸಿದ್ದು, ಸಂದೀಪ್ ರೈ, ಕಿರಣ್ ಮತ್ತಿತರಿಗಾಗಿ ಶೋಧ ನಡೆಸಲಾಗುತ್ತಿದೆ. ಕಿರಾತಕ ಸ್ವರೂಪ್ ಶೆಟ್ಟಿ ಎಂಎನ್ ಸಿ ಕಂಪನಿ ಮಾಲೀಕ ಎಂದು ಹೇಳಿಕೊಂಡು ಅನೇಕ ಮಂದಿಗೆ ವಂಚನೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
RCB: ಆರ್ಸಿಬಿ ಜೆರ್ಸಿ ಧರಿಸಿದವರಿಗೆ ಉಚಿತ ಪ್ರಯಾಣ; ಬೆಂಗಳೂರು ಆಟೋ ಚಾಲಕನ 'ಆಫರ್' ಪೋಸ್ಟರ್ ವೈರಲ್ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ.












Click it and Unblock the Notifications