ಸಿ.ಆರ್.ಸಿಂಹ ನೆನಪಿನಲ್ಲಿ ನಾಟಕೋತ್ಸವ
ಬೆಂಗಳೂರು, ಏ. 22 : ಇತ್ತೀಚೆಗೆ ನಿಧನರಾದ ರಂಗಕರ್ಮಿ ಸಿ.ಆರ್. ಸಿಂಹ ಅವರ ನೆನಪಿನಲ್ಲಿ ಮಂಗಳವಾರ ನಮ್ಮ ಸಿಮ್ಮ- ರಂಗಭೂಮಿ ಸಿಂಹ' ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಏ.29ರಿಂದ ಮೇ ಒಂದರವರೆಗೆ ಮೂರು ದಿನಗಳ ನಾಟಕೋತ್ಸವವನ್ನು ರಂಗ ನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿದೆ.
ಏ.22ರ ಮಂಗಳವಾರ ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಟರಂಗ ಮತ್ತು ವೇದಿಕೆ ಸಂಸ್ಥೆಗಳು ಜಂಟಿಯಾಗಿ ಸಿ.ಆರ್. ಸಿಂಹ ನೆನಪಿನ ಕಾರ್ಯಕ್ರಮ ‘ನಮ್ಮ ಸಿಮ್ಮ- ರಂಗಭೂಮಿ ಸಿಂಹ' ಕಾರ್ಯಕ್ರಮ ಆಯೋಜಿಸಿವೆ. ಸ್ಪಂದನ- ನಟರಂಗ ಕಲಾವಿದರಿಂದ ಸಿಂಹ ನಿರ್ದೇಶಿಸಿದ ನಾಟಕಗಳ ರಂಗ ಗೀತೆಗಳ ಗಾಯನ ಮತ್ತು ವೇದಿಕೆಯಿಂದ ನಿರ್ದೇಶಿಸಿದ ನಾಟಕಗಳ ವಿಡಿಯೋ ತುಣುಕು ಪ್ರದರ್ಶನವಿದೆ. [ಸಿಆರ್ ಸಿಂಹ ಇನ್ನಿಲ್ಲ]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ, ಬಿ. ಜಯಶ್ರೀ, ಅರುಂಧತಿ ನಾಗ್, ಗಿರಿಜಾ ಲೋಕೇಶ್, ಚಿರಂಜೀವಿ ಸಿಂಗ್, ಗಿರೀಶ್ ಕಾಸರವಳ್ಳಿ, ದ್ವಾರಕೀಶ್, ಕೆ.ಎಸ್.ಎಲ್. ಸ್ವಾಮಿ, ಟಿ.ಎಸ್. ನಾಗಾಭರಣ, ವಿಶ್ವೇಶ್ವರ ಭಟ್, ಟಿ.ಎನ್. ಸೀತಾರಾಮ್, ಕೆ.ಎಂ. ಶ್ರೀನಿವಾಸ ಗೌಡ, ಡಾ. ಎಚ್.ಎಸ್. ವೆಂಕಟೇಶ್ಮೂರ್ತಿ ಮುಂತಾದವರು ಭಾಗವಹಿಸಲಿದ್ದಾರೆ. [ರಂಗ ಭೂಮಿಯ 'ಪ್ರಭಾತ' ನಮ್ಮ ಸಿಮ್ಮ]
29ರಿಂದ ನಾಟಕೋತ್ಸವ : ಸಿ.ಆರ್. ಸಿಂಹ ಅವರ ನೆನಪಿನಲ್ಲಿ ಏ.29ರಿಂದ ಮೇ 1 ಮೂರು ದಿನಗಳ ನಾಟಕೋತ್ಸವವನ್ನು ರಂಗ ನಿರಂತರ ಹಾಗೂ ಭಾರತ ಯಾತ್ರಾ ಕೇಂದ್ರ ಜಂಟಿಯಾಗಿ ಹಮ್ಮಿಕೊಂಡಿವೆ. ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗಮಂದಿರದಲ್ಲಿ ಈ ನಾಟಕೋತ್ಸವ ನಡೆಯಲಿದ್ದು, ‘ಶಿವಸಂಚಾರ' ತಂಡದ ಕಲಾವಿದರು ಪಾಲ್ಗೊಳ್ಳಲಿದ್ದು, ಶಿವಸಂಚಾರ ನಾಟಕೋತ್ಸವ ಎಂದು ಹೆಸರಿಡಲಾಗಿದೆ.
ಏ.29ರಂದು ‘ಮಹಾಬೆಳಗು' (ರಚನೆ: ಡಾ. ರಾಜಶೇಖರ್ ಹನುಮನಿ, ನಿರ್ದೇಶನ: ವೈ.ಡಿ. ಬಾದಾಮಿ), ಏ.30 ರಂದು ‘ಶರಣಸತಿ-ಲಿಂಗಪತಿ' (ರಚನೆ: ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ: ಎಸ್. ಮಾಲತಿ ಸಾಗರ) ಹಾಗೂ ಮೇ 1 ರಂದು ‘ವಿಶ್ವಬಂಧು ಮರುಳಸಿದ್ಧ' (ರಚನೆ: ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ನಿರ್ದೇಶನ: ಮಾಲತೇಶ್ ಬಡಿಗೇರ) ನಾಟಕಗಳು ಪ್ರದರ್ಶನಗೊಳ್ಳಲಿವೆ.
ಈ ಎಲ್ಲಾ ನಾಟಕಗಳನ್ನು ರಂಗಾಸಕ್ತರು ಉಚಿತವಾಗಿ ವೀಕ್ಷಿಸಲು ಅನುಕೂಲವಾಗುವಂತೆ ಸಂಘಟಕರು ಉಚಿತ ಪಾಸ್ ಗಳನ್ನು ವಿತರಿಸಲಿದ್ದಾರೆ. ಏ. 23ರ ಬುಧವಾರ ಸಂಜೆ 4ರಿಂದ ಪಾಸ್ ಗಳು ರವೀಂದ್ರ ಕಲಾಕ್ಷೇತ್ರದಲ್ಲಿ ದೊರೆಯಲಿವೆ. ಆಸಕ್ತರು ಅಲ್ಲಿಯೇ ತಮ್ಮ ಹೆಸರು ನೋಂದಾಯಿಸಿಕೊಂಡು ಪಾಸ್ ಗಳನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9886543697, 9008199033 ನಂಬರ್ ಗಳಿಗೆ ಕರೆ ಮಾಡಬಹುದಾಗಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications