Get Updates
Get notified of breaking news, exclusive insights, and must-see stories!

ಸೇನಾಪಡೆಯಿಂದ ಬೆಂಗಳೂರಲ್ಲಿ ಗಿಡ ನೆಡುವ ಅಭಿಯಾನ

ಬೆಂಗಳೂರು, ಜೂನ್ 02 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಗಿಡಗಳನ್ನು ಬೆಳೆಸುವ ಬೃಹತ್ ಅಭಿಯಾನವೊಂದು ಆರಂಭವಾಗಿದೆ. ಭಾರತೀಯ ಸೇನೆ ಮುಂದಿನ ಎರಡು ವಾರದಲ್ಲಿ ನಗರದಲ್ಲಿ 30,000 ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಂಡಿದೆ.

ಬುಧವಾರ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಈ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಕರ್ನಾಟಕ ಮತ್ತು ಕೇರಳ ಉಪ ವಿಭಾಗದ ಜಿ.ಒ.ಸಿ. ಮೇಜರ್ ಜನರಲ್ ಕೆ.ಎಸ್. ನಿಜ್ಜಾರ್ ಗಿಡ ನೆಡುವ ಮೂಲಕ ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. [ಗಿಡ ಬೆಳೆಸಿ, ಆಸ್ತಿ ತೆರಿಗೆಯಲ್ಲಿ ರಿಯಾಯಿತಿ ಪಡೆಯಿರಿ!]

indian army

ಅಭಿಯಾನದ ಕುರಿತು ಮಾತನಾಡಿದ ಕೆ.ಎಸ್.ನಿಜ್ಜಾರ್ ಅವರು, 'ಬೆಂಗಳೂರು ಉದ್ಯಾನ ನಗರಿ ಎಂದು ಹೆಸರು ಪಡೆದಿದೆ. ಇದಕ್ಕೆ ಭಾರತೀಯ ಸೇನೆ ತನ್ನ ಕೊಡುಗೆ ನೀಡುತ್ತಿದೆ. ನಗರದ ನಾನಾ ಪ್ರದೇಶದಲ್ಲಿರುವ ಮಿಲಿಟರಿ ಕ್ಯಾಂಪ್‌ಗಳಲ್ಲಿ 30 ಸಾವಿರ ಸಸಿಗಳನ್ನು ನೆಡಲು' ಉದ್ದೇಶಿಸಲಾಗಿದೆ ಎಂದರು. [ಸಾವಿನ ದವಡೆಯಿಂದ ಪಾರಾದ ಮರದಲ್ಲಿ ಮರುಜೀವ!]

5 ಲಕ್ಷ ಸಸಿ ನೆಡುವ ಗುರಿ : 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ 5 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ' ಎಂದು ಬಿಬಿಎಂಪಿ ಮೇಯರ್ ಬಿ.ಎಸ್.ಮಂಜುನಾಥ ರೆಡ್ಡಿ ಹೇಳಿದ್ದಾರೆ. ಮೇಕ್ ಬೆಂಗಳೂರು ಗ್ರೀನ್ ಸಂಸ್ಥೆಯ ಸಹಯೋಗದಲ್ಲಿ ಪಾಲಿಕೆ ಕಚೇರಿ ಆವರಣದಲ್ಲಿ ಬುಧವಾರ ಸಸಿಗಳನ್ನು ನೆಟ್ಟ ಬಳಿಕ ಅವರು ಮಾತನಾಡಿದ ಅವರು, ಈ ವರ್ಷ ಬಿಬಿಎಂಪಿ 2 ಲಕ್ಷ ಸಸಿಗಳನ್ನು ನೆಡುವ ಗುರಿ ಹೊಂದಿದೆ ಎಂದರು. [ಒಂದು ಮರ ಕಡಿದಲ್ಲಿ ಹತ್ತು ಗಿಡ ನೆಡುತ್ತೇವೆ]

bn manjunatha reddy

'ನಗರದಲ್ಲಿ ಸಸಿಗಳನ್ನು ನೆಡಲು ಬಜೆಟ್‌ನಲ್ಲಿ ಹಣ ಮೀಸಲಾಗಿಡಲಾಗಿದೆ. ಉಳಿದ 3 ಲಕ್ಷ ಸಸಿಗಳನ್ನು ಬೆಸ್ಕಾಂ, ಪೊಲೀಸ್, ತೋಟಗಾರಿಕೆ ಹಾಗೂ ಅರಣ್ಯ ಇಲಾಖೆ, ಶಾಲಾ, ಕಾಲೇಜುಗಳ ನೆರವಿನಿಂದ ನೆಡಲಾಗುವುದು' ಎಂದು ಮೇಯರ್ ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+