ಕಳ್ಳತನ: 12ಲಕ್ಷ ಮೌಲ್ಯದ ಮಾಲು ವಶ
ಬೆಂಗಳೂರು, ಮೇ.23: ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಯುವಕನೊಬ್ಬನನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿ 12 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಮಾಕ್ಷಿಪಾಳ್ಯ ಸಣ್ಣಕ್ಕಿಬಯಲಿನ ಪ್ರದೀಪ.ಆರ್ ಬಿನ್ ರಂಗಸ್ವಾಮಿ(20) ಬಂಧಿತ ಆರೋಪಿ. 407 ಗ್ರಾಂ ತೂಕದ ವಿವಿಧ ಚಿನ್ನದ ಒಡವೆಗಳು, 300 ಗ್ರಾಂ ತೂಕದ ಬೆಳ್ಳಿಯ ಒಡವೆಗಳು, 100 ಗ್ರಾಂ ತೂಕದ ಚಿನ್ನದ ಲೇಪನವಿರುವ ಒಡವೆಗಳನ್ನು ಬಂಧಿತನಿಂದ ವಶ ಪಡಿಸಿಕೊಂಡಿದ್ದಾರೆ.[ಮೇ.23ರಿಂದ ಲಾಲ್ಬಾಗ್ನಲ್ಲಿ ಮಾವು ಹಲಸು ಮೇಳ]

ಐಷಾರಾಮಿ ಜೀವನಕ್ಕಾಗಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಹೊಂಚು ಹಾಕಿ ಆಭರಣಗಳನ್ನು ಕದಿಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.[ಕಳ್ಳತನ: ಐಟಿ ಕಂಪೆನಿ ಮಹಿಳಾ ಉದ್ಯೋಗಿ ಬಂಧನ]
ಬಸವೇಶ್ವರನಗರ ಪೋಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪೂರ್ಣಚಂದ್ರ ತೇಜಸ್ವಿರವರ ನೇತೃತ್ವದಲ್ಲಿ ಪಿ.ಎಸ್.ಐ. ಸಿ.ಎ.ಸಿದ್ದಲಿಂಗಯ್ಯ ಸಿಬ್ಬಂದಿಯವರಯವರಾದ ಕುಮಾರ ಖಾಜಾಅಜ್ಮೀರ್, ರೇಣುಕುಮಾರ್ ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.












Click it and Unblock the Notifications