48 ಲಕ್ಷ ರೂ. ವಂಚಿಸಿದ ಕಿರಾತಕ ವಾಪಸು ಕೊಟ್ಟಿದ್ದು ಚಿತ್ರಹಿಂಸೆ !
ಬೆಂಗಳೂರು, ಡಿಸೆಂಬರ್ 21: ಕೇರಳ ಸ್ವಾಮೀಜಿಯೊಬ್ಬರ ಖಾತೆಯಿಂದ ಹಣ ದೇಣಿಗೆ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ 48 ಲಕ್ಷ ರೂಪಾಯಿ ವಂಚಿಸಿರುವ ಅಂತರರಾಜ್ಯ ವಂಚಕನನ್ನು ಕಾಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಹಣ ನೀಡಿದ್ದ ವ್ಯಕ್ತಿಯ ಸಂಬಂಧಿಯನ್ನು ಅಕ್ರಮ ಬಂಧನದಲ್ಲಿಟ್ಟು ಮೂರು ತಿಂಗಳು ಕಾಲ ಚಿತ್ರಹಿಂಸೆ ನೀಡಿರುವ ಆರೋಪಿಯ ಇನ್ನೊಂದು ಮುಖ ವಿಡಿಯೋದಲ್ಲಿ ಅನಾವರಣಗೊಂಡಿದೆ.
ಸ್ವರೂಪ್ ಶೆಟ್ಟಿ ಅಲಿಯಾಸ್ ಅಜಿತ್ ಶೆಟ್ಟಿ ಬಂಧಿತ ಆರೋಪಿ. ಮತ್ತಿಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಮಂಗಳೂರು ಮೂಲದ ಸ್ವರೂಪ್ ಎಂಎನ್ ಸಿ ಕಂಪನಿ ಮಾಲೀಕ ಎಂದು ಹೇಳಿಕೊಂಡು ಹಲವರಿಗೆ ವಂಚನೆ ಮಾಡಿದ್ದ. ಮಂಗಳೂರಿನ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಏಳು ಪ್ರಕರಣ ದಾಖಲಾಗಿವೆ.
ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅರ್ಶಾದ್ ಎಂಬಾತ ನನ್ನ ಗೆಳೆಯ. ಅವನು ಸಾಲ ಮಾಡಿಕೊಂಡು ಕಷ್ಟದಲ್ಲಿ ಸಿಕ್ಕಿಬಿದ್ದಿದ್ದಾನೆ. ಆರ್ಶಾದ್ ಗೆ ನಾನು ಕೂಡ ಐವತ್ತು ಸಾವಿರ ರೂಪಾಯಿ ಸಾಲ ನೀಡಿದ್ದೇನೆ. ನನಗೆ ಅಪಘಾತವಾಗಿ ಕೈ ಮೂಳೆ ಮುರಿದುಕೊಂಡಿದ್ದು, ಕೂಡಲೇ ಹಣ ಬೇಕು ಎಂದು ಅರ್ಶಾದ್ ಮಾವ ಮಹಮದ್ ರಫಿ ಎಂಬುವರಿಗೆ ಕರೆ ಮಾಡಿ ವಂಚಕ ನಂಬಿಸಿದ್ದಾನೆ. ರಫಿ ಅವರ ತಂಗಿಯ ಪುತ್ರ ಅರ್ಶಾದ್ ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದಿದ್ದು ನಿಜ. ಹೀಗಾಗಿ ಸ್ವರೂಪ್ ಮಾತು ನಂಬಿ ಮೊದಲು ಐವತ್ತು ಸಾವಿರ ಹಣ ವರ್ಗಾವಣೆ ಮಾಡಿದ್ದಾರೆ.
![Pradeep SEO Office, [21.12.20 10:35] Title: Notorious inter-state criminal held in Bengaluru Pradeep SEO Office, [21.12.20 10:35] Title: Notorious inter-state criminal held in Bengaluru](https://imagesvs.oneindia.com/kn/img/2020/12/1-1608527551.jpg)
ಇದಾದ ಕೆಲ ದಿನಗಳ ಬಳಿಕ ರಫಿ ಅವರಿಗೆ ಕರೆ ಮಾಡಿ, ನಿಮ್ಮ ಅರ್ಶಾದ್ ಕಷ್ಟ ನೋಡಿ ಕೇರಳ ಶ್ರೀಪದ ವಿಶ್ವನಾಥ ಸ್ವಾಮೀಜಿ ಇಪ್ಪತ್ತೈದು ಲಕ್ಷ ರೂಪಾಯಿ ದೇಣಿಗೆ ನೀಡಲು ಒಪ್ಪಿದ್ದಾರೆ. ಆರ್ಶದ್ ಮೇಲೆ ತುಂಬಾ ಪ್ರೀತಿ ಇದೆ. ಹಣ ನಿಮ್ಮ ಅರ್ಶಾದ್ ಖಾತೆಗೆ ಹಾಕಿರುವುದನ್ನು ನಾನು ನೋಡಿದ್ದೇನೆ. ಆದರೆ ಆ ಖಾತೆಯನ್ನು ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ. ನೀವು 5.85 ಲಕ್ಷ ರೂಪಾಯಿ ತೆರಿಗೆ ಪಾವತಿಸಿದರೆ ಇಪ್ಪತ್ತೈದು ಲಕ್ಷ ರೂಪಾಯಿ ಹಣ ವಾಪಸು ಬರುತ್ತದೆ ಎಂದು ನಂಬಿಸಿದ್ದಾನೆ. ಕೆಲವು ನಕಲಿ ದಾಖಲೆಗಳನ್ನು ತೋರಿಸಿದ್ದು, ಅದನ್ನು ನಂಬಿದ ರಫೀಕ್ ಹಂತ ಹಂತವಾಗಿ 48 ಲಕ್ಷ ರೂಪಾಯಿ ಕೊಟ್ಟಿದ್ದಾನೆ.
![Pradeep SEO Office, [21.12.20 10:35] Title: Notorious inter-state criminal held in Bengaluru Pradeep SEO Office, [21.12.20 10:35] Title: Notorious inter-state criminal held in Bengaluru](https://imagesvs.oneindia.com/kn/img/2020/12/2-1608527558.jpg)
Recommended Video
ರಫೀಕ್ ಬಳಿ ವಸೂಲಿ ಮಾಡುವ ವರೆಗೂ ಏಟ್ರಿಯಾ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ ಅರ್ಶಾದ್ ನನ್ನು ಕಾಡುಗೋಡಿಯ ಅಪಾರ್ಟ್ ಮೆಂಟ್ ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾನೆ. ಕಾಲಿನಲ್ಲಿ ಹಿಂಬದಿಯಿಂದ ಹೊದ್ದು ಅರ್ಶಾದ್ ನನ್ನ ಕೆಳಗೆ ಬೀಳಿಸಿ, ಮರ್ಮಾಂಗದ ಮೇಲೆ ಕಾಲಿಟ್ಟು ಹಿಂಸೆ ಕೊಡುವ ವಿಡಿಯೋ ಹೊರ ಬಿದ್ದಿದೆ. ಮೂರು ತಿಂಗಳು ಕಾಲ ಚಿತ್ರಹಿಂಸೆ ನೀಡಿದ್ದು, ಘಟನೆ ಕುರಿತು ಅರ್ಶಾದ್ ತನ್ನ ಮಾವನೊಂದಿಗೆ ಹಂಚಿಕೊಂಡಿದ್ದಾರೆ. ಅರ್ಶಾದ್ ಮಾವ ಮಹಮದ್ ರಫೀ ಅವರು ನೀಡಿದ ದೂರಿನ ಮೇರೆಗೆ ಸ್ವರೂಪ್ ಶೆಟ್ಟಿಯನ್ನು ಬಂಧಿಸಿದ್ದು, ಸಂದೀಪ್ ರೈ, ಕಿರಣ್ ಮತ್ತಿತರಿಗಾಗಿ ಶೋಧ ನಡೆಸಲಾಗುತ್ತಿದೆ. ಕಿರಾತಕ ಸ್ವರೂಪ್ ಶೆಟ್ಟಿ ಎಂಎನ್ ಸಿ ಕಂಪನಿ ಮಾಲೀಕ ಎಂದು ಹೇಳಿಕೊಂಡು ಅನೇಕ ಮಂದಿಗೆ ವಂಚನೆ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ.
-
Karnataka Weather: ಮಾರ್ಚ್ 12ರ ವರೆಗೆ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುನ್ಸೂಚನೆ -
ಬೆಂಗಳೂರು, ವಿದ್ಯಾಕಾಶಿ ಧಾರವಾಡದಲ್ಲಿ "ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್" ಆರಂಭ: ಬಜೆಟ್ನಲ್ಲಿ ಘೋಷಣೆ -
Karnataka Highways: 1846 ಕಿಮೀ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5000 ಕೋಟಿ ರೂ ಘೋಷಣೆ -
ಕರ್ನಾಟಕದ 66 ಆರ್ಟಿಓಗಳಲ್ಲಿ ಡಿಜಿಟಲ್ ವ್ಯವಸ್ಥೆ: ವಾಹನ ತೋರಿಸಿದರಷ್ಟೇ ಫಿಟ್ನೆಸ್ ಪ್ರಮಾಣಪತ್ರ, ಏನಿದು? -
ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆ ನಿಷೇಧ: ಇದು ನಿಜಕ್ಕೂ ಕಾರ್ಯಸಾಧುವೆ? ತಜ್ಞರು ಹೇಳುವುದೇನು? -
ಅನಧಿಕೃತವಾಗಿ ಪ್ರವೇಶಿಸಿದರೆ ಗುಂಡು ಹಾರಿಸಲಾಗುವುದು: ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಹುಟ್ಟುಹಾಕಿದ ವಾಯುಪಡೆಯ ಸೂಚನಾ ಫಲಕ -
Tamarind Cultivation: ಹೊಸಪೇಟೆ ಹುಣಸೆ ಘಟಕಕ್ಕೆ ವಿಶ್ವಬ್ಯಾಂಕ್ ಉನ್ನತ ಮಟ್ಟದ ತಂಡ ಭೇಟಿ, ರೈತರಿಗೆ ಗುಡ್ನ್ಯೂಸ್ ನಿರೀಕ್ಷೆ -
Saaniya Chandok: ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ಕುಟುಂಬಕ್ಕೆ ಸೊಸೆಯಾಗಿ ಬಂದ ಸಾನಿಯಾ ಚಾಂದೋಕ್ ಯಾರು? -
Abhishek Sharma: 'ಅಭಿಷೇಕ್ ಶರ್ಮಾ ಒಬ್ಬ ಬ್ಲೈಂಡ್ ಸ್ಲಾಗರ್': ರೊಚ್ಚಿಗೆದ್ದ ಅಭಿಮಾನಿಗಳು -
Horoscope March 5: ಇಂದಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ, ಯಾರಿಗೆ ಶುಭ-ಯಾರಿಗೆ ಅಶುಭ -
Jacob Bethell: ಟೀಂ ಇಂಡಿಯಾ ವಿರುದ್ಧ ಸೋತರೂ ಕನ್ನಡಿಗರ ಮನಗೆದ್ದ 22 ವರ್ಷದ ಜೇಕಬ್ ಬೆಥೆಲ್ -
ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ಬಜೆಟ್ನಲ್ಲಿ ಹೊಸ ಸುದ್ದಿ ಕೊಟ್ಟ ಸಿಎಂ ಸಿದ್ದರಾಮಯ್ಯ












Click it and Unblock the Notifications