ಸಿದ್ದರಾಮಯ್ಯಗೆ ವಾಂತಿಗಳು, ಆಸ್ಪತ್ರೆಗೆ ದಾಖಲು

ಚುನಾವಣೆಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ಒಂದು ವಾರದಿಂದ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಸಿದ್ದರಾಮಯ್ಯನವರು ನಿನ್ನೆ ರಾತ್ರಿಯಷ್ಟೇ ಬೆಂಗಳೂರಿಗೆ ವಾಪಸಾಗಿದ್ದರು. ಆದರೆ ಇಂದು ಬೆಳಗ್ಗೆ ಶಿವಾನಂದ ವೃತ್ತದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿದ್ದ ಸಿದ್ದರಾಮಯ್ಯನವರ ಆರೋಗ್ಯದಲ್ಲಿ ಇದ್ದಕ್ಕಿದ್ದಂತೆ ಏರುಪೇರಾಗಿದೆ.
ತೀವ್ರ ಹೊಟ್ಟೆ ನೋವು ಎಂದು ಹೇಳಿದ ಸಿದ್ದರಾಮಯ್ಯನವರಿಗೆ ಒಂದೆರಡು ಬಾರಿ ವಾಂತಿಯಾಗಿದೆ. ತಕ್ಷಣ ಕೆಸಿ ಜನರಲ್ ಆಸ್ಪತ್ರೆಯ ವೈದ್ಯ ಡಾ. ರವಿಕುಮಾರ್ ಅವರು ಸಿದ್ದರಾಮಯ್ಯನವರ ಮನೆಗೆ ದೌಡಾಯಿಸಿ ಬಂದು ಕೂಲಂಕಷ ಪರೀಕ್ಷೆ ನಡೆಸಿದ್ದಾರೆ.
ಸಿದ್ದರಾಮಯ್ಯನವರಿಗೆ ಗ್ಯಾಸ್ಟ್ರಿಕ್ ಆಗಿದೆ. ಸ್ವಲ್ಪ ಬಿಪಿ ಜಾಸ್ತಿಯಾಗಿದೆ ಎಂದು ವೈದ್ಯ ರವಿಕುಮಾರ್ ವರದಿ ನೀಡಿದರೂ ಸಿದ್ದರಾಮಯ್ಯನವರು ಬಳಲಿಕೆಯಿಂದ ನಿತ್ರಾಣಗೊಂಡಿದ್ದು ಸ್ಪಷ್ಟವಾಗಿತ್ತು.
ಪಿತ್ತ ಜಾಸ್ತಿಯಾಗಿದೆ-ಇಬ್ರಾಹಿಂ: 'ದೆಹಲಿ ಪ್ರೋಗ್ರಾಂ ತುಂಬಾ ಹೆಕ್ಟಿಕ್ ಆಗಿತ್ತು. ಸಿದ್ರಾಮಣ್ಣನಿಗೆ ಅಲ್ಲಿ ಸರಿಯಾದ ನಿದ್ರೆಯಿರಲಿಲ್ಲ. ಹಾಗಾಗಿ ಸುಸ್ತಾಗಿದ್ದಾರೆ. ವೈದ್ಯರು ಒಂದು ವಾರ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ' ಎಂದು ಸಿಎಂ ಇಬ್ರಾಹಿಂ ಅವರು ತಿಳಿಸಿದ್ದಾರೆ.












Click it and Unblock the Notifications