ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಈಶ್ವರ ಖಂಡ್ರೆ ಸಹೋದರಿ ಪುತ್ರನ ನಾಪತ್ತೆ ಪ್ರಕರಣ ಸುಖಾಂತ್ಯ

ಸಚಿವ ಈಶ್ವರ್ ಖಂಡ್ರೆ ಅವರ ಸಹೋದರಿಯ ಪುತ್ರ ಹೈದರಾಬಾದ್ ನಲ್ಲಿ ಪತ್ತೆ. ಗುರುವಾರ (ಆಗಸ್ಟ್ 31 ) ಸಂಜೆ ಸ್ನೇಹಿತರ ಜತೆಯಲ್ಲಿ ಮನೆಯಿಂದ ಪರಾರಿಯಾಗಿದ್ದ ಲಕ್ಷ್ಯ.

|
Google Oneindia Kannada News

ಬೆಂಗಳೂರು, ಸೆಪ್ಟಂಬರ್ 1: ಕಳೆದೊಂದು ದಿನದಿಂದ ನಾಪತ್ತೆಯಾಗಿದ್ದ, ಸಚಿವ ಈಶ್ವರ ಖಂಡ್ರೆ ಅವರ ಸಹೋದರಿಯ ಪುತ್ರ ಲಕ್ಷ್ಯ ಅವರ ಪ್ರಕರಣ ಸುಖಾಂತ್ಯ ಕಂಡಿದೆ.

ತನ್ನ ಸ್ನೇಹಿತರೊಂದಿಗೆ ನಾಪತ್ತೆಯಾಗಿದ್ದ ಲಕ್ಷ್ಯ ಅವರು ಹೈದರಾಬಾದ್ ನಲ್ಲಿ ಪತ್ತೆಯಾಗಿದ್ದು, ಅವರನ್ನು ಸಂಧಿಸಿರುವ ಬೀದರ್ ಪೊಲೀಸರು ಆ ಹುಡುಗರೆಲ್ಲರನ್ನೂ ಬೆಂಗಳೂರಿಗೆ ಕರೆತರುತ್ತಿದ್ದಾರೆಂಬ ಮಾಹಿತಿ ಲಭ್ಯವಾಗಿದೆ.

Eeshwar Khandre's sister son disappear case turned into happy ending

ಗುರುವಾರ ಸಂಜೆ, ಖಂಡ್ರೆ ಅವರ ಸಹೋದರಿ ಜ್ಯೋತ್ಸ್ನಾ ಅವರ ಮನೆಯಿಂದ ಲಕ್ಷ್ಯ ತನ್ನ ಸ್ನೇಹಿತರ ಜತೆಗೆ ಪರಾರಿಯಾಗಿದ್ದ. ಮನೆಯ ಮುಂದೆ ಆಟೋವೊಂದನ್ನು ನಿಲ್ಲಿಸಿ ಅದರಲ್ಲೇ ಸ್ಕೂಲ್ ಬ್ಯಾಗ್ ಸಮೇತ ಪರಾರಿಯಾಗಿದ್ದ ಆತ.

ಯಾರಿಗೂ ಏನನ್ನೂ ಹೇಳದೇ ಆತ ಹೋಗಿದ್ದು ಹಾಗೂ ಸ್ನೇಹಿತರೊಂದಿಗೆ ಸ್ಕೂಲ್ ಬ್ಯಾಗನ್ನೂ ತೆಗೆದುಕೊಂಡು ಹೋಗಿದ್ದು ಅನೇಕ ಗೊಂದಲಗಳಿಗೆ ಕಾರಣವಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರಿಗೆ ಕೊನೆಗೂ ಆತ ಹೈದರಾಬಾದ್ ನಲ್ಲಿ ಇರುವ ವಿಚಾರ ಪತ್ತೆಯಾಗಿತ್ತು.

English summary
Minister Eeshwar khandre's sister's son who was abscanded from thursday morning found along with friends in Hyderabad on September 1, 2017. Bidar Police has take initiative to bring them back to home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X