52,500 ಕೋಟಿ ರುಪಾಯಿ ದಾನಕ್ಕೆ ಮುಂದಾದ ಅಜೀಂ ಪ್ರೇಮ್ ಜೀ
ಬೆಂಗಳೂರು, ಮಾರ್ಚ್ 14: ಇತ್ತೀಚೆಗಷ್ಟೇ ಭಾರತದ ಕೋಟ್ಯಧಿಪತಿಗಳು ಹಾಗೂ ಅದರಲ್ಲಿ ವಿಶ್ವ ಶ್ರೀಮಂತರ ಪಟ್ಟಿಯಲ್ಲಿ ಇರುವವರ ಹೆಸರನ್ನು ಫೋರ್ಬ್ಸ್ ಬಿಡುಗಡೆ ಮಾಡಿತ್ತು. ಇದೀಗ ಆ ಪಟ್ಟಿಯಲ್ಲಿ ಇರುವ ಶತ ಕೋಟ್ಯಧಿಪತಿ- ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜೀ ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಹಾಗೂ ಉದಾರವಾದ ದಾನಕ್ಕೆ ಮುಂದಾಗಿದ್ದಾರೆ.
ತಮ್ಮ ಕಂಪನಿಯ ಷೇರಿನ ಶೇಕಡಾ 34ರಷ್ಟನ್ನು, ಅಂದರೆ $ 7.5 ಬಿಲಿಯನ್ (750 ಕೋಟಿ ಅಮೆರಿಕನ್ ಡಾಲರ್) ದಾನ ಮಾಡಲಿದ್ದಾರೆ. ಆ ಮೊತ್ತವನ್ನು ಭಾರತದ ರುಪಾಯಿಗಳಲ್ಲಿ ಹೇಳುವುದಾದರೆ 52,500 ಕೋಟಿಯನ್ನು ಸಮಾಜ ಸೇವಾ ಕಾರ್ಯಗಳಿಗೆ ದಾನ ಮಾಡಲಿದ್ದಾರೆ.
ಪ್ರೇಮ್ ಜೀ ಅವರು ನಡೆಸಿಕೊಂಡು ಬರುತ್ತಿರುವ ವಿಪ್ರೋ ಕಂಪನಿಯ ಷೇರುಗಳನ್ನು ಅಜೀಂ ಪ್ರೇಮ್ ಜೀ ಫೌಂಡೇಷನ್ ಗೆ ಬಿಟ್ಟುಕೊಡಲಿದ್ದಾರೆ ಎಂದು ಸಂಸ್ಥೆಯ ಹೇಳಿಕೆಯಲ್ಲಿ ಬುಧವಾರ ತಿಳಿಸಲಾಗಿದೆ. ಇದರೊಂದಿಗೆ ಪ್ರೇಮ್ ಜೀ ಅವರು ಇಪ್ಪತ್ತೊಂದು ಬಿಲಿಯನ್ ಅಮೆರಿಕನ್ ಡಾಲರ್ ದಾನದ ಸಲುವಾಗಿಯೇ ನೀಡಿದಂತಾಗಿದೆ. ಅದರಲ್ಲಿ ವಿಪ್ರೋದ ಅರವತ್ತೇಳು ಪರ್ಸೆಂಟ್ ಆರ್ಥಿಕ ಮಾಲೀಕತ್ವವೂ ಒಳಗೊಂಡಿದೆ.

ಅಜೀಂ ಪ್ರೇಮ್ ಜೀ ಫೌಂಡೇಷನ್ ನೇರವಾಗಿ ಶಿಕ್ಷಣಕ್ಕೆ ಸಂಬಂಧಿಸಿದ ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ. ನೂರೈವತ್ತಕ್ಕೂ ಹೆಚ್ಚು ಎನ್ ಜಿಒಗಳಿಗೆ ಆರ್ಥಿಕ ಅನುದಾನ ನೀಡುತ್ತದೆ. ಆ ಎನ್ ಜಿಒಗಳು ಬಡ ಮಕ್ಕಳು ಹಾಗೂ ತಳ ಸಮುದಾಯದ ಮಕ್ಕಳ ಶಿಕ್ಷಣದ ಸಲುವಾಗಿ ಕೆಲಸ ಮಾಡುತ್ತಿವೆ.
ಅಜೀಂ ಪ್ರೇಮ್ ಜೀ ವಿಶ್ವವಿದ್ಯಾನಿಲಯ ಸ್ಥಾಪಿಸಿ, ಅಲ್ಲಿ ಶಿಕ್ಷಣ ಹಾಗೂ ಮಾನವ ಅಭಿವೃದ್ಧಿ ಕ್ಷೇತ್ರದ ವೃತ್ತಿಪರರ ತರಬೇತಿ ನೀಡಲಾಗುತ್ತಿದೆ. ಪದವಿ ಕಾರ್ಯಕ್ರಮಗಳು ಹಾಗೂ ಸಂಶೋಧನೆಗೆ ಅವಕಾಶ ಇದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಈ ವಿ.ವಿ. ಇದ್ದು, ಉತ್ತರ ಭಾರತದಲ್ಲೊಂದು ವಿ.ವಿ. ಸ್ಥಾಪಿಸುವ ಉದ್ದೇಶ ಇದೆ. ಸದ್ಯದಲ್ಲೇ ಬೆಂಗಳೂರಿನಲ್ಲಿರುವ ವಿ.ವಿ.ಯನ್ನು ಐದು ಸಾವಿರ ವಿದ್ಯಾರ್ಥಿಗಳು ಹಾಗೂ ನಾನೂರು ಬೋಧಕ ಸಿಬ್ಬಂದಿ ಒಳಗೊಂಡ ಸಂಸ್ಥೆಯಾಗಿ ಮಾಡಲಾಗುತ್ತದೆ.
ಅಂದಹಾಗೆ, ಎಪ್ಪತ್ಮೂರು ವರ್ಷದ ಬೆಂಗಳೂರು ಮೂಲದ ಅಜೀಂ ಪ್ರೇಮ್ ಜೀ ಭಾರತದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ. ಬ್ಲೂಮ್ ಬರ್ಗ್ ನ ಜಾಗತಿಕ ಶತ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಐವತ್ತೊಂದನೇ ಸ್ಥಾನದಲ್ಲಿದ್ದಾರೆ ಅಜೀಂ ಪ್ರೇಮ್ ಜೀ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Bengaluru: ಶ್ರೀರಾಮ ನವಮಿ ಹಬ್ಬದ ಪ್ರಯುಕ್ತ ಮಾ.27ರಂದು ನಗರದಲ್ಲಿ ಮಾಂಸ ಮಾರಾಟ ಬಂದ್ಗೆ GBA ಆದೇಶ











Click it and Unblock the Notifications