Train Cancellation: ಬೆಂಗಳೂರು-ಮಂಗಳೂರು ಬಹುತೇಕ ರೈಲುಗಳ ಸಂಚಾರ ಡಿ.14 ರಿಂದ ರದ್ದು, ಎಷ್ಟು ದಿನ, ರೈಲು ಮಾಹಿತಿ
ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಮತ್ತು ಮಂಗಳೂರಿನ ಮಧ್ಯೆ ನಾಳೆಯಿಂದ (ಡಿ.14) ಐದು ದಿನಗಳ ಕಾಲ ಹಲವು ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ. ಮಾರ್ಗ ಮಧ್ಯೆ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಾಗಾದರೆ, ಎಲ್ಲೆಲ್ಲಿ ಏನು ಕಾಮಗಾರಿ ನಡೆಯಲಿದ್ದು, ರದ್ದಾ ರೈಲುಗಳ ಪಟ್ಟಿ, ಮಾಹಿತಿ ಇಲ್ಲಿ ತಿಳಿಯಬಹುದು.
ನಾಳೆ ಡಿಸೆಂಬರ್ 14 ರಿಂದ 18 ರ ತನಕ ಐದು ದಿನಗಳ ಕಾಲ ಬೆಂಗಳೂರು- ಮಂಗಳೂರು ನಡುವಿನ ಬಹುತೇಕ ರೈಲು ಸೇವೆ ರದ್ದಾಗಲಿದೆ. ಇವೆರಡು ನಗರಗಳ ಮಧ್ಯದ ಮಾರ್ಗದಲ್ಲಿ ಹಾಸನ ಜಂಕ್ಷನ್ ವ್ಯಾಪ್ತಿಯಲ್ಲಿ (ನಿಲ್ದಾಣ) ಸಿಗ್ನಲಿಂಗ್ ಕಾರ್ಯ ನಡೆಯಲಿದೆ. ಅಲ್ಲದೇ ಇಂಟರ್ಲಾಕಿಂಗ್ ವ್ಯವಸ್ಥೆಯನ್ನು ಸಹ ಅಧಿಕಾರಿಗಳು ನವೀಕರಣ ಮಾಡಲಿದ್ದಾರೆ.

ಈ ತುರ್ತು ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ಮುಂದಿನ ಐದು ದಿನಗಳ ಕಾಲ ಉದ್ಯಾನನಗರಿ ಬೆಂಗಳೂರು ಮತ್ತು ಕರಾವಳಿ ಭಾಗದ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜಧಾನಿ ಬೆಂಗಳೂರಿನಿಂದ ಕರಾವಳಿಯ ಮಂಗಳೂರಿಗೆ ಪ್ರಯಾಣಿಕರು ಎರಡು ಪ್ರಮುಖ ರೈಲುಗಳಾದ ಬೆಂಗಳೂರು- ಕಣ್ಣೂರು- ಬೆಂಗಳೂರು ಮತ್ತು ಬೆಂಗಳೂರು- ಕಾರವಾರ- ಬೆಂಗಳೂರು ಪಂಚಗಂಗಾ ರಾತ್ರಿ ಹೊರಡುವ ರೈಲುಗಳು ರದ್ದಾಗಿವೆ. ಪ್ರಯಾಣಿಕರು ಇದನ್ನು ಗಮನಿಸಿ ಈ ನಗರಗಳತ್ತ ಸಂಚಾರ ಮಾಡಬೇಕಿದೆ.
ರದ್ದಾದ ರೈಲುಗಳ ಪಟ್ಟಿ
ಡಿಸೆಂಬರ್ 16 ರಿಂದ 20ರವರೆಗೆ ಬೆಂಗಳೂರು-ಕಣ್ಣೂರು ರೈಲು (ಗಾಡಿ ಸಂಖ್ಯೆ- 16511 ) ಹಾಗೂ ಬೆಂಗಳೂರು- ಕಾರವಾರ ಪಂಚಗಂಗಾ ಎಕ್ಸ್ಪ್ರೆಸ್ ರೈಲು (ಗಾಡಿ ಸಂಖ್ಯೆ-16595) ರದ್ದುಗೊಂಡಿವೆ. ಇನ್ನೂ ಅಲ್ಲಿಂದ ಬೆಂಗಳೂರಿಗೆ ಬರುವ ಸಹ ವರ್ತಿ ರೈಲುಗಳಾದ 16512 ಸಂಖ್ಯೆಯ ರೈಲನ್ನು ಡಿಸೆಂಬರ್ 17ರಿಂದ ಐದು ದಿನ ರದ್ದು ಮಾಡಲಾಗಿದೆ.
ಯಶವಂತಪುರದಿಂದ ಮಂಗಳೂರು ಜಂಕ್ಷನ್ ಹೊರಡುವ ಗೋಮಟೇಶ್ವರ ಟ್ರೈ-ವೀಕ್ಲಿಎಕ್ಸ್ಪ್ರೆಸ್ (ಗಾಡಿ ಸಂಖ್ಯೆ 16575) ಡಿಸೆಂಬರ್ 14, 17, 19 ಹಾಗೂ 21 ರಂದು ರದ್ದಾಗಿವೆ. ಅದರ ಜೋಡಿ ರೈಲನ್ನು (ಗಾಡಿ ಸಂಖ್ಯೆ 16576) ಡಿಸೆಂಬರ್ 15, 18, 20 ಮತ್ತು 22ರಂದು ರದ್ದು ಮಾಡಲಾಗಿದೆ ನೈರುತ್ಯ ರೈಲ್ವೆ ತಿಳಿಸಿದೆ.
ಯಶವಂತಪುರದಿಂದ ವಾರಕ್ಕೊಮ್ಮೆ ಓಡಾಡುತ್ತಿದ್ದ ರೈಲುಗಳ ಸಹ ರದ್ದಾಗಿವೆ. ಕಾರವಾರ-ಯಶವಂತಪುರ ರೈಲು (ಗಾಡಿ ಸಂಖ್ಯೆ) ನಾಳೆ ಡಿಸೆಂಬರ್ 14ರಿಂದ 16, 19, 21 ಮತ್ತು 23 ರವರೆಗೆ ರದ್ದು ಮಾಡಲಾಗಿದೆ. ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್ಪ್ರೆಸ್ (ಗಾಡಿ ಸಂಖ್ಯೆ 16539/ 16540) ರೈಲನ್ನು ಡಿಸೆಂಬರ್ 16ರಿಂದ ಎರಡು ದಿನ ರದ್ದು ಮಾಡಲಾಗಿದೆ.
ರದ್ದಾಗಿರುವ ರೈಲುಗಳ ಪಟ್ಟಿ ನೋಡಿಕೊಂಡು ಪ್ರಯಾಣಿಕರು ಪರ್ಯಾಯ ಸಾರಿಗೆ ಅನುಸರಿಸಿ ತೆರಳಬೇಕಿದೆ. ಇನ್ನೂ ಇಂಟರ್ಲಾಕಿಂಗ್, ಸಿಗ್ನಲಿಂಗ್ ಆದ ಬಳಿಕ ಈ ಮಾರ್ಗದ ರೈಲು ಸೇವೆ ಪುನಾರಂಭಗೊಳ್ಳಲಿವೆ.
-
Vande Bharat Sleeper: ಉತ್ಪಾದನೆ ಗುರಿ ತಲುಪದ ಬೆಂಗಳೂರು-ಚೆನ್ನೈ ಕಂಪನಿಗಳು, ಸ್ಲೀಪರ್ ರೈಲು ವಿತರಣೆ ವಿಳಂಬ -
ಭಾರತದ ಏಕೈಕ ರೈಲು ಸಂಪರ್ಕವಿಲ್ಲದ ರಾಜ್ಯ ಸಿಕ್ಕಿಂ: ಕಾರಣ ಮತ್ತು ಪ್ರಯಾಣ ಮಾರ್ಗಗಳ ವಿವರ -
Mysuru-Nanjangud special train: ನಂಜನಗೂಡು ದೊಡ್ಡ ಜಾತ್ರೆಗೆ ಮೈಸೂರಿನಿಂದ ವಿಶೇಷ ರೈಲು ಸೇವೆ: ಸಚಿವ ವಿ.ಸೋಮಣ್ಣ ಮಾಹಿತಿ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ











Click it and Unblock the Notifications