ಪತ್ನಿ ಊಟಕ್ಕೆ ಬರಲಿಲ್ವೆಂದು ಪ್ರೊಫೆಸರ್ ಆತ್ಮಹತ್ಯೆ

ಇವರು ಕೆಆರ್ ಪುರಂ ನಲ್ಲಿರುವ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪ್ರೊಫೆಸರ್ ಸುನಿಲ್ ದೊಡ್ಡಣ್ಣಯ್ಯ ಅವರು ತಮ್ಮತಂದೆ-ತಾಯಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೂಡುಕುಟುಂಬದಲ್ಲಿದ್ದರು. (ಮಾಜಿ ಸಚಿವ ರವೀಂದ್ರನಾಥ್ ಮೊಮ್ಮಗ ಆತ್ಮಹತ್ಯೆ )
ಗುರುವಾರ ರಾತ್ರಿ ಸುನಿಲ್ ತಮ್ಮ ಪತ್ನಿಯನ್ನು ಊಟಕ್ಕೆ ಕರೆದಿದ್ದಾರೆ. ಆಕೆಗೆ ಅದೇನು ಮನೆಗೆಲಸವಿತ್ತೋ, ತಡವಾಗಿ 10 ನಿಮಿಷದ ನಂತರ ಊಟದ ಟೇಬಲ್ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಹೆಂಡತಿ ಎದುರಿಗೆ ಕಾಣುತ್ತಿದ್ದಂತೆ ದೂರ್ವಾಸ ಮುನಿಯಾದ ಪ್ರೊಫೆಸರ್, ದಡಬಡಾ ಅಂತ ತಮ್ಮ ಕೋಣೆಗೆ ತೆರಳಿ, ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ ಎಂದು ಪ್ರೊಫೆಸರ್ ಸುನಿಲ್ ಅವರ ತಂದೆ ದೊಡ್ಡಣ್ಣಯ್ಯ ಅವರ ಹೇಳಿಕೆಯನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ.
ತಂದೆ ದೊಡ್ಡಣ್ಣಯ್ಯ ಅವರ ಪ್ರಕಾರ ಸುನಿಲ್ ತುಂಬಾ ಮೂಡಿಯಾಗಿದ್ದ. ಕ್ಷಣ ಪಿತ್ತ ಕ್ಷಣ ಚಿತ್ತ ಆತನದಾಗಿತ್ತು. ಕುಟುಂಬದಲ್ಲಿ ಯಾರ ಜತೆಗಾದರೂ ಕೋಪ ಮಾಡಿಕೊಂಡಿರೆ ಸೀದಾ ರೂಮಿಗೆ ಹೋಗಿ ಬಾಗಿಲುಹಾಕಿಕೊಂಡುಬಿಡುತ್ತಿದ್ದ. ಈಗಲೂ ಹಾಗೆಯೇ ಸಮಧಾನವಾದ ಮೇಲೆ ಬಾಗಿಲು ತೆಗೆದು ಬರುತ್ತಾನೆ ಅಂದುಕೊಂಡಿವಿ. ಆದರೆ ಬೆಳಗಾದರೂ ಆತನ ರೂಮಿನ ಬಾಗಿಲು ತೆರಯಲೇ ಇಲ್ಲ.
ಆತಂಕಗೊಂಡು ಬಾಗಿಲುಬಡಿದೆವು. ಅತ್ತ ಕಡೆಯಿಂದ ಯಾವುದೇ ಉತ್ತರ ಬಾರದೇ ಹೋಯ್ತು. ಅನುಮಾನ ಹೆಚ್ಚಾಗಿ ನಾವೇ ಬಾಗಿಲು ಮುರಿದು ಒಳಹೊಕ್ಕಿ ನೋಡಿದಾಗ ಸೀಲಿಂಗ್ ಫ್ಯಾನಿಗೆ ಮಗ ನೇತಾಡುತ್ತಿದ್ದ. ಆ ವೇಳೆಗೆ ಆತನ ಪ್ರಾಣ ಪಕ್ಷಿಯೂ ಹಾರಿಹೋಗಿತ್ತು ಎಂದು ತಮ್ಮ ಮಗನ ಬಗ್ಗೆ ದೊಡ್ಡಣ್ಣಯ್ಯ ಹೇಳಿದರು.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications