ಅತ್ಯಾಚಾರಿಗಳೇ ಹುಷಾರ್, ಮಹಿಳೆಯಿಂದ ದೂರವಿರಿ

ಬೆಂಗಳೂರು, ದೆಹಲಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಯುವತಿಯರಿಗೆ, ಹೆಣ್ಣು ಮಕ್ಕಳಿಗೆ ರಕ್ಷಣೆಗಾಗಿ ಕರಾಟೆ ಸೇರಿದಂತೆ ವಿವಿಧ ಸಮರ ಕಲೆಗಳನ್ನು ತಜ್ಞರು ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಮಹಿಳೆಯರು ತಮ್ಮ ಪರ್ಸಿನಲ್ಲಿ ಕಾರದ ಪುಡಿ ಇಟ್ಟುಕೊಂಡು ತಿರುಗಾಡಬೇಕು ಎಂದು ಕೂಡ ಸಲಹೆ ನೀಡಿದ್ದಾರೆ.
ಎಲ್ಲಾ ಮಹಿಳೆಯರು ಕರಾಟೆ ಕಲಿಯಲು ಸಾಧ್ಯವಿಲ್ಲ ಮತ್ತು ಕಾರದ ಪುಡಿ ಎಲ್ಲಾ ಸಮಯದಲ್ಲಿ ಇಟ್ಟುಕೊಂಡು ತಿರುಗಾಡುವುದೂ ಸಾಧ್ಯವಿಲ್ಲ. ಹೀಗಿದ್ದರೆ ಮಹಿಳೆಯರು ಏನು ಮಾಡಬೇಕು? ಇಂಥದೊಂದು ಯೋಚನೆ ಬಂದಿದ್ದೇ ತಡ ಕಾರದ ಮಿರ್ಚಿಗೆ ಹೆಸರುವಾಸಿಯಾಗಿರುವ ದಾವಣಗೆರೆಯ ಯುವಕನೊಬ್ಬ ವಿಶಿಷ್ಟ ಬಗೆಯ ಆತ್ಮರಕ್ಷಣಾ ಸಾಧನವನ್ನು ಕಂಡುಹಿಡಿದಿದ್ದಾರೆ. ಇದನ್ನು ಎಲ್ಲಾ ಯುವತಿಯರೂ ಸುಲಭವಾಗಿ ಬಳಸಬಹುದು.
ಅದೇನೆಂದರೆ, ವಿಶೇಷವಾಗಿ ತಯಾರಿಸಲಾಗಿರುವ ಒಂದು ಉಂಗುರ. ವಿಶಿಷ್ಟ ರಾಸಾಯನಿಕ ತುಂಬಿರುವ ಈ ಉಂಗುರದ ಸಹಾಯದಿಂದ, ಆಕ್ರಮಣವಾದಾಗಲೆಲ್ಲ ತಮ್ಮ ಮಾನರಕ್ಷಣೆಗಾಗಿ ಮಹಿಳೆಯರು ಇದನ್ನು ಬಳಸಬಹುದಾಗಿದೆ. ಈ ಉಂಗುರ ಸಾಮಾನ್ಯ ಉಂಗುರ ಅಲ್ಲ. ಇದರ ಹೆಸರು ಎಲೆಕ್ಟ್ರಾನಿಕ್ ಪ್ರೊಟೆಕ್ಷನ್ ರಿಂಗ್. ಇದನ್ನು ಕಂಡುಹಿಡಿದಿರುವುದು ಇಮ್ರಾನ್ ಖಾನ್ ಎಂಬ ಬಿ.ಫಾರಂ. ಪದವೀಧರ.
ಉಂಗುರದಲ್ಲಿ ಏನಿದೆ? : ದೆಹಲಿ ಗ್ಯಾಂಗ್ ರೇಪ್ ಆದ ಬಳಿಕ ಮಹಿಳೆಯರ ರಕ್ಷಣೆ ಹಿತದೃಷ್ಟಿಯಿಂದ ಈ ಉಂಗುರವನ್ನು ಇಮ್ರಾನ್ ಖಾನ್ ಸಿದ್ಧಪಡಿಸಿದ್ದಾರೆ. ಈ ಉಂಗುರ ಹಲವು ವಿಶೇಷತೆಯಿಂದ ಕೂಡಿದೆ. ಈ ಉಂಗುರದಲ್ಲಿ ಹನಿ ಬೀ ವೆನಮ್ ಎಂಬ ರಾಸಾಯನಿಕ ದ್ರವ್ಯವನ್ನು ಸಂಗ್ರಹಿಸಿಡುವ ವ್ಯವಸ್ಥೆಯಿದೆ. ಉಂಗುರದ ಎರಡೂ ಬದಿಯಿರುವ ಸೂಜಿಯ ಮುಖಾಂತರ ರಾಸಾಯನಿಕ ಆಕ್ರಮಣಕಾರನ ದೇಹದ ಒಳಹೋಗುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ? : ಇದನ್ನ ಇಂಜೆಕ್ಟ್ ಮಾಡಲು ಒಂದು ಬಟನ್ ವ್ಯವಸ್ಥೆ ಕೂಡ ಇದೆ. ಯಾರಾದರೂ ಅಟ್ಯಾಕ್ ಮಾಡಲು ಬಂದಾಗ ಬಟನ್ ಒತ್ತಿದರೆ ಸಾಕು ರಾಸಾಯನಿಕ ದ್ರವ್ಯ ಮನುಷ್ಯನ ದೇಹಕ್ಕೆ ಸೇರುತ್ತದೆ. ಆಗ ವ್ಯಕ್ತಿ ತೀವ್ರ ಉರಿಯಿಂದ ಒದ್ದಾಡಲು ಪ್ರಾರಂಭಿಸುತ್ತಾನೆ. ಹತ್ತು ಹೆಜ್ಜೇನು ಕಡಿದಷ್ಟು ಉರಿ ಅನುಭವವಾಗುತ್ತದೆ ಅಂತಾರೆ ಇಮ್ರಾನ್. ಆದರೆ ಮಹಿಳೆಯರು ಇದನ್ನು ಹುಷಾರಾಗಿ ಬಳಸಬೇಕಷ್ಟೆ. ಎಂಟು ವರ್ಷಕ್ಕಿಂತ ಕೆಳಗಿರುವ ಮಕ್ಕಳಿಗೆ ಇದನ್ನು ಬಳಸುವುದು ಹಿತವಲ್ಲ.
ರೈಲು, ಬಸ್ಸುಗಳಲ್ಲಿ ಒಂಟಿಯಾಗಿ ಅಡ್ಡಾಡುವ ಶಾಲಾ ಕಾಲೇಜು ಹುಡುಗಿಯರು, ನಿರ್ಜನ ಪ್ರದೇಶದಲ್ಲಿ ವಾಸವಿರುವ ಮಹಿಳೆಯರು, ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಯುವತಿಯರು, ಅಥವಾ ಇದರ ಅಗತ್ಯ ತಮಗೆ ಇದೆ ಎಂದು ಆತಂಕಕ್ಕೀಡಾದವರು ಈ ಉಂಗುರವನ್ನು ರಕ್ಷಣೆಗಾಗಿ ಇಟ್ಟುಕೊಳ್ಳಬಹುದು. ಇದರ ಬೆಲೆ ಕೂಡ ಕಡಿಮೆ ಅಂತಾರೆ ಇಮ್ರಾನ್. ಸದ್ಯಕ್ಕೆ ಪ್ರಾಯೋಗಿಕವಾಗಿ ಉಂಗುರವನ್ನು ಸಿದ್ಧಪಡಿಸಲಾಗಿದ್ದು, ಇನ್ನಷ್ಟು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಡುತ್ತಾರಂತೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications