ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡಿಗರ ಹಿತಕ್ಕಾಗಿ ಶಪಥ ಮಾಡಿದ ವಿನಯ್ ಗುರೂಜಿ

|
Google Oneindia Kannada News

ಬೆಂಗಳೂರು, ಫೆಬ್ರವರಿ 11: ಕನ್ನಡಿಗರ ಹಿತಕ್ಕಾಗಿ ಗೌರಿ ಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ಶಪಥಗೈದಿದ್ದಾರೆ.

ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತಾಯಿಸಿ ಮೌರ್ಯ ಸರ್ಕಲ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿನಯ್ ಗುರೂಜಿ ಅವರು ವೇದಿಕೆ ಮೇಲೆಯೇ ಶಪಥವೊಂದನ್ನು ಮಾಡಿದರು.

ಫೆಬ್ರವರಿ 13ರ ಕರ್ನಾಟಕ ಬಂದ್; ಯಾರ ಬೆಂಬಲ ಇದೆ, ಇಲ್ಲ ಫೆಬ್ರವರಿ 13ರ ಕರ್ನಾಟಕ ಬಂದ್; ಯಾರ ಬೆಂಬಲ ಇದೆ, ಇಲ್ಲ

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ವಿನಯ್ ಗುರೂಜಿ, 'ಸರೋಜಿನಿ ಮಹಿಷಿ ಜಾರಿ ಆಗುವವರೆಗೂ ಒಂದು ಹೊತ್ತಿನ ಊಟವನ್ನು ಬಿಡುತ್ತೇನೆ' ಎಂದು ಶಪಥಮಾಡಿದರು.

ತನು, ಮನ, ಪ್ರಾಣವನ್ನೂ ಅರ್ಪಿಸುತ್ತೇನೆ: ವಿನಯ್ ಗುರೂಜಿ

ತನು, ಮನ, ಪ್ರಾಣವನ್ನೂ ಅರ್ಪಿಸುತ್ತೇನೆ: ವಿನಯ್ ಗುರೂಜಿ

ಮುಂದುವರೆದು ಮಾತನಾಡಿದ ಅವರು, 'ಕನ್ನಡದ ಎಲ್ಲ ಸಂಘಟನೆಗಳು ಒಟ್ಟಾಗಿ ಇಲ್ಲಿ ಹೋರಾಟ ಮಾಡುತ್ತಿವೆ. ಕನ್ನಡಿಗರ ಪರವಾದ ಈ ಹೋರಾಟಕ್ಕೆ ನನ್ನ ತನು, ಮನ, ಪ್ರಾಣವನ್ನೂ ಅರ್ಪಿಸುತ್ತೇನೆ' ಎಂದರು. ಆ ಮೂಲಕ ಹೋರಾಟಗಾರರಲ್ಲಿ ಸ್ಪೂರ್ತಿ ತುಂಬಿದರು.

ಸಿಎಂ ಜೊತೆ ಮಾತನಾಡುತ್ತೇನೆ: ವಿನಯ್ ಭರವಸೆ

ಸಿಎಂ ಜೊತೆ ಮಾತನಾಡುತ್ತೇನೆ: ವಿನಯ್ ಭರವಸೆ

ಆವೇಶಭರಿತವಾಗಿ ಮಾತನಾಡಿದ ವಿನಯ್ ಗುರೂಜಿ, 'ನಾನು ನಿಮ್ಮೊಂದಿಗೆ ಇದ್ದೇನೆ, ನಿಮ್ಮ ಪರವಾಗಿ ಸಿಎಂ ಯಡಿಯೂರಪ್ಪ ಅವರ ಬಳಿ ಮಾತನಾಡುತ್ತೇನೆ, ನಾನು ಈಗಲೇ ಯಾವ ಭರವಸೆಯನ್ನೂ ಕೊಡುವುದಿಲ್ಲ, ಆದರೆ ನನ್ನ ಕರ್ತವ್ಯ ನಾನು ನಿರ್ವಹಿಸುತ್ತೇನೆ' ಎಂದು ಹೇಳಿದರು.

ಫೆಬ್ರವರಿ 13ರ ಕರ್ನಾಟಕ ಬಂದ್; ನಿಮಗಿದು ತಿಳಿದಿರಲಿಫೆಬ್ರವರಿ 13ರ ಕರ್ನಾಟಕ ಬಂದ್; ನಿಮಗಿದು ತಿಳಿದಿರಲಿ

ಕನ್ನಡಿಗರು ವಿಷ ಕುಡಿಯುವ ಪರಿಸ್ಥಿತಿ ಬಂದಿಲ್ಲ: ವಿನಯ್

ಕನ್ನಡಿಗರು ವಿಷ ಕುಡಿಯುವ ಪರಿಸ್ಥಿತಿ ಬಂದಿಲ್ಲ: ವಿನಯ್

'ಕನ್ನಡದ ನೆಲ, ಗಾಳಿ, ನೀರು ಆಹಾರ ಬೇಕು ಆದರೆ ಸಂಕಷ್ಟ ಬಂದಾಗ ಹೋರಾಟಕ್ಕೆ ಮಾತ್ರ ಇಳಿಯುವುದಿಲ್ಲ ಎಂದ ಅವರು, ಜನ ಹೋರಾಟಕ್ಕಾಗಿ ವಿಷ ಕುಡಿಯಬಾರದು, ಕನ್ನಡಿಗರು ವಿಷ ಕುಡಿಯುವ ಪರಿಸ್ಥಿತಿ ಬಂದಿಲ್ಲ, ನಾವು ಕನ್ನಡಿಗರು ನಮ್ಮ ಹಕ್ಕಿಗಾಗಿ, ಉದ್ಯೋಗಕ್ಕಾಗಿ ಹೋರಾಟ ಮಾಡುತ್ತಿದ್ದೇವೆ' ಎಂದರು.

ಫೆಬ್ರವರಿ 13 ಕ್ಕೆ ಕರ್ನಾಟಕ ಬಂದ್: ಹಲವು ಸಂಘಟನೆ ಬೆಂಬಲಫೆಬ್ರವರಿ 13 ಕ್ಕೆ ಕರ್ನಾಟಕ ಬಂದ್: ಹಲವು ಸಂಘಟನೆ ಬೆಂಬಲ

ಯು.ಟಿ.ಖಾದರ್ ಸಹ ಭಾಗಿ

ಯು.ಟಿ.ಖಾದರ್ ಸಹ ಭಾಗಿ

ಇದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ಮಾತನಾಡಿ, 'ಈ ಪ್ರತಿಭಟನೆಯು ನಮ್ಮ ಯುವಜನತೆಯ ಉದ್ಯೋಗಕ್ಕೆ ಭವಿಷ್ಯದ ದಿನಗಳಲ್ಲಿ ನಾಂದಿಯಾಗಲಿದೆ' ಎಂದರು.

ಫೆಬ್ರವರಿ 13 ರಂದು ಕರ್ನಾಟಕ ಬಂದ್

ಫೆಬ್ರವರಿ 13 ರಂದು ಕರ್ನಾಟಕ ಬಂದ್

ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಸೇರಿದಂತೆ ಇನ್ನೂ ಹಲವು ಸಂಘಟನೆಗಳು ಫೆಬ್ರವರಿ 13 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

English summary
Gowrigadde Vinay Guruji took vow that he will leave one meal everyday till Sarojini Mahishi report implemented.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X