Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ 28 ಮಂದಿಗೆ ಗಾಯ, ಗಾಯಗೊಂಡವರಲ್ಲಿ ನಿಂತು ನೋಡುತ್ತಿದ್ದವರೇ ಹೆಚ್ಚು!

ಬೆಂಗಳೂರು ನವೆಂಬರ್‌ 13: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸದ್ದು ಜೋರಾಗಿದೆ. ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದ 28 ಮಂದಿಗೆ ಗಾಯಗಳಾಗಿದೆ. ಇದರಲ್ಲಿ ವಿಶೇಷವೆಂದರೆ ಪಟಾಕಿ ಹಚ್ಚಿದವರಿಗಿಂತ ನಿಂತು ನೋಡುತ್ತಿದ್ದರೇ ಅಧಿಕ.

ಭಾನುವಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ 28 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಯಲ್ಲಿ ಸುಮಾರು 22 ಪ್ರಕರಣಗಳು ಮತ್ತು ಮಿಂಟೋ ನೇತ್ರ ಆಸ್ಪತ್ರೆಯಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ.

28 injured in firecracker explosion in Bengaluru

ನಾರಾಯಣ ನೇತ್ರಾಲಯ ಕಣ್ಣಿನ ಆಸ್ಪತ್ರೆಯಲ್ಲಿ 22 ಪ್ರಕರಣಗಳಲ್ಲಿ 10 ಜನರಿಗೆ ಗಂಭೀರ ಗಾಯಗಳಾಗಿದ್ದು, 12 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆಶ್ಚರ್ಯಕರವಾಗಿ ಗಾಯಗೊಂಡವರಲ್ಲಿ ಹೆಚ್ಚಿನ ಜನರು ಪಟಾಕಿ ಹೊಡೆಯುತ್ತಿದ್ದನ್ನು ನೋಡುತ್ತಿದ್ದವರು.

"ಗಾಯಗೊಂಡವರಲ್ಲಿ ನಾಲ್ವರು ಮಕ್ಕಳು. ಗಾಯಗೊಂಡಿರುವ 90 ಪ್ರತಿಶತದಷ್ಟು ಜನರು ಪಟಾಕಿಗಳನ್ನು ವೀಕ್ಷಿಸುತ್ತಿದ್ದವರು ಹಾಗೂ ಘಟನೆಯ ಸಮಯದಲ್ಲಿ ಮನೆಗೆ ಹಿಂದಿರುಗುತ್ತಿದ್ದರು ಎಂದು ನಾರಾಯಣ ಹೆಲ್ತ್‌ನ ಅಧ್ಯಕ್ಷ ಡಾ ರೋಹಿತ್ ಶೆಟ್ಟಿ ಹೇಳಿದ್ದಾರೆ.

ಮಿಂಟೋ ಆಪ್ತಾಲ್ಮಿಕ್ ಆಸ್ಪತ್ರೆಯಲ್ಲಿ ನಾಲ್ಕು ಗಾಯಗಳ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇಬ್ಬರಿಗೆ ಪ್ರಮುಖ ಹಾಗೂ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕಣ್ಣಿಗೆ ಗಾಯವಾಗಿರುವ ಇಬ್ಬರು ಮಕ್ಕಳನ್ನು ಶಂಕರ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೀಗಿದ್ದರೂ ಪಟಾಕಿ ನಿಷೇಧವನ್ನು ಜನರು ಧಿಕ್ಕರಿಸಿದ್ದಾರೆ.

ಸರ್ಕಾರ ಪಟಾಕಿ ನಿಷೇಧ ಹೇರಿದ್ದರೂ ನಗರದ ಹಲವೆಡೆ ಬೆಂಗಳೂರು ನಿವಾಸಿಗಳು ಪಟಾಕಿ ಖರೀದಿಸಿ ಸಿಡಿಸಿದ್ದಾರೆ. ಹಸಿರು ಪಟಾಕಿಗಳನ್ನು ಮಾತ್ರ ಬಳಸುವಂತೆ ಸರ್ಕಾರ ಜನರಿಗೆ ಸಲಹೆ ನೀಡಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ ಅವರು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸುವಂತೆ ಸೂಚಿಸಿದ್ದಾರೆ. ಆದರೆ, ನಗರದ ಹಲವೆಡೆ ಭಾನುವಾರ ತಡರಾತ್ರಿವರೆಗೂ ಜನರು ಪಟಾಕಿ ಸಿಡಿಸುವುದನ್ನು ಮುಂದುವರಿಸಿದ್ದಾರೆ.

50 ಮಂದಿಗೆ ಗಾಯ:

ಹೈದರಾಬಾದಿನಲ್ಲಿ ಭಾನುವಾರ ರಾತ್ರಿ ದೀಪಾವಳಿ ಆಚರಣೆ ವೇಳೆ ನಗರದಲ್ಲಿ ಪಟಾಕಿ ಸಿಡಿಸುವ ವೇಳೆ ಕನಿಷ್ಠ 50 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಭಾನುವಾರ ರಾತ್ರಿ ಸರೋಜಿನಿ ನೇತ್ರಾಲಯ ಸೇರಿದಂತೆ ಕಣ್ಣಿನ ಆಸ್ಪತ್ರೆಗಳಲ್ಲಿ ಸರತಿ ಸಾಲು ಕಂಡುಬಂದಿದ್ದು, 50 ಜನರು ಸುಟ್ಟಗಾಯಗಳಿಂದ ತಿರುಗಿದ್ದಾರೆ. ಐದು ಜನರಿಗೆ ತುರ್ತು ಚಿಕಿತ್ಸೆ ನೀಡಲಾಗಿದ್ದು, 1 ಮಗುವಿಗೆ ಮಕ್ಕಳ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆಸ್ಪತ್ರೆಯ ಅಧೀಕ್ಷಕ ರಾಜಲಿಂಗಂ ಮಾತನಾಡಿ, "50 ಕ್ಕೂ ಹೆಚ್ಚು ಜನರಿಗೆ ಕಣ್ಣಿನ ಗಾಯಗಳಾಗಿವೆ. ಅವರಲ್ಲಿ ಎಂಟು ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಐವರು ಕಣ್ಣಿಗೆ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ನಾವು 8 ವರ್ಷದ ಬಾಲಕನ ಕಣ್ಣಿನ ಆಪರೇಷನ್ ಮಾಡಿದ್ದೇವೆ. ಇವರೆಲ್ಲರೂ ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಿಂದ ಬಂದವರು. ನಾವು ಇಂದು ಜಿಲ್ಲೆಗಳಿಂದ ರೋಗಿಗಳನ್ನು ನಿರೀಕ್ಷಿಸುತ್ತಿದ್ದೇವೆ. ಜಾಗೃತಿ ಕಾರ್ಯಕ್ರಮಗಳಿಂದಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಸಂತ್ರಸ್ತರ ಸಂಖ್ಯೆ ಕಡಿಮೆಯಾಗಿದೆ' ಎಂದು ಅಧೀಕ್ಷಕರು ತಿಳಿಸಿದರು.

ಆಂಧ್ರಪ್ರದೇಶ ಮಹಿಳೆ ಸಜೀವ ದಹನ:

ಆಂಧ್ರಪ್ರದೇಶದ ಕೋನಸೀಮಾ ಅಂಬೇಡ್ಕರ್ ಜಿಲ್ಲೆಯ ಕೋತಪೇಟ್ ಮಂಡಲದಲ್ಲಿ ಪಟಾಕಿಯಿಂದ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಮಂಗಾದೇವಿ ಎಂಬ ಮಹಿಳೆ ಸಜೀವ ದಹನವಾದರು. ಆಕೆಯ ಪತಿ ದುರ್ಗಾರಾವ್ ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಅವರ ಇಬ್ಬರು ಪುತ್ರರೂ ಬೆಂಕಿಯಲ್ಲಿ ಸಿಲುಕಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮನೆಯಲ್ಲಿ ಪೆಟ್ರೋಲ್ ಇದ್ದ ಕಾರಣ ಬೆಂಕಿ ವ್ಯಾಪಕವಾಗಿ ವ್ಯಾಪಿಸಿದೆ. ಬೆಂಕಿ ಹೊತ್ತಿಕೊಂಡ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಕೊತ್ತಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+