ಮೆಜಿಸ್ಟಿಕ್ನಲ್ಲಿ ಅಪಹರಣವಾಗಿದ್ದ ಅಂಧ ದಂಪತಿಯ ಮಗು ಪತ್ತೆ
ಬೆಂಗಳೂರು, ಏಪ್ರಿಲ್ 30: ಸಂಬಂಧಿಗಳ ಮನೆಗೆಂದು ನಿನ್ನೆ ಬೆಂಗಳೂರಿಗೆ ಬಂದಿದ್ದ ಅಂಧ ದಂಪತಿಗಳ ಎಂಟು ತಿಂಗಳ ಹಸುಗೂಸನ್ನು ಅಪಹರಿಸಲಾಗಿತ್ತು, ಆದರೆ ಪೊಲೀಸರ ಶ್ರಮದಿಂದ ಒಂದೇ ದಿನದಲ್ಲಿ ಮಗು ಮತ್ತೆ ಹೆತ್ತವರ ಮಡಿಲು ಸೇರಿದೆ.
ನಿನ್ನೆ ಮೆಜಿಸ್ಟಿಕ್ನಲ್ಲಿ ಮಗುವಿಗೆ ನೀರು ಕುಡಿಸುತ್ತೇನೆಂದು ಮಹಿಳೆಯೊಬ್ಬರು ಅಂಧ ದಂಪತಿಯಿಂದ ಮಗುವನ್ನು ಪಡೆದಿದ್ದರು, ಆ ನಂತರ ಮಗುವನ್ನು ಅಪಹರಿಸಿದ್ದರು, ಪೊಲೀಸ್ ದೂರು ನೀಡಲಾಗಿತ್ತು.
ಮಗುವನ್ನು ಕಳೆದುಕೊಂಡಿದ್ದ ಅಂಧ ದಂಪತಿಗಳ ಗೋಳು ಹೇಳತೀರದಾಗಿತ್ತು, ಸಾಮಾಜಿಕ ಜಾಲತಾಣದಲ್ಲಿ ಘಟನೆಗೆ ಮರುಗಿ ಸಹಾಸ್ರಾರು ಜನ ಪ್ರತಿಕ್ರಿಯಿಸಿದ್ದರು, ಮತ್ತು ದಂಪತಿಗಳ ಮಡಿಲಿಗೆ ಮಗು ಸೇರಲೆಂದು ಪ್ರಾರ್ಥಿಸಿದ್ದರು, ಅಂತೆಯೇ ಇಂದು ಮಗು ಅಂಧ ದಂಪತಿಗಳ ಮಡಿಲು ಸೇರಿದೆ.

ಮಗು ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಮಗುವಿನ ಚಿತ್ರವನ್ನು ಎಲ್ಲಾ ಠಾಣೆಗೆ ಕಳುಹಿಸಿದ್ದರು, ಮಗುವನ್ನು ಚಿತ್ರದುರ್ಗದ ಮಹಿಳೆಯೊಬ್ಬರು ಕೆಂಗೇರಿ ಬಳಿ ಗುರುತಿಸಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು, ಕೂಡಲೆ ಎಚ್ಚೆತ್ತ ಪೊಲೀಸರು ಮಗುವನ್ನು ಅಪಹರಣಕಾರರ ಸಮೇತ ಹಿಡಿದರು.
ಅಂಧ ದಂಪತಿಯ ಮಗುವನ್ನು ಅಪಹರಿಸಿದ ಘಟನೆ ಬಗ್ಗೆ ತೀವ್ರ ಬೇಸರದಿಂದ ನಿನ್ನೆ ಟ್ವೀಟ್ ಮಾಡಿದ್ದ ಚಿತ್ರ ನಟ ಜಗ್ಗೇಶ್ ಅವರು ಇಂದು ಮಗು ದೊರೆತ ನಂತರವೂ ಟ್ವೀಟ್ ಮಾಡಿದ್ದು, ಪೊಲೀಸರಿಗೆ ಧನ್ಯವಾದ ಹೇಳುವ ಜೊತೆಗೆ ಆ ಅಂಧ ದಂಪತಿಯನ್ನು ಭೇಟಿ ಮಾಡುವುದಾಗಿ ಹೇಳಿದ್ದಾರೆ.
-
"ಕೆಡಿ" ಸಿನಿಮಾದ ಹಾಡು ಅಶ್ಲೀಲವಾಗಿದ್ರೆ ಕೂಡಲೇ ಎಲ್ಲ ಕಡೆ ತೆರವು ಮಾಡಿ: ಸೆನ್ಸಾರ್ ಮಂಡಳಿಗೆ ಕೇಂದ್ರ ಸರ್ಕಾರ ಸೂಚನೆ -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Bengaluru Second Airport: ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣ: ದೆಹಲಿಯಲ್ಲಿ ಕೇಂದ್ರ ಸಚಿವರ ಭೇಟಿಯಾದ ಡಿ.ಕೆ.ಶಿವಕುಮಾರ್ -
Nora Fatehi: ಸರ್ಸೆ ನಿನ್ನ ಸೆರಗ ಹಾಡು ವಿವಾದ: ಹೇಳಿದ್ದೊಂದು- ಮಾಡಿದ್ದು ಇನ್ನೊಂದು, ನನ್ನ ನಂಬಿ ಪ್ಲೀಸ್ -
SSLC ವಿದ್ಯಾರ್ಥಿಗಳ ಗಮನಕ್ಕೆ: ಮಾರ್ಚ್ 18ಕ್ಕೆ ಪ್ರಥಮ ಭಾಷೆ ಕನ್ನಡ ಪರೀಕ್ಷೆ; ಪಾಸಾಗಲು ಈ ಪ್ರಮುಖ ಅಂಶಗಳನ್ನು ಗಮನಿಸಿ -
"ನಾನು ಭಾರತವನ್ನು ಪ್ರೀತಿಸುತ್ತೇನೆ... ಆದರೆ ನನ್ನನ್ನು ಬೆಳೆಸಿದ್ದು UAE": ಭಾರತ ಮೂಲದ ಮಹಿಳಾ ಉದ್ಯಮಿ ರೂಪಾ ಝಾ ಪೋಸ್ಟ್ Viral -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
Teachers Recruiment: ಪ್ರಾಥಮಿಕ, ಪ್ರೌಢ ಶಾಲೆಗಳ ದೈಹಿಕ ಶಿಕ್ಷಕರ ನೇರ ನೇಮಕಾತಿ: ಮಧು ಬಂಗಾರಪ್ಪ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
ದೆಹಲಿ ಮೆಟ್ರೋ ಸಂಸ್ಕೃತಿ ಬೆಂಗಳೂರಿಗೂ ಬಂತಾ? ಮೆಟ್ರೋದಲ್ಲಿ ಯುವತಿಯರಿಂದ ನಿಯಮ ಉಲ್ಲಂಘನೆ Video Viral -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications