ದೇವೇಗೌಡರಿಗೂ ಲಂಚದ ಆಫರ್ ಬಂದಿತ್ತು

ರಕ್ಷಣಾ ಇಲಾಖೆಗೆ ಸಂಬಂಧಿಸಿದ ಒಪ್ಪಂದವನ್ನು ಕುದುರಿಸಲು ಮಧ್ಯವರ್ತಿಗಳು ಆಗಿನ(ಜೂನ್ 1996 ಹಾಗೂ ಆಗಸ್ಟ್ 1997 ಅವಧಿಯೊಳಗೆ) ಪ್ರಧಾನಿ ದೇವೇಗೌಡರನ್ನು ಭೇಟಿ ಮಾಡಿದ್ದರು ಎಂದು ಕುಮಾರಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೆ, ಮಧ್ಯವರ್ತಿಯ ಹೆಸರನ್ನು ಮಾತ್ರ ಬಹಿರಂಗಪಡಿಸಿಲ್ಲ.
ಭೂಸೇನಾ ಮುಖ್ಯಸ್ಥ ವಿಕೆ ಸಿಂಗ್ ಅವರ ಲಂಚ ಆರೋಪದ ಬಗ್ಗೆ ಪ್ರಸ್ತಾಪಿಸಿದ ಕುಮಾರಸ್ವಾಮಿ, ಈ ರೀತಿ ಲಂಚ ಆಮಿಷ ಹಿಂದಿನಿಂದ ನಡೆದುಬಂದಿದೆ ಎಂದರು. ಲೆ.ಜ ತೇಜಿಂದರ್ ಸಿಂಗ್ ಅವರು 14 ಕೋಟಿ ಲಂಚ ನೀಡಲು ಮುಂದಾಗಿದ್ದರು ಎಂದು ಭೂ ಸೇನಾ ಮುಖ್ಯಸ್ಥ ವಿಕೆ ಸಿಂಗ್ ಆರೋಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications