ಜಿಕೆವಿಕೆ ಆವರಣದಲ್ಲಿ ಇನ್ನುಮುಂದೆ ಬಾಡಿಗೆ ಸೈಕಲ್
ಬೆಂಗಳೂರು, ನವೆಂಬರ್ 28 : ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಮೊದಲ ಬಾರಿಗೆ ಜಿಪಿಎಸ್ ಅಳವಡಿಸಲಾದ ಸೈಕಲ್ ನ್ನು ಬಾಡಿಗೆ ಆಧಾರದ ಮೇಲೆ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಕಾರ್ಬನ್ ಮುಕ್ತ ಕ್ಯಾಂಪಸ್ ಮಾಡುವ ಉದ್ದೇಶದಿಂದ ವಿವಿಯ ಆಡಳಿತ ಮಂಡಲಿಯು ಈ ನಿರ್ಧಾರಕ್ಕೆ ಬಂದಿದ್ದು 30 ಸೈಕಲ್ ಗಳನ್ನು ಬಾಡಿಗೆ ಆಧಾರದ ಮೇಳೆ ನೀಡಲಿದೆ. ಪೇಟಿ ಎಂನಂತಹ ಇ-ವ್ಯಾಲೆಟ್ ಬಳಸಿ ಪ್ರತಿ ಗಂಟೆಗೆ 5ರೂ.ಗಳ ಬಾಡಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ.
ಆದರೆ ಸೈಕಲ್ ಬಳಸುವವರು "ಯಾನ" ಎಂಬ ಆಪ್ ನ್ನು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಂದ ಹಾಗೆ, ಯಾನ ಆಪ್ ಬಳಸಬೇಕಾದರೆ ನಿಮ್ಮ ಆಧಾರ್ ಸಂಖ್ಯೆ ನೋಂದಾಯಿಸುವುದು ಕೂಡ ಕಡ್ಡಾಯವಾಗಿದೆ.

ಜಿಕೆವಿಕೆ ಆವರಣದಲ್ಲಿ ಈಗಾಗಲೇ ಗುಟಕಾ, ಸಿಗರೇಟ್, ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಇನ್ನು ಮುಂದೆ ಕಾರುಗಳು ಮತ್ತು ಬೈಕ್ ಗಳ ಓಡಾಟಕ್ಕೂ ಬೈಸಿಕಲ್ ಸೇವೆಯಿಂದ ನಿಯಂತ್ರಣ ಬರಲಿದೆ. ಹೀಗಾಗಿ ಇಡೀ ಕ್ಯಾಂಪಸ್ ಪರಿಸರ ಸ್ನೇಹಿ ಆಗುವತ್ತ ದಾಪುಗಾಲಿಟ್ಟಿದೆ.
ಕ್ಯಾಂಪಸ್ ಸುಮಾರು 1380 ಎಕರೆ ಪ್ರದೇಶದಲ್ಲಿ ಹರಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುವುದು ಕಷ್ಟಕರ. ಹೀಗಾಗಿ ಈ ಸೈಕಲ್ ಸೌಲಭ್ಯ ನೆರವಾಗಲಿದೆ. ಅದಕ್ಕಾಗಿ ನಾವು ಕೇವಲ ಸ್ಥಳಾವಕಾಶ ನೀಡಿದ್ದು, ಯಾನ ಸಂಸ್ಥೆ ಬಂಡವಾಳ ಹೂಡಿ ಯೋಜನೆ ಆರಂಭಿಸಿದೆ ಎನ್ನುತ್ತಾರೆ ಡೀನ್ ಡಾ. ರಾಜೇಂದ್ರ ಪ್ರಸಾದ್.
ನಾನು ವೈಟ್ ಫೀಲ್ಡ್ ನ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಮನೆ ಹಾಗೂ ಕಚೇರಿ ನಡುವೆ ಕೇವಲ ಒಂದು ಕಿ.ಮೀ. ಅಂತರವಿತ್ತು. ಬೈಕ್ ನಲ್ಲಿ ಹೋಗಲು ಸುಮಾರು ಅರ್ಧಗಂಟೆ ಬೇಕಾಗಿತ್ತು. ಹೀಗಾಗಿ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ಇಂತಹ ಯೋಚನೆ ಬಂತು. ಪಾಲುದಾರರಾದ ಎಂ.ಸಿ. ಬೃಜೇಶ್ ಹಾಗೂ ಸಂತೋಷ್ ಜತೆ ಸೇರಿ ಯಾನ ಆರಂಭಿಸಿದ್ದೇವೆ ಎನ್ನುತ್ತಾರೆ ಯಾನ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅಭಿಷೇಕ್ ಡಂಬಳ.
-
Gold: ಲಕ್ಕುಂಡಿಯಲ್ಲಿ ಸಿಕ್ಕ ಬಂಗಾರದ ನಿಧಿ ಮೌಲ್ಯ 8 ಕೋಟಿ ರೂ.; ನಿಧಿ ಕೊಟ್ಟ ಕುಟುಂಬದಿಂದ ಹೊಸ ಡಿಮ್ಯಾಂಡ್, ಉತ್ಖನನ ಅಂತ್ಯ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications