Bengaluru: ಷೇರು ಮಾರುಕಟ್ಟೆ ವ್ಯವಹಾರದ ಚಟಕ್ಕೆ ಬಲಿಯಾದ ಯುವಕನಿಗೆ ನಿಮ್ಹಾನ್ಸ್ನಲ್ಲಿ ಯಶಸ್ವಿ ಚಿಕಿತ್ಸೆ
ಬೆಂಗಳೂರು: ಸಾಮಾನ್ಯವಾಗಿ ಮದ್ಯಪಾನ, ಧೂಮಪಾನ ಅಥವಾ ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೇಮಿಂಗ್ ಚಟದ ಬಗ್ಗೆ ನಾವು ಕೇಳಿದ್ದೇವೆ. ಆದರೆ, ಇಲ್ಲೊಬ್ಬ 29 ವರ್ಷದ ಯುವಕನಿಗೆ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವುದು ಎಂತಹ ಹುಚ್ಚು ಹಿಡಿಸಿತ್ತೆಂದರೆ, ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡು, ತೀವ್ರ ಮಾನಸಿಕ ಖಿನ್ನತೆಗೆ ಜಾರಿದ್ದ. ಇದೀಗ ಬೆಂಗಳೂರಿನ ನಿಮ್ಹಾನ್ಸ್ (NIMHANS) ಆಸ್ಪತ್ರೆಯ ವೈದ್ಯರು ಈ ಯುವಕನಿಗೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ, "ಸ್ಟಾಕ್ ಟ್ರೇಡಿಂಗ್ ಅಡಿಕ್ಷನ್" ಕೂಡ ಗುಣಪಡಿಸಬಹುದಾದ ಮಾನಸಿಕ ಸಮಸ್ಯೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
ದೇಶದಲ್ಲೇ ಇದು ಇಂತಹ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದ್ದು, ಭಾರತದ ಯುವಜನತೆಯಲ್ಲಿ ಹೆಚ್ಚುತ್ತಿರುವ ಹೊಸ ಬಗೆಯ ಅಪಾಯಕಾರಿ ವರ್ತನೆಗೆ ಕನ್ನಡಿ ಹಿಡಿದಿದೆ.

ಏನಿದು ಪ್ರಕರಣ?
ಶ್ರೀಮಂತ ಕುಟುಂಬದ ಹಿನ್ನೆಲೆಯುಳ್ಳ, ಉತ್ತಮ ಉದ್ಯೋಗದಲ್ಲಿದ್ದ 29 ವರ್ಷದ ಯುವಕನೊಬ್ಬ ನಾಲ್ಕು ವರ್ಷಗಳ ಹಿಂದೆ ಹೆಚ್ಚುವರಿ ಆದಾಯ ಗಳಿಸುವ ಆಸೆಯಿಂದ ಮೊಬೈಲ್ ಆಪ್ಗಳ ಮೂಲಕ ಷೇರು ಮಾರುಕಟ್ಟೆಗೆ ಇಳಿದಿದ್ದ. ಆರಂಭದಲ್ಲಿ ಕುತೂಹಲಕ್ಕೆ ಶುರುವಾದ ಈ ಹವ್ಯಾಸ, ದಿನ ಕಳೆದಂತೆ ಗಂಭೀರ ವ್ಯಸನವಾಗಿ ಬದಲಾಯಿತು.
ಕಚೇರಿಯ ಕೆಲಸದ ಸಮಯದಲ್ಲೂ ಮತ್ತು ಅದರ ನಂತರವೂ ಗಂಟೆಗಟ್ಟಲೆ ಮೊಬೈಲ್ ಪರದೆಯನ್ನೇ ನೋಡುತ್ತಾ, ಷೇರು ಮಾರುಕಟ್ಟೆಯ ಏರಿಳಿತಗಳನ್ನು ಗಮನಿಸುವುದೇ ಇತನ ಕಾಯಕವಾಯಿತು. ಟ್ರೇಡಿಂಗ್ ಮಾಡದ ಸಮಯದಲ್ಲಿ ವಿಪರೀತ ಆತಂಕ, ಕೈಕಾಲು ನಡುಕ ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳು ಕಾಣಿಸಿಕೊಂಡವು.
ಆನ್ಲೈನ್ ಟ್ರೇಡಿಂಗ್ ಆಪ್ಗಳು ಜೂಜಿನಂತೆ ಆತನನ್ನು ಆವರಿಸಿಕೊಂಡವು. ಲಾಭಕ್ಕಿಂತ ನಷ್ಟವೇ ಹೆಚ್ಚಾದಾಗ, ಆ ನಷ್ಟವನ್ನು ಸರಿದೂಗಿಸಲು ಮತ್ತೆ ಮತ್ತೆ ಹಣ ಹೂಡಿಕೆ ಮಾಡಲು ಶುರು ಮಾಡಿದ. ಇದಕ್ಕಾಗಿ ಹಲವಾರು 'ಲೋನ್ ಆಪ್'ಗಳ ಮೂಲಕ ಸಾಲ ಪಡೆದ. ಅಂತಿಮವಾಗಿ ಆತ ಬರೋಬ್ಬರಿ 80 ಲಕ್ಷ ರೂಪಾಯಿಗಳ ಸಾಲದ ಸುಳಿಯಲ್ಲಿ ಸಿಲುಕಿದ. ತನ್ನ ಆರ್ಥಿಕ ಮುಗ್ಗಟ್ಟನ್ನು ಮುಚ್ಚಿಡಲು ಕುಟುಂಬದವರಿಗೆ ಸುಳ್ಳು ಹೇಳಲು ಪ್ರಾರಂಭಿಸಿದ ಮತ್ತು ಸಮಾಜದಿಂದ ದೂರ ಉಳಿದು ಒಂಟಿತನಕ್ಕೆ ಜಾರಿದ.
ನಿಮ್ಹಾನ್ಸ್ನಿಂದ 'ಷಟ್' ಚಿಕಿತ್ಸೆ
ಕೊನೆಗೆ ಪರಿಸ್ಥಿತಿ ಕೈಮೀರಿದಾಗ ಆತ ನಿಮ್ಹಾನ್ಸ್ನ 'ಷಟ್' (SHUT - Service for Healthy Use of Technology) ಕ್ಲಿನಿಕ್ ಮೊರೆ ಹೋದ. ಅಲ್ಲಿನ ಹಿರಿಯ ಪ್ರಾಧ್ಯಾಪಕ ಡಾ. ಮನೋಜ್ ಕೆ. ಶರ್ಮಾ ಮತ್ತು ಸಂಶೋಧಕರಾದ ಸುಬ್ರಮಣಿಯನ್ ಶಾರದ, ರಾಜೇಶ್ ಕುಮಾರ್ ಅವರ ತಂಡವು ಈತನಿಗೆ ಚಿಕಿತ್ಸೆ ನೀಡಿತು.
ಗೇಮಿಂಗ್ ಚಟಕ್ಕೆ ನೀಡುವ ಚಿಕಿತ್ಸಾ ವಿಧಾನವನ್ನೇ ಮಾರ್ಪಡಿಸಿ, ಈ ಯುವಕನಿಗೆ 'ಮಲ್ಟಿಮೋಡಲ್ ಬಿಹೇವಿಯರಲ್ ಇಂಟರ್ವೆನ್ಷನ್' ಎಂಬ ವಿಶೇಷ ಚಿಕಿತ್ಸೆ ನೀಡಲಾಯಿತು. ಒಟ್ಟು 10 ಸೆಷನ್ಗಳಲ್ಲಿ ಸಮಾಲೋಚನೆ ನಡೆಸಲಾಯಿತು.
1) ಡಿಜಿಟಲ್ ಉಪವಾಸ: ಟ್ರೇಡಿಂಗ್ ಆಪ್ಗಳಿಂದ ಸಂಪೂರ್ಣವಾಗಿ ದೂರವಿರುವುದು.
2) ಹಣಕಾಸು ನಿಯಂತ್ರಣ: ತನ್ನ ಹಣಕಾಸಿನ ವ್ಯವಹಾರಗಳ ಅಧಿಕಾರವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸುವುದು.
3) ಉತ್ತೇಜಕ ನಿಯಂತ್ರಣ: ಟ್ರೇಡಿಂಗ್ಗೆ ಪ್ರೇರೇಪಿಸುವ ಅಂಶಗಳಿಂದ ದೂರವಿರುವುದು.
ಚಟ ಮರುಕಳಿಸದಂತೆ ತಡೆಯಲು ವೈದ್ಯರು '4D' ಸೂತ್ರವನ್ನು ಅಳವಡಿಸಿದರು:
* ದೀರ್ಘ ಉಸಿರಾಟ: ಟ್ರೇಡಿಂಗ್ ಮಾಡುವ ತುಡಿತ ಬಂದಾಗ ಮನಸ್ಸನ್ನು ಶಾಂತಗೊಳಿಸಲು.
* ನೀರು ಕುಡಿಯುವುದು: ದೈಹಿಕವಾಗಿ ಗಮನ ಬೇರೆಡೆ ಸೆಳೆಯಲು.
* ಚರ್ಚೆ: ಕುಟುಂಬದವರೊಂದಿಗೆ ಮಾತನಾಡಿ ಒತ್ತಡ ಕಡಿಮೆ ಮಾಡಿಕೊಳ್ಳುವುದು.
ಮೊಬೈಲ್ ಬಳಕೆಯಲ್ಲಿ ಇಳಿಕೆ: ಅನಗತ್ಯವಾಗಿ ಫೋನ್ ನೋಡುವುದನ್ನು ಬಿಡುವುದು.
ಚಿಕಿತ್ಸೆಯ ನಂತರ, ಆತನ 'ಸ್ಟಾಕ್ ಅಡಿಕ್ಷನ್ ಇನ್ವೆಂಟರಿ' ಸ್ಕೋರ್, ಅಪಾಯಕಾರಿ ಮಟ್ಟವಾದ 24 ರಿಂದ ಸಾಮಾನ್ಯ ಮಟ್ಟವಾದ 4 ಕ್ಕೆ ಇಳಿದಿದೆ. ಈಗ ಆತ ಸಹಜ ಸ್ಥಿತಿಗೆ ಮರಳಿದ್ದಾನೆ.
ಈ ಪ್ರಕರಣ ಕೇವಲ ಒಬ್ಬ ವ್ಯಕ್ತಿಯದ್ದಲ್ಲ. ಇಂದು ಭಾರತದಲ್ಲಿ 20 ಕೋಟಿಗೂ ಹೆಚ್ಚು ಡಿಮ್ಯಾಟ್ ಖಾತೆಗಳಿವೆ. ಆತಂಕಕಾರಿ ವಿಷಯವೆಂದರೆ, ಹೊಸದಾಗಿ ಖಾತೆ ತೆರೆಯುವವರಲ್ಲಿ ಶೇ.75 ರಷ್ಟು ಮಂದಿ 30 ವರ್ಷದೊಳಗಿನ ಯುವಕರು. ಸೆಬಿ (SEBI) ಅಂಕಿಅಂಶಗಳ ಪ್ರಕಾರ, ಫ್ಯೂಚರ್ಸ್ ಮತ್ತು ಆಪ್ಷನ್ಸ್ (F&O) ವಿಭಾಗದಲ್ಲಿ ಶೇ.93 ರಷ್ಟು ಚಿಲ್ಲರೆ ಹೂಡಿಕೆದಾರರು ನಷ್ಟ ಅನುಭವಿಸುತ್ತಿದ್ದಾರೆ.
ಟ್ರೇಡಿಂಗ್ ಆಪ್ಗಳು ಷೇರು ಮಾರುಕಟ್ಟೆಯನ್ನು ಒಂದು 'ಗೇಮ್'ನಂತೆ ಬಿಂಬಿಸುತ್ತಿದ್ದು, ಇದು ಕ್ಯಾಸಿನೊಗಳಂತೆ ತ್ವರಿತ ಲಾಭದ ಆಮಿಷ ಒಡ್ಡುತ್ತವೆ. ಹೂಡಿಕೆ ಮತ್ತು ಚಟದ ನಡುವಿನ ಗೆರೆ ಅಳಿಸಿಹೋಗುತ್ತಿದ್ದು, ಯುವ ವೃತ್ತಿಪರರು ಎಚ್ಚೆತ್ತುಕೊಳ್ಳಬೇಕಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
-
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Viral ಆಯ್ತು ಅಕೌಂಟ್ಸ್ ಪ್ರಶ್ನೆಪತ್ರಿಕೆ: ಪರೀಕ್ಷೆಯಲ್ಲೂ ಮಿಂಚಿದ 'ಧುರಂಧರ್: ದಿ ರಿವೆಂಜ್' ಸಿನಿಮಾದ ಪಾತ್ರಗಳು -
ಹಿಂದಿ ರಾಜ್ಯಗಳಲ್ಲಿ ಕನ್ನಡವನ್ನ ಕಡ್ಡಾಯ ಮಾಡಿ: ವಿಜಯೇಂದ್ರಗೆ ನೇರ ಸವಾಲು ಹಾಕಿದ ಕರವೇ ನಾರಾಯಣಗೌಡ












Click it and Unblock the Notifications