ಬ್ರಹ್ಮಣಿ ಆರ್ಥಿಕ ವ್ಯವಹಾರ ತಜ್ಞೆ ರೇಣುಕಾ ಆಚಾರ್ಯ
ಜನಾರ್ದನ ರೆಡ್ಡಿ ಬಂಧನ ನಂತರ ರೇಣುಕಾ ದುಬೈಗೆ ತೆರಳಿ, ತಲೆ ಮರೆಸಿಕೊಂಡಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿತ್ತು. ಆದರೆ, ಬ್ರಹ್ಮಣಿ ಸ್ಟೀಲ್ಸ್ ನ ಆರ್ಥಿಕ ವ್ಯವಹಾರದ ಆಧಾರವಾಗಿದ್ದ ರೇಣುಕಾ ಮೇಲೆ ಸಿಬಿಐ ಇನ್ನೂ ಏಕೆ ಹುಡುಕಾಟ ಆರಂಭಿಸಿಲ್ಲ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ವರದಿಯಲ್ಲೂ ರೇಣುಕಾ ಬಗ್ಗೆ ಪ್ರಸ್ತಾಪಿಸಲಾಗಿದೆ. ರೆಡ್ಡಿಗಳ ಕಾರ್ಖನೆಗಳ ಆರ್ಥಿಕ ಯೋಜನೆ, ವಿದೇಶಿ ಕಂಪನಿಗಳ ಜೊತೆ ಅವ್ಯವಹಾರ, ಲಾಭ ನಷ್ಟ, ಷೇರುಗಳು, ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಲ್ಲವೂ ರೇಣುಕಾ ಮಾತ್ರ ಬಲ್ಲರು.
ರೆಡ್ಡಿ ಬಂಟ ಅಲಿ ಖಾನ್ ಸಿಬಿಐ ಕೈಗೆ ಸಿಕ್ಕಿರುವ ಸಂಭಾವ್ಯ ಸುದ್ದಿಯ ಬೆನ್ನಲ್ಲೇ ರೆಡ್ಡಿಗಳ 30ಕ್ಕೂ ಅಧಿಕ ಕಂಪನಿಗಳ ವ್ಯವಹಾರ/ಅವ್ಯವಹಾರಗಳ ಜಾತಕ ಹೊಂದಿದ್ದ ರೇಣುಕಾ ಬಗ್ಗೆ ಆಕೆಯ ಬಳ್ಳಾರಿ ಹಾಗೂ ಬೆಂಗಳೂರು ಕಂಪನಿ ಸಿಬ್ಬಂದಿಗಳು ಬಾಯಿಬಿಟ್ಟಿಲ್ಲ.
ಜನಾರ್ದನ ರೆಡ್ಡಿ ಕೂಡಾ ವಿಚಾರಣೆ ವೇಳೆ ಘಜನಿ ಯಂತೆ ಮರೆವಿನ ನಾಟಕ ಶುರು ಮಾಡಿಕೊಂಡಿರುವುದು ಸಿಬಿಐಗೆ ಹೊಸ ತಲೆ ನೋವಾಗಿದೆ. ಹಾಗಾಗಿ ರೆಡ್ಡಿ ಸಾಮ್ರಾಜ್ಯದ ಸೇನಾನಿಗಳು, ಸಚಿವರನ್ನು ಒಬ್ಬೊಬ್ಬರಾಗಿ ಹೈದರಾಬಾದಿಗೆ ಕರೆಸಿಕೊಳ್ಳುತ್ತಿದ್ದಾರೆ.
ಯಾರೀಕೆ ರೇಣುಕಾ ಆಚಾರ್ಯ? ರೆಡ್ಡಿಗಳಿಗೆ ಸಾಮ್ರಾಜ್ಯದಲ್ಲಿ ಯಾವ ಸ್ಥಾನವಿತ್ತು.. ಓದಿ ಮುಂದಕ್ಕೆ...