ಇನ್ವೆಸ್ಟ್ ಕರ್ನಾಟಕ -2016 : ಹರಿದು ಬಂದ ಬಂಡವಾಳ ಸಾಗರ!
ಬೆಂಗಳೂರು, ಫೆಬ್ರವರಿ 03 : ಮೂರು ದಿನಗಳ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ 'ಇನ್ವೆಸ್ಟ್ ಕರ್ನಾಟಕ -2016'ರಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬುಧವಾರ ಚಾಲನೆ ಸಿಕ್ಕಿದೆ. ದೇಶ-ವಿದೇಶಗಳ ವಿವಿಧ ಉದ್ಯಮಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. [ಸಮಾವೇಶದ ಮೊದಲ ದಿನದ ಚಿತ್ರಗಳು]
ಕೇಂದ್ರ
ಹಣಕಾಸು
ಸಚಿವ
ಅರುಣ್
ಜೇಟ್ಲಿ
ಅವರು
ದೀಪ
ಬೆಳಗಿಸುವ
ಮೂಲಕ
ಮೂರು
ದಿನಗಳ
'ಇನ್ವೆಸ್ಟ್
ಕರ್ನಾಟಕ
-2016'
ಸಮಾವೇಶಕ್ಕೆ
ಚಾಲನೆ
ನೀಡಿದರು.
ಕೇಂದ್ರ
ನಗರಾಭಿವೃದ್ಧಿ
ಸಚಿವ
ವೆಂಕಯ್ಯ
ನಾಯ್ಡು,
ಮುಖ್ಯಮಂತ್ರಿ
ಸಿದ್ದರಾಮಯ್ಯ,
ಬೃಹತ್
ಕೈಗಾರಿಕಾ
ಸಚಿವ
ಆರ್.ವಿ.ದೇಶಪಾಂಡೆ
ಸೇರಿದಂತೆ
ಹಲವರು
ಉದ್ಘಾಟನಾ
ಕಾರ್ಯಕ್ರಮದಲ್ಲಿ
ಪಾಲ್ಗೊಂಡಿದ್ದಾರೆ.
[ಇನ್ವೆಸ್ಟ್
ಕರ್ನಾಟಕ
ಮೊಬೈಲ್
ಅಪ್ಲಿಕೇಶನ್]
ಉದ್ಯಮಿಗಳಾದ
ರತನ್
ಟಾಟಾ,
ವಿಪ್ರೋ
ಸಂಸ್ಥೆಯ
ಅಜೀಂ
ಪ್ರೇಂಜಿ,
ಇನ್ಫೋಸಿಸ್
ಮುಖ್ಯಸ್ಥ
ನಾರಾಯಣಮೂರ್ತಿ,
ಅನಿಲ್
ಅಂಬಾನಿ,
ಗೌತಮ್
ಅದಾನಿ
ಸೇರಿದಂತೆ
ದೇಶ-ವಿದೇಶದ
ಹಲವಾರು
ಖ್ಯಾತ
ಉದ್ಯಮಿಗಳು
ಸಮಾವೇಶಕ್ಕೆ
ಆಗಮಿಸಿದ್ದಾರೆ.
ಈ
ಸಮಾವೇಶದಿಂದಾಗಿ
ರಾಜ್ಯದಲ್ಲಿ
2
ಲಕ್ಷ
ಕೋಟಿ
ರೂ.ಗಳಿಗೂ
ಅಧಿಕ
ಬಂಡವಾಳ
ಹೂಡಿಕೆಯಾಗಬಹುದೆಂದು
ಅಂದಾಜಿಸಲಾಗಿದೆ.
Invest in Karnataka, Department of Industries and Commerce ಕಾರ್ಯಕ್ರಮದ ಮತ್ತಷ್ಟು ಛಾಯಾಚಿತ್ರಗಳ ಝಲಕ್ pic.twitter.com/3Ci1v8lvM8
— Karnataka Varthe (@KarnatakaVarthe) February 3, 2016
ರಾಜ್ಯದ
ರಾಜಧಾನಿ
ಬೆಂಗಳೂರನ್ನು
ಹೊರತುಪಡಿಸಿ
ಎರಡನೇ
ಮತ್ತು
ಮೂರನೇ
ದರ್ಜೆಯ
ನಗರಗಳಲ್ಲೂ
ಕೈಗಾರಿಕೆಗಳನ್ನು
ಸ್ಥಾಪಿಸುವುದು
ಈ
ಸಮಾವೇಶದ
ಉದ್ದೇಶಗಳಲ್ಲಿ
ಸೇರಿದೆ.
ಅರಮನೆ
ಮೈದಾನದ
1
ಲಕ್ಷ
ಚದರಡಿ
ಪ್ರದೇಶದಲ್ಲಿ
ವಿವಿಧ
ಕಂಪನಿಗಳಿಗೆ
ವಸ್ತು
ಪ್ರದರ್ಶನಕ್ಕೆ
ಅನುಕೂಲವಾಗುವಂತೆ
ವ್ಯವಸ್ಥೆ
ಕಲ್ಪಿಸಲಾಗಿದೆ.
[ಇನ್ವೆಸ್ಟ್
ಕರ್ನಾಟಕ
ವೆಬ್
ಸೈಟ್]
ಹೂಡಿಕೆ ಕ್ಷೇತ್ರಗಳು : ಮೂರು ದಿನಗಳ ಸಮಾವೇಶದಲ್ಲಿ ಕೈಗಾರಿಕೆ, ಮೂಲಸೌಕರ್ಯ, ಪ್ರವಾಸೋದ್ಯಮ, ಇಂಧನ, ಜವಳಿ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಬಂಡವಾಳ ಹರಿದುಬರಲಿದೆ ಎಂದು ನಿರೀಕ್ಷಿಸಲಾಗಿದೆ.