ಒಬ್ಬಂಟಿ ಮಹಿಳೆ ಮೇಲೆ ಡ್ರೈವರ್, ಕಂಡಕ್ಟರ್ ಪುಂಡಾಟ
ಬೆಂಗಳೂರು, ನವೆಂಬರ್ 23 : 'ಬಸ್ ನ ಎಲ್ಲಾ ಟಿಕೆಟ್ ಗಳನ್ನು ಕೊಂಡರಷ್ಟೆ ಬಸ್ ಸ್ಟಾರ್ಟ್ ಮಾಡುತ್ತೇವೆ ಇಲ್ಲವೆಂದರೆ ಇಲ್ಲ' ಎಂದು ಬಸ್ ನ ಕಂಡಕ್ಟರ್ ಮತ್ತು ಡ್ರೈವರ್ ಗಳು ಮಹಿಳೆಯೊಬ್ಬಳಿಗೆ ಧಮಕಿ ಹಾಕಿದ ಘಟನೆ ನಗರದ ಶಾಂತಿನಗರದಲ್ಲಿ ನಡೆದಿದೆ.
ಮಹಿಳೆ ಡಾಕ್ಟರ್ ಪಟೇಲ್ ನವೆಂಬರ್ 22ರ ಮಧ್ಯರಾತ್ರಿ ಅಹಮದಾಬಾದ್ ನಿಂದ ಬೆಂಗಳೂರು ಏರ್ಪೋರ್ಟ್ ಗೆ ಬಂದು ಅಲ್ಲಿಂದ ಶಾಂತಿನಗರದಕ್ಕೆ ಬಂದು ತಮಿಳುನಾಡಿನ ವೆಲ್ಲೂರ್ ಗೆ ತೆರಳಲು ಟಿ.ಎನ್.01.ಎ.ಎನ್.0012 ರಿಜಿಸ್ಟರ್ ನಂಬರಿನ ಬಸ್ ಹತ್ತಿದ್ದಾರೆ. ಆದರೆ ಹತ್ತುವಾಗ 15 ನಿಮಿಷದಲ್ಲಿ ಬಸ್ ಹೊರಡುತ್ತದೆಂದು ಹೇಳಿದ್ದ ಕಂಡಕ್ಟರ್ ಒಂದು ಗಂಟೆಯಾದರೂ ಹೊರಡದಾಗ ಡಾಕ್ಟರ್ ಪಟೇಲ್ ಗೆ ಆತಂಕವಾಗಿದೆ.

ಕಂಡಕ್ಟರ್ ಮತ್ತು ಡ್ರೈವರ್ ಗಳನ್ನು ಈ ಬಗ್ಗೆ ಪ್ರಶ್ನಿಸಿದಾಗ ಮಹಿಳೆ ಡಾಕ್ಟರ್ ಪಟೇಲ್ ಅವರನ್ನು ಮೂದಲಿಸಿದ್ದಾರೆ. ಅಷ್ಟೆ ಅಲ್ಲದೆ ಉಳಿದ ಟಿಕೆಟ್ ಗಳನ್ನು ಕೊಂಡರಷ್ಟೆ ಬಸ್ ಹೊರಡುತ್ತದೆ ಇಲ್ಲವಾದರೆ ಇಳಿದು ಹೋಗು ಎಂದು ಒಂಟಿ ಮಹಿಳೆಯ ಮೇಲೆ ತಡರಾತ್ರಿಯಲ್ಲಿ ಜೋರು ಮಾಡಿದ್ದಾರೆ.
ಡಾ.ಪಟೇಲ್ ಈ ಕುರಿತು ದೂರು ದಾಖಲಿಸಿದ್ದು, ಪೊಲೀಸರು ಡ್ರೈವರ್ ಮತ್ತು ಕಂಡಕ್ಟರ್ ಅನ್ನು ವಶಕ್ಕೆ ಪಡೆದಿದ್ದಾರೆ.
-
Bangladesh Bus Tragedy: ನದಿಗೆ ಉರಳಿದ 50 ಪ್ರಯಾಣಿಕರಿದ್ದ ಬಸ್, ಹಲವರು ಸಾವು; ಎದೆ ನಡುಗಿಸೋ ವಿಡಿಯೋ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Expressway: ಏಪ್ರಿಲ್ 1ರಿಂದ ರಾಜ್ಯಾದ್ಯಂತ ಟೋಲ್ ದರ ಏರಿಕೆ; ಬೆಂಗಳೂರು-ಮೈಸೂರು ಸೇರಿ ಈ ಪ್ರಮುಖ ಹೆದ್ದಾರಿಗಳಲ್ಲಿ ಸಂಚಾರ ದುಬಾರಿ -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ












Click it and Unblock the Notifications