ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ಣಾಗೆ ರಾಹುಲ್ ಗಾಂಧಿ ಅಭಿನಂದನೆ *ಕಂಡೀಷನ್ಸ್ ಅಪ್ಲೈ

By Mahesh
|
Google Oneindia Kannada News

Rahul Gandhi speaks on Anna
ನವದೆಹಲಿ, ಆ.26: ಅಣ್ಣಾ ಹಜಾರೆ ಹೋರಾಟದ ಬಗ್ಗೆ ಕೊನೆಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮೌನ ಮುರಿದಿದ್ದಾರೆ. ಇಂದು(ಆ.26) ಸಂಸತ್ತಿನ ಶೂನ್ಯವೇಳೆಯಲ್ಲಿ ಜನ ಲೋಕಪಾಲ ಮಸೂದೆ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು.

ಜನ ಲೋಕಾಪಾಲದಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ. ಭ್ರಷ್ಟಾಚಾರ ತೊಲಗಿಸಲು ಯಾವುದೇ ಸರಳ ಸಿದ್ಧಸೂತ್ರಗಳಿಲ್ಲ. ಭ್ರಷ್ಟಾಚಾರದಂಥ ಬೃಹತ್ ಸಮಸ್ಯೆ ಬಗ್ಗೆ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ವೇದಿಕೆ ಒದಗಿಸಿದ ಅಣ್ಣಾ ಹಜಾರೆ ಅವರಿಗೆ ರಾಹುಲ್ ಧನ್ಯವಾದ ಅರ್ಪಿಸಿದರು.

ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವ ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆಯವರ ನಿರಶನ ನಿಲ್ಲಿಸದಿರುವುದು ಕಳವಳಕಾರಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ರಾಹುಲ್ ದ್ವಂದ ಹೇಳಿಕೆ: ಅಣ್ಣಾ ಅವರ ಹೋರಾಟಕ್ಕೆ ಮೆಚ್ಚುಗೆ ಸೂಚಿಸಿದ ಬೆನ್ನಲ್ಲೇ, ದೇಶದ ಯುವ ಜನತೆಯ ದಾರಿ ತಪ್ಪಿಸುವ ಇಂಥ ಹೋರಾಟಗಳು ಪ್ರಜಾಪ್ರಭುತ್ವಕ್ಕೆ ಮಾರಕ ಎಂದರು. ಲೋಕಪಾಲ್ ಅನ್ನು ಚುನಾವಣಾ ಆಯೋಗದಂತೆ ಸಂಸದೀಯ ಸಂಸ್ಥೆಯನ್ನಾಗಿಸಿದರೆ ಮಾತ್ರ ಪ್ರಯೋಜನ ಕಾಣಬಹುದು ಎಂದರು.

ತಕ್ಷಣವೇ ಬಿಜೆಪಿ ಸೇರಿದಂತೆ ವಿಪಕ್ಷಗಳು ರಾಹುಲ್ ಗಾಂಧಿ ಅವರ ಭಾಷಣ ಮೊಟಕುಗೊಳಿಸುವಂತೆ ಆಗ್ರಹಿಸಿದರು. ಯಾರೋ ಬರೆದುಕೊಟ್ಟ ಭಾಷಣ ಓದುವ ರಾಹುಲ್ ರನ್ನು ಸುಮ್ಮನೆ ಕೂರಲು ಹೇಳಿ ಎಂದು ಸ್ಪೀಕರ್ ಮೀರಾ ಕುಮಾರ್ ಗೆ ಕೇಳಿಕೊಂಡರು.

English summary
AICC General secretary Rahul Gandhi finally spoke on Anna Hazare during the zero hour in Parliament on Aug 26 (today). Rahul Claims Jan Lokpal alone can't eradicate corruption. Anna's agitation is giving dangerous message to democratic India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X