ಬಯೋಕಾನ್ ಆದಾಯ ಶೇ 19 ರಷ್ಟು ಏರಿಕೆ

ನಿರೀಕ್ಷೆಗೆ ತಕ್ಕ ಫಲ ಪಡೆದಿರುವ ಬಯೋಕಾನ್ ಸಂಸ್ಥೆ ಶೇ 4.6 ರಷ್ಟು ನಿವ್ವಳ ಲಾಭದಲ್ಲಿ ಏರಿಕೆ ಕಂಡಿದೆ.
ಸೆಪ್ಟೆಂಬರ್ 30, 2012ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ಸುಮಾರು 90 ಕೋಟಿ ರು ನಷ್ಟು ನಿವ್ವಳ ಲಾಭ ಪಡೆದಿದೆ.
ಕಿರಣ್ ಮಜುಂದಾರ್ ಶಾ ಅವರ ಸಂಸ್ಥೆಯ ಆದಾಯ ಶೇ 19 ರಷ್ಟು ಏರಿಕೆ ಕಂಡು 642 ಕೋಟಿ ರು ಗಳಿಸಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ 538 ಕೋಟಿ ರು ಮಾತ್ರ ಗಳಿಸಿತ್ತು.
ಬಯೋಕಾನ್ ಷೇರುಗಳು ಬಿಎಸ್ ನಲ್ಲಿ ಬುಧವಾರದ ಮಾರುಕಟ್ಟೆ ಮುಕ್ತಾಯದ ವೇಳೆಗೆ 266.70 ರು ನಂತೆ ಶೇ 2.99 ರಷ್ಟು ಏರಿಕೆ ಕಂಡಿತ್ತು.
ಎನ್ ಎಸ್ ಇನಲ್ಲಿ 265.50 ರು ನಂತೆ ಶೇ 2.43 ರಷ್ಟು ಏರಿತ್ತು.
ನಾವು ನಮ್ಮ ಸಂಸ್ಥೆಯಿಂದ ಈ ತ್ರೈಮಾಸಿಕದಲ್ಲಿ ಉತ್ತಮ ಫಲಿತಾಂಶ ನಿರೀಕ್ಷಿಸಿದ್ದೆವು. ಅರ್ಧ ಆರ್ಥಿಕ ವರ್ಷದ ಹೊತ್ತಿಗೆ ಶೇ 23 ರಷ್ಟು ವರ್ಷದಿಂದ ವರ್ಷಕ್ಕೆ ಆದಾಯ ಹೆಚ್ಚಿಸಿಕೊಳ್ಳುವ ನಿರೀಕ್ಷೆ ಕೈಗೂಡುತ್ತಿದೆ.
ರಫ್ತು ಹಾಗೂ ಕಂಪನಿ ವಿಸ್ತರಣೆ ಬಗ್ಗೆ ಹೆಚ್ಚಿನ ಗಮನಹರಿಸಲಾಗುವುದು ಎಂದು ಬಯೋಕಾನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಚೇರ್ಮನ್ ಕಿರಣ್ ಮಜುಂದಾರ್ ಶಾ ಅವರು ಹೇಳಿದ್ದಾರೆ.
ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಸಂಸ್ಥೆಯ ನಿವ್ವಳ ಮಾರಾಟ 59 ಕೋಟಿ ರು ನಂತೆ ಶೇ 17.22ರಷ್ಟು ಏರಿಕೆ ಕಂಡಿದೆ.
ಬಯೋಕಾನ್ ನ ಸಬ್ಸಿಡಿ ಸಂಸ್ಥೆ ಸಿಂಜಿನ್ ನಲ್ಲಿ 125 ಕೋಟಿ ರು ಹೂಡಲು ಜಿಇ ಕ್ಯಾಪಿಟಲ್ ಮುಂದೆ ಬಂದಿದೆ. 2012 ರ ಅರ್ಥಿಕ ವರ್ಷದಲ್ಲಿ ಸಿಂಜಿನ್ ಸಂಸ್ಥೆ ಸುಮಾರು 400 ಕೋಟಿ ರು ದಾಖಲಿಸಿದೆ. 250 ಕೋಟಿ ರು ಮಾರಾಟ ಕಂಡಿದೆ.
ಬಯೋಕಾನ್ ಸಂಸ್ಥೆಯ ಸಂಶೋಧನಾ ಸಬ್ಸಿಡಿ ಸಂಸ್ಥೆ ಸಿಂಜಿನ್ ನಲ್ಲಿ ಸುಮಾರು 1,500 ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ಅಹಮದಾಬಾದಿನಲ್ಲಿ ಬೃಹತ್ ಉತ್ಪಾದನಾ ಘಟಕ ಆರಂಭಿಸಲು ಕಿರಣ್ ಮುಜುಂದಾರ್ ಶಾ ಕಂಪನಿ ಮನಸ್ಸು ಮಾಡಿದೆ ಎಂದು ನರೇಂದ್ರ ಮೋದಿ ನಾಡಿನಿಂದ ಸುದ್ದಿ ಹಬ್ಬಿತ್ತು.
ಡಯಾಬಿಟಿಸ್, ಅಂಕಾಲಜಿ, ನೆಫ್ರಾಲಜಿ, ಕಾರ್ಡಿಯಾಲೊಜಿ, ಇನ್ಮೂನೊಥೆರಪಿ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ 1555.85 ಕೋಟಿ ಮೌಲ್ಯದ ಬಯೋಕಾನ್ ಕಂಪನಿ ಮನವಿಗೆ ಸಿಎಂ ಮೋದಿ ಅವರು ಕೂಡಾ ಒಪ್ಪಿಗೆ ನೀಡುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿಯಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications