ಚಿತ್ರ ಸುದ್ದಿ : ಓ ಮನಸೇ, ಆರುಷಿ ಹತ್ಯೆ ಬಗ್ಗೆ ಬೆಳಗರೆ ಕೃತಿ
ಬೆಂಗಳೂರು, ಡಿ.16: ಹಿರಿಯ ಪತ್ರಕರ್ತ ಉದಯ ಮರಕಿಣಿ ಅವರ ಸಂಪಾದಕತ್ವದಲ್ಲಿ 'ಓ ಮನಸೇ' ಪಾಕ್ಷಿಕ ಮತ್ತೆ ಪ್ರಕಟಣೆಯಾಗುತ್ತಿದೆ. ಬೆಂಗಳೂರಿನ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಡಿ.14 ರಂದು ಲೋಕಾರ್ಪಣೆಗೊಂಡಿದೆ. ಇದರ ಜತೆಗೆ ರವಿಬೆಳಗೆರೆ ಅವರು ರಚಿಸಿರುವ ದೇಶದಾದ್ಯಂತ ಚರ್ಚೆಗೊಳಗಾದ ಆರುಷಿ ಹೇಮರಾಜ್ ಹತ್ಯೆ ರಹಸ್ಯಗಳ ಬಗ್ಗೆ ಬೆಳಕು ಚೆಲ್ಲುವ ಕೃತಿಯನ್ನು ಬಿಡುಗಡೆ ಮಾಡಲಾಗಿದೆ.
ಕಾರ್ಯಕ್ರಮದ ಚಿತ್ರಗಳು, ಓ ಮನಸೇ ಮತ್ತೆ ಆರಂಭಗೊಂಡಿದ್ದರ ಖುಷಿಯಲ್ಲಿ ಹಾಯ್ ಬೆಂಗಳೂರು ಸಂಪಾದಕ, ಜನಶ್ರೀ ಸಿಇಒ ರವಿ ಬೆಳೆಗೆರೆ ಅವರು ಹೇಳಿದ್ದೇನು? ಮುಂದೆ ಓದಿ...
ಓ ಮನಸೇ ನೀಡಿದ ತೃಪ್ತಿ ಯಾವುದು ನೀಡಿಲ್ಲ: ರವಿ ಬೆಳಗೆರೆ
ಮತ್ತೆ ಹೊಸ ಹುರುಪಿನಿಂದ ಮನಸು ಮನಸುಗಳ ಪಿಸುಮಾತಿಗೊಂದು ಪಾಕ್ಷಿಕ "ಓ ಮನಸೇ..." ಮೂರು ವರ್ಷಗಳ ನಂತರ ಮನಸಿಗೆ ಮುದ ನೀಡಲು ಬಂದಿದೆ. ಓ ಮನಸೇ ಹಾಗೇ ಎಷ್ಟೋ ನಿಯತಕಾಲಿಕೆಗಳು ಮಾರುಕಟ್ಟೆಗೆ ಬಂದು ಹೋಗಿವೆ. ಆದರೆ "ಓ ಮನಸೇ...." ಪಾಕ್ಷಿಕ ಮನಸ್ಸಿಗೆ ನೀಡಿದ ತೃಪ್ತಿ, ಸಮಾಧಾನ ಯಾವುದು ಮಾಡಲಿಲ್ಲ ಎಂದು ಖ್ಯಾತ ಹಿರಿಯ ಪತ್ರಕರ್ತರಾದ ರವಿ ಬೆಳಗೆರೆ ಹೇಳಿದರು.
ಅವರು ತಮ್ಮ ಬೆಳಗೆರೆ ಬುಕ್ಸ್ ಆಂಡ್ ಕಾಫಿ ಪುಸ್ತಕಾಲಯದಲ್ಲಿ ನಡೆದ "ಓ ಮನಸೇ...." ಪಾಕ್ಷಿಕ ಮತ್ತು "ಏನಾಯ್ತು ಮಗಳೇ" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ಪುಸ್ತಕೋದ್ಯಮ ಬೆಳೆಯಬೇಕು. ಅದಕ್ಕೆ ತಕ್ಕಂತೆ ಓದುಗ ದೊರೆಗಳಿಗೆ ತೃಪ್ತಿ ನೀಡುವಂಥ ಕಾದಂಬರಿಗಳನ್ನು ಬರೆದೆ. ಬರೆಯುತ್ತಲೇ ಇದ್ದೇನೆ. ಈಗ ಆರುಷಿ ಕೊಲೆ ಪ್ರಕರಣದ ಪುಸ್ತಕವನ್ನ ಆರೇ ದಿನಗಳಲ್ಲಿ ಬರೆದಿದ್ದೇನೆ ಎಂದರು. ಸಮಾರಂಭದ ಚಿತ್ರಗಳನ್ನು ನೋಡಿ...

ಬೆಳಗರೆ ಹೇಳಿದ್ದೇನು?
ಈ ಕೊಲೆ ಪ್ರಕರಣದ ಮಾಹಿತಿ ಮತ್ತು ಕೋರ್ಟ್ ನೀಡಿದ ತೀರ್ಪಿನ ಪ್ರತಿಯನ್ನ ಸುಪ್ರೀಂ ಕೋರ್ಟ್ ವಕೀಲರಾದ ಚಂದ್ರಕಾಂತ ಅಂಗಡಿಯವರು ನನಗೆ ನೀಡಿದರು. ಅಲ್ಲದೇ ಓ ಮನಸೇ ನಿಯತಕಾಲಿಕೆಯನ್ನು ನನ್ನ ಆತ್ಮೀಯ ಗೆಳೆಯನಾದ ಉದಯ ಮರಕಿಣಿ ಸಂಪಾದಕತ್ವದಲ್ಲಿ ಮರಳಿ ಮೂರು ವರ್ಷಗಳ ನಂತರ ಬಿಡುಗಡೆ ಮಾಡಲಾಗುತ್ತಿದೆ. ಅದರ ಗೌರವ ಸಂಪಾದಕನಾಗಿದ್ದಾನೆ. ಮನಸೇಯಲ್ಲಿರುವ ನನ್ನ ಕಾಲಂಗಳನ್ನು ಬರೆಯುತ್ತೇನೆ. ಅಲ್ಲದೇ ಹೊಸ ಕಾದಂಬರಿ ಲವ್ ಆಟ್ ಫೇಸ್ಬುಕ್ ಬರುತ್ತದೆ ಎಂದರು.

ಗಣ್ಯರ ಉಪಸ್ಥಿತಿ
ಹಿರಿಯ ವಕೀಲರಾದ ರೇವಣಸಿದ್ದಯ್ಯನವರು 'ಏನಾಯತ್ತು ಮಗಳೇ ಪುಸ್ತಕವನ್ನು ಬಿಡುಗಡೆ ಮಾಡಿದರೇ, ಓ ಮನಸೇ ಪಾಕ್ಷಿಕವನ್ನು ಪತ್ರಕರ್ತ ದೀಪಕ್ ತಿಮ್ಮಯ್ಯ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ವಿಜಯವಾಣಿ ದಿನಪತ್ರಿಕೆ ಸಂಪಾದಕ ತಿಮ್ಮಪ್ಪ ಭಟ್ಟ, ಓ ಮನಸೇ ಸಂಪಾದಕ ಉದಯ ಮರಕಿಣಿ, ಲೇಖಕ ರಾಜಾ ಚಂಡೂರ್, ಸಂಸ್ಥೆಯ ಸಿ.ಇ.ಒ. ಉಮೇಶ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಕೃತಿಗಳ ಬಿಡುಗಡೆ
ಓ ಮನಸೇ ಪಾಕ್ಷಿಕ ಹಾಗೂ ಆರುಷಿ ಹತ್ಯೆ ಬಗ್ಗೆ ಬೆಳಗರೆ ಕೃತಿಯನ್ನು ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆಯಲ್ಲಿ ಲೋಕಾರ್ಪಣೆ ಮಾಡಲಾಗಿದೆ.

ಜೋಗಿ ಜತೆ ಬೆಳಗೆರೆ
ಪತ್ರಕರ್ತ ಜೋಗಿ ಅಲಿಯಾಸ್ ಗಿರೀಶ್ ರಾವ್ ಹಾಗೂ ಅವರ ಪುತ್ರಿ ಜತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ

ಪುಸ್ತಕ ಮಳಿಗೆ
ಹಾಯ್ ಬೆಂಗಳೂರು ಪತ್ರಿಕೆ ಸಂಪಾದಕ ರವಿ ಬೆಳೆಗೆರೆ ಅವರ ಬೆಳೆಗೆರೆ ಬುಕ್ಸ್ ಅಂಡ್ ಕಾಫಿ ಪುಸ್ತಕ ಮಳಿಗೆ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications