ಜಿಕೆವಿಕೆ ಆವರಣದಲ್ಲಿ ಇನ್ನುಮುಂದೆ ಬಾಡಿಗೆ ಸೈಕಲ್
ಬೆಂಗಳೂರು, ನವೆಂಬರ್ 28 : ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣದಲ್ಲಿ ಮೊದಲ ಬಾರಿಗೆ ಜಿಪಿಎಸ್ ಅಳವಡಿಸಲಾದ ಸೈಕಲ್ ನ್ನು ಬಾಡಿಗೆ ಆಧಾರದ ಮೇಲೆ ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಕಾರ್ಬನ್ ಮುಕ್ತ ಕ್ಯಾಂಪಸ್ ಮಾಡುವ ಉದ್ದೇಶದಿಂದ ವಿವಿಯ ಆಡಳಿತ ಮಂಡಲಿಯು ಈ ನಿರ್ಧಾರಕ್ಕೆ ಬಂದಿದ್ದು 30 ಸೈಕಲ್ ಗಳನ್ನು ಬಾಡಿಗೆ ಆಧಾರದ ಮೇಳೆ ನೀಡಲಿದೆ. ಪೇಟಿ ಎಂನಂತಹ ಇ-ವ್ಯಾಲೆಟ್ ಬಳಸಿ ಪ್ರತಿ ಗಂಟೆಗೆ 5ರೂ.ಗಳ ಬಾಡಿಗೆಯನ್ನು ಪಾವತಿಸಲು ಅವಕಾಶ ನೀಡಲಾಗಿದೆ.
ಆದರೆ ಸೈಕಲ್ ಬಳಸುವವರು "ಯಾನ" ಎಂಬ ಆಪ್ ನ್ನು ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಂದ ಹಾಗೆ, ಯಾನ ಆಪ್ ಬಳಸಬೇಕಾದರೆ ನಿಮ್ಮ ಆಧಾರ್ ಸಂಖ್ಯೆ ನೋಂದಾಯಿಸುವುದು ಕೂಡ ಕಡ್ಡಾಯವಾಗಿದೆ.

ಜಿಕೆವಿಕೆ ಆವರಣದಲ್ಲಿ ಈಗಾಗಲೇ ಗುಟಕಾ, ಸಿಗರೇಟ್, ಪ್ಲಾಸ್ಟಿಕ್ ನಿಷೇಧಿಸಲಾಗಿದ್ದು, ಇನ್ನು ಮುಂದೆ ಕಾರುಗಳು ಮತ್ತು ಬೈಕ್ ಗಳ ಓಡಾಟಕ್ಕೂ ಬೈಸಿಕಲ್ ಸೇವೆಯಿಂದ ನಿಯಂತ್ರಣ ಬರಲಿದೆ. ಹೀಗಾಗಿ ಇಡೀ ಕ್ಯಾಂಪಸ್ ಪರಿಸರ ಸ್ನೇಹಿ ಆಗುವತ್ತ ದಾಪುಗಾಲಿಟ್ಟಿದೆ.
ಕ್ಯಾಂಪಸ್ ಸುಮಾರು 1380 ಎಕರೆ ಪ್ರದೇಶದಲ್ಲಿ ಹರಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುವುದು ಕಷ್ಟಕರ. ಹೀಗಾಗಿ ಈ ಸೈಕಲ್ ಸೌಲಭ್ಯ ನೆರವಾಗಲಿದೆ. ಅದಕ್ಕಾಗಿ ನಾವು ಕೇವಲ ಸ್ಥಳಾವಕಾಶ ನೀಡಿದ್ದು, ಯಾನ ಸಂಸ್ಥೆ ಬಂಡವಾಳ ಹೂಡಿ ಯೋಜನೆ ಆರಂಭಿಸಿದೆ ಎನ್ನುತ್ತಾರೆ ಡೀನ್ ಡಾ. ರಾಜೇಂದ್ರ ಪ್ರಸಾದ್.
ನಾನು ವೈಟ್ ಫೀಲ್ಡ್ ನ ಆಕ್ಸೆಂಚರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಮನೆ ಹಾಗೂ ಕಚೇರಿ ನಡುವೆ ಕೇವಲ ಒಂದು ಕಿ.ಮೀ. ಅಂತರವಿತ್ತು. ಬೈಕ್ ನಲ್ಲಿ ಹೋಗಲು ಸುಮಾರು ಅರ್ಧಗಂಟೆ ಬೇಕಾಗಿತ್ತು. ಹೀಗಾಗಿ ಟ್ರಾಫಿಕ್ ಸಮಸ್ಯೆಗಳಿಗೆ ಪರಿಹಾರವಾಗಿ ಇಂತಹ ಯೋಚನೆ ಬಂತು. ಪಾಲುದಾರರಾದ ಎಂ.ಸಿ. ಬೃಜೇಶ್ ಹಾಗೂ ಸಂತೋಷ್ ಜತೆ ಸೇರಿ ಯಾನ ಆರಂಭಿಸಿದ್ದೇವೆ ಎನ್ನುತ್ತಾರೆ ಯಾನ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಅಭಿಷೇಕ್ ಡಂಬಳ.
-
AI ಎಫೆಕ್ಟ್: 2026ರಲ್ಲೂ ಮುಂದುವರಿದ ಉದ್ಯೋಗ ಕಡಿತ; ಯಾವ್ಯಾವ ಕಂಪನಿಗಳಿಂದ ಎಷ್ಟು ವಜಾ? ಪಟ್ಟಿ ಇಲ್ಲಿದೆ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications