ಚಿನ್ನದ ವ್ಯಾಪಾರಿ ಹತ್ಯೆ: ಟ್ಯಾಕ್ಸಿ ಹಂತಕರ ಬಂಧನ
ಬೆಂಗಳೂರು,
ಫೆ.7: ಆಂಧ್ರದ ಚಿನ್ನದ ವ್ಯಾಪಾರಿ ಮನೋಜ್ ಕುಮಾರ್ ಅವರನ್ನು ದೇವನಹಳ್ಳಿ ವಿಮಾನ ನಿಲ್ದಾಣದಿಂದ ಅಪಹರಿಸಿ, ಸಕಲೇಶಪುರ ಘಾಟ್ ಬಳಿ ಹತ್ಯೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಆಗ್ನೇಯ ವಲಯ ಪೊಲೀಸರು ಮೂವರು ಆರೋಪಿಗಳನ್ನು ಗುರುವಾರ ಬಂಧಿಸಿದ್ದಾರೆ. id="toptextpromo">ಮಂಗಳವಾರ
ಬೆಳಗ್ಗೆ ಚಿನ್ನದ ವ್ಯಾಪಾರಿ ಮನೋಜ್ ಕುಮಾರ್ ಗ್ರಂಥಿ (34) ಅವರನ್ನು ಅಪಹರಿಸಲಾಗಿತ್ತು. ಮನೋಜ್ ಅಪಹರಣ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನವನ್ನುಂಟುಮಾಡಿತ್ತು. ಮೂರೇ ದಿನಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಟ್ಯಾಕ್ಸಿ ಚಾಲಕರಾದ ಶಿವಕುಮಾರ್, ರವಿಕುಮಾರ್ ಮತ್ತು ಕೃಷ್ಣೇಗೌಡ ಬಂಧಿತ ಆರೋಪಿಗಳು. ಮನೋಜ್ ಬಳಿಯಿದ್ದ ಸುಮಾರು 3 ಕೋಟಿ ರುಪಾಯಿ ಚಿನ್ನಾಭರಣದ ಆಸೆಗೆ ಬಿದ್ದು ಅವರನ್ನು ಹತ್ಯೆ ಮಾಡಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.











Click it and Unblock the Notifications