ಬೆಂಗಳೂರು ಚಾರಣಿಗನ ಶವ ಹಿಮಾಚಲ ಕಣಿವೆಯಲ್ಲಿ ಪತ್ತೆ
ಬೆಂಗಳೂರು, ಆಗಸ್ಟ್ 29: ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಮೂಲದ ವ್ಯಕ್ತಿಯೊಬ್ಬ ನಾಪತ್ತೆಯಾಗಿದ್ದ ಇದೀಗ ಚಾರಣಿಗನ ಮೃತದೇಹ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯ ಭಾಭಾ ಕಣಿವೆಯಲ್ಲಿ ಪತ್ತೆಯಾಗಿದೆ.
ಸತ್ಯನಾರಾಣ(47) ಮೃತರು, ಅವರು ಜೂನ್ 25ಕ್ಕೆ ಚಾರಣಕ್ಕೆಂದು ತೆರಳಿದ್ದರು ಬಳಿಕ ವಾಂಗ್ಟುವಿನಿಂದ ನಾಪತ್ತೆಯಾಗಿದ್ದರು, ಕಳೆದ ಎರಡು ತಿಂಗಳಿಂದ ಸಾಕಷ್ಟು ಕಡೆಗಳಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು ಆದರೆ ಎಲ್ಲಿಯೂ ಅವರಿರುವ ಕುರುಹು ಪತ್ತೆಯಾಗಿರಲಿಲ್ಲ, ಅವರು ಬದುಕಿದ್ದಾರೋ ಅಥವಾ ಇಲ್ಲವೋ ಎನ್ನುವುದು ತಿಳಿದಿರಲಿಲ್ಲ. ಇದೀಗ ಅವರ ಶವ ಹಿಮಾಚಲನ ಪ್ರದೇಶದ ಕಣಿವೆಯಲ್ಲಿ ಪತ್ತೆಯಾಗಿದೆ.

ಅವರಿಗಾಗಿ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಶೋಧ ನಡೆಸಿತ್ತು.ಸತ್ಯನಾರಾಯಣ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಪಘಾತದಲ್ಲಿ ಅವರ ಚಾಲಕ ರಮೇಶ್ ಕೂಡ ಗಾಯಗೊಂಡಿದ್ದಾರೆ. ಅಪಘಾತ ಎಲ್ಲಿ ಸಂಭವಿಸಿದೆ, ಹೇಗೆ ಸಂಭವಿಸಿತ್ತು ಎನ್ನುವ ಕುರಿತು ಮಾಹಿತಿ ಹೊರಬರಬೇಕಿದೆ.












Click it and Unblock the Notifications