ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಎಸ್ ಯಡಿಯೂರಪ್ಪಗೆ ಹಿಡಿಶಾಪ ಹಾಕಿದ ಮಹಿಳೆ

|
Google Oneindia Kannada News

Yeddyurappa
ಬೆಂಗಳೂರು ಆ 30: ನನ್ನಂಥ ಸಾವಿರಾರು ಬಡ ಕುಟುಂಬವನ್ನು ಬೀದಿಗೆಳೆದ ಪಾಪಿ ಸ್ವಾಮಿ ಅವ್ನು, ದೇವರು ಅವ್ನಿಗೆ ಒಳ್ಳೆದು ಮಾಡೋಲ್ಲ. ಬಡವರ ಶಾಪ ಅವನಿಗೆ ತಟ್ಟೇ ತಟ್ಟುತ್ತೆ. ಅವನು ಜೈಲಿಗೆ ಹೋಗುವ ದಿನ ದೂರವಿಲ್ಲ ಹೀಗೆಂದು ಏಕವಚನದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಹಿಳೆಯೊಬ್ಬಳು ಸೋಮವಾರ (ಆ 29) ಕೋರ್ಟ್ ಆವರಣದಲ್ಲೇ ತರಾಟೆಗೆ ತೆಗೆದು ಕೊಂಡಿದ್ದಾಳೆ.

ಅನಿರೀಕ್ಷಿತ ಘಟನೆಗೆ ಕೋರ್ಟ್ ಸಾಕ್ಷಿಯಾಯಿತು. ದೊರೆಸ್ವಾಮಿ ಒಡೆತನದ ಪಿಇಎಸ್ ಸಂಸ್ಥೆಗೆ ಇದೇ ಫೆಬ್ರವರಿಯಲ್ಲಿ ಗವಿಪುರ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿತ್ತು. ಈ ನಿವೇಶನದ ಒಂದು ಸೈಟ್ ಈ ಮಹಿಳೆಯದ್ದು, ಆಕೆಯ ಹೆಸರಿನಲ್ಲೇ ಖಾತಾ ಕೂಡಾ ರಿಜಿಸ್ಟರ್ ಆಗಿತ್ತು.

ಬಿಡಿಎ ಆದೇಶ ಪ್ರಶ್ನಿಸಿ ಈಕೆ ಸಾರ್ವಜನಿಕ ಅರ್ಜಿ ದಾಖಲಿಸಿದ್ದರು. ದಾಖಲೆಗಳು ಈಕೆಯ ಪರವಾಗಿಯೇ ಇರುವುದರಿಂದ ಪಿಇಎಸ್ ಸಂಸ್ಥೆ ನಿವೇಶನವನ್ನು ಹಿಂದಿರುಗಿಸಿತ್ತು.

ಆದರೆ, ಪಿಇಎಸ್ ಸಂಸ್ಥೆಗೆ ನಿವೇಶನ ಹಂಚಿಕೆ ಮಾಡಿದಾಗ ಈಕೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ಈಕೆಯನ್ನು ಎರಡು ದಿಂದ ಜೈಲಿಗೆ ಅಟ್ಟಿದ್ದರು ಇದೇ ಈಕೆಯ ಕೋಪಕ್ಕೆ ತಾಪಕ್ಕೆ ಕಾರಣವೆನ್ನಲಾಗಿದೆ.

ಯಡಿಯೂರಪ್ಪ ಮತ್ತು ದೊರೆಸ್ವಾಮಿ ಯವರೇ ನನ್ನ ವಿರುದ್ದ ದೂರು ದಾಖಲಿಸಿ ಜೈಲಿಗೆ ಹೋಗುವಂತೆ ಮಾಡಿದರು ಎಂದು ಕೋರ್ಟ್ ಆವರಣದಲ್ಲಿ ರಂಪರಾಮಾಯಣ ನಡೆಸುತ್ತಿದ್ದಾಗ ಬೇಸತ್ತ ಪೊಲೀಸರು ಈಕೆಯನ್ನು ಕೋರ್ಟ್ ಹಾಲಿಗೆ ಕಳುಹಿಸಿದ್ದರು. ನ್ಯಾಯಾಧೀಶರ ಮುಂದೆ ಕೂಡಾ ತನ್ನ ನೋವನ್ನು ಈಕೆ ನಿವೇದಿಸಿಕೊಂಡಳು.

English summary
A elder woman cursed former CM Yeddyurappa for grabbing her land by BDA. Yeddyurappa was just returning after attending the Lokayukta special court proceedings in Illegal mining case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X