New Year on Brigade Road : ಬೆಂಗಳೂರು: ಬ್ರಿಗೇಡ್ ರೋಡ್ನಲ್ಲಿ ಮತ್ತೆ ಜನರ ದಂಡು, ವ್ಯಾಪಾರಿಗಳಲ್ಲಿ ಹೊಸ ಭರವಸೆ
ಬೆಂಗಳೂರು, ಡಿ. 26: ನಗರದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗಳಲ್ಲಿ ಈ ಬಾರಿಯ ಹಬ್ಬ ಹರಿದಿನಗಳಲ್ಲಿ ಭಾರಿ ಜನಸಂದಣಿ ಕಂಡು ಬರುತ್ತಿದೆ. ಕಾಲ್ತುಳಿತದ ಸಂಭವದಿಂದಾಗಿ ಟ್ರಾಫಿಕ್ ಪೊಲೀಸರು ಬ್ರಿಗೇಡ್ ರಸ್ತೆ ಮತ್ತು ಚರ್ಚ್ ಸ್ಟ್ರೀಟ್ನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದ ಘಟನೆ ಕೂಡ ಶನಿವಾರ ನಡೆದಿದೆ.
ಈ ಜನಸಂದಣಿಯು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ಗಳಲ್ಲಿನ ವ್ಯಪಾರಿಗಳಲ್ಲಿ ಹೊಸ ಭರವಸೆ ಮೂಡಿಸಿದೆ. ಕೊರೊನಾದಿಂದಿ ಅಂಗಡಿ ಮುಚ್ಚುದ್ದ, ನಷ್ಟದಲ್ಲಿ ಅಂಗಡಿ ಮುನ್ನಡೆಸುತ್ತಿದ್ದ ಹಲವರು ವ್ಯಾಪಾರ ವಹಿವಾಟಿನ ಹೆಚ್ಚಳದ ನಿರೀಕ್ಷೆಯಲ್ಲಿದ್ದಾರೆ.
ಎಂಜಿ ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ನಲ್ಲಿರುವ ವ್ಯಾಪಾರ ಸಂಸ್ಥೆಗಳು ತಮ್ಮ ಮಾರಾಟವು ಕೋವಿಡ್ ಮುಂಚಿನ ಮಟ್ಟಕ್ಕೆ ಮರಳುತ್ತದೆ ಎಂಬ ಭರವಸೆಯಲ್ಲಿವೆ. ಬ್ರಿಗೇಡ್ ರಸ್ತೆಯಲ್ಲಿ ಮಾತ್ರ 2020 ಮತ್ತು 2021ರ ಕೋವಿಡ್ ಪೀಡಿತ ವರ್ಷಗಳಲ್ಲಿ 35 ಅಂಗಡಿಗಳನ್ನು ಮುಚ್ಚಲಾಗಿದ್ದು, ಈಗ ವ್ಯಾಪಾರ ಸಂಸ್ಥೆಗಳು ಮತ್ತೆ ಹಳೆಯ ವ್ಯವಹಾರಕ್ಕೆ ಸಿದ್ಧವಾಗುತ್ತಿವೆ.

ಬ್ರಿಗೇಡ್ ರಸ್ತೆಯಲ್ಲಿರುವ ಎಲ್ಲಾ 125 ಅಂಗಡಿಗಳು ಈಗ ವ್ಯಾಪಾರಕ್ಕಾಗಿ ತೆರೆದಿವೆ. 'ಚಿಲ್ಲರೆ ಮಾರಾಟದಲ್ಲಿ ಶೇ.32-35ರಷ್ಟು ಏರಿಕೆಯಾಗಿದೆ' ಎಂದು ಬ್ರಿಗೇಡ್ ರಸ್ತೆಯ ಅಡಿಡಾಸ್ನ ಸಹಾಯಕ ವ್ಯವಸ್ಥಾಪಕಿ ಇನಾಶ್ರೀ ಹೇಳಿದ್ದಾರೆ.
"ಜನರು ಕೋವಿಡ್ ಜೊತೆಗೆಗೆ ಬದುಕುವ ವಿಶ್ವಾಸ ಹೊಂದಿದ್ದಾರೆ. ಗ್ರಾಹಕರು ಲಸಿಕೆ ಮತ್ತು ಬೂಸ್ಟರ್ ಡೋಸ್ಗಳನ್ನು ತೆಗೆದುಕೊಂಡಿರುವುದರಿಂದ ಯಾವುದೇ ಭಯವಿಲ್ಲ" ಎಂದು ಇನಾಶ್ರೀ ಭರವಸೆ ವ್ಯಕ್ತಪಡಿಸಿದ್ದಾರೆ.
" ಕಳೆದ ಎರಡು ವರ್ಷಗಳಿಂದ ಲಾಕ್ಡೌನ್ಗಳು ಮತ್ತು ಕೊರೊನಾ ನಿರ್ಬಂಧಗಳಿಂದ ವ್ಯಾಪಾರ ವ್ಯವಹಾರಗಳು ಬಳಲುತ್ತಿದ್ದವು. ಕೋವಿಡ್ ಸಮಯದಲ್ಲಿ, 35 ಅಂಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಯಿತು, ಮಾರಾಟವು ಕುಸಿಯಿತು. ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡರು. ಈ ಬಾರಿ ರಸ್ತೆಯಲ್ಲಿ ಅಲಂಕಾರ ಮತ್ತು ವಿದ್ಯುತ್ ದೀಪಗಳಿಂದ ಂಗೊಳಿಸುವುದನ್ನು ನೋಡಲು ಕಾತುರದಿಂದ ಕಾಯುತ್ತಿದ್ದೇವೆ" ಎಂದು ಬ್ರಿಗೇಡ್ ರಸ್ತೆಯ ವ್ಯಾಪಾರಿ ಪ್ರಜ್ಞಾ ಮಾಲು ಹೇಳಿದ್ದಾರೆ.

"ಹೊಸ ವರ್ಷವನ್ನು ಎಂದಿನಂತೆ ದೀಪಾಲಂಕಾರ, ಅಲಂಕಾರದೊಂದಿಗೆ ಆಚರಿಸುತ್ತಿದ್ದೇವೆ. ಪ್ರತಿ ವರ್ಷದಂತೆ ಬ್ರಿಗೇಡ್ ರೋಡ್ ಅಸೋಸಿಯೇಷನ್ ಸುಮಾರು 12 ರಿಂದ 13 ಲಕ್ಷ ರೂಪಾಯಿ ವೆಚ್ಚದಲ್ಲಿ 700 ಮೀಟರ್ ರಸ್ತೆಯನ್ನು ಅಲಂಕರಿಸಿ ದೀಪಾಲಂಕಾರ ಮಾಡಿದೆ ಎಂದು ಬ್ರಿಗೇಡ್ ಅಂಗಡಿಗಳು ಮತ್ತು ಸಂಸ್ಥೆಗಳು ಸಂಸ್ಥೆಯ ಕಾರ್ಯದರ್ಶಿ ಸುಹೇಲ್ ಯೂಸುಫ್ ತಿಳಿಸಿದ್ದಾರೆ.
"ಸಂಘದ ಪ್ರಮುಖ ಕಾಳಜಿ ಸಾರ್ವಜನಿಕರ ಸುರಕ್ಷತೆಯಾಗಿದ್ದು, ಈ ಬಗ್ಗೆ ಸಲಹೆಗಳನ್ನು ನಗರ ಪೊಲೀಸ್ ಆಯುಕ್ತರಿಗೆ ರವಾನಿಸಿದೆ. ಕೋವಿಡ್ ಹರಡುವ ಭಯವೂ ಇದೆ. ಸರ್ಕಾರ ನಿರ್ಬಂಧಗಳನ್ನು ವಿಧಿಸಿದರೆ ಜನರು ಸರ್ಕಾರದ ನಿಯಮಗಳನ್ನು ಪಾಲಿಸಲು ಸಿದ್ಧರಾಗಿದ್ದಾರೆ" ಎಂದು ಸುಹೇಲ್ ಯೂಸುಫ್ ಹೇಳಿದ್ದಾರೆ.
ಡಿಸೆಂಬರ್ 31 ರಂದು ರಾತ್ರಿ 7 ಗಂಟೆಯಿಂದ ಬ್ರಿಗೇಡ್ ರಸ್ತೆಯಲ್ಲಿ ಎಲ್ಲಾ ವಾಹನಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಅಸೋಸಿಯೇಷನ್ ಮನವಿ ಮಾಡಿದೆ. ಬ್ರಿಗೇಡ್ ರಸ್ತೆಯಿಂದ ಚರ್ಚ್ ಸ್ಟ್ರೀಟ್ ಮತ್ತು ರೆಸ್ಟ್ ಹೌಸ್ ರಸ್ತೆಯವರೆಗಿನ ಎಲ್ಲಾ ಪ್ರವೇಶ ದ್ವಾರಗಳಲ್ಲಿ ವಾಹನಗಳಿಗೆ ನಿರ್ಬಂಧ ವಿಧಿಸಿ, ಒಪೆರಾ ಜಂಕ್ಷನ್ ಕಡೆಗೆ ಪಾದಚಾರಿಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಬೇಕು. ಬೀದಿ ವ್ಯಾಪಾರಿಗಳು ಮತ್ತು ತಳ್ಳುಗಾಡಿಗಳನ್ನು ನಿಷೇಧಿಸಬೇಕು ಎಂದಿದೆ. ಸಾರ್ವಜನಿಕರು ಅಂಗಡಿಗಳ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವುದನ್ನು ತಡೆಯಬೇಕು ಮತ್ತು ಅಂಗಡಿಗಳ ನೆಲಮಾಳಿಗೆಗೆ ಅವರ ಪ್ರವೇಶವನ್ನು ನಿರ್ಬಂಧಿಸಬೇಕು ಎಂದು ಸಂಘ ಮನವಿ ಮಾಡಿದೆ.
(ಮಾಹಿತಿ ಕೃಪೆ- ಟೈಮ್ಸ್ ಅಫ್ ಇಂಡಿಯಾ)
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
RCB Vs SRH: ಎಸ್ಆರ್ಎಚ್ ವಿರುದ್ಧದ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಕುರಿತು ಆರ್ಸಿಬಿ ಬಿಗ್ ಅಪ್ಡೇಟ್ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
ಜೋಶ್ ಹ್ಯಾಜಲ್ವುಡ್ ಔಟ್, 7 ಕೋಟಿಯ ಆಟಗಾರನಿಗಿಲ್ಲ ಸ್ಥಾನ; ಅಶ್ವಿನ್ ಹೇಳಿದ ಆರ್ಸಿಬಿ ಸಂಭಾವ್ಯ ಪ್ಲೇಯಿಂಗ್ 11 ಇಲ್ಲಿದೆ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ











Click it and Unblock the Notifications