ಕುತೂಹಲದ ಉಗ್ರಾಣವಾದ ಅನಂತ ಸಂಪತ್ತು: ಸರಕಾರದ ನಿಲುವೇನು?

ಇದೀಗ ಸಂಪತ್ತಿನ ಮೌಲ್ಯಮಾಪನಕ್ಕೆ ನೇಮಕವಾಗಿರುವ ಪಂಚ ಸದಸ್ಯ ಸಮಿತಿ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕಾಗಿದೆ. ಅಷ್ಟಮಂಗಲ ಪ್ರಶ್ನೆ ಮುಗಿದ ಬಳಿಕ ಸಭೆ ಸೇರಿದ ಸಮಿತಿ ಬಿ ಉಗ್ರಾಣವನ್ನು ತೆರೆಯುವ ಇಂಗಿತ ವ್ಯಕ್ತಪಡಿಸಿದ್ದರೂ ಆ ಬಗ್ಗೆ ಸ್ಪಷ್ಟ ಸುಳಿವನ್ನು ಮಾತ್ರ ನೀಡಿಲ್ಲ. ಮುಂದಿನ ವಾರ ಸಮಿತಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಿದೆ ಹಾಗೂ ಆ. 22ರಂದು ಬಿ ಕೊಠಡಿಯ ಕುರಿತು ಚರ್ಚಿಸಲಿದೆ.
ತಿರುವಾಂಕೂರು ರಾಜಮನೆತನದವರು ಬಿ ಉಗ್ರಾಣವನ್ನು ತೆರೆಯಬಾರದೆಂದು ಹೇಳುತ್ತಿದ್ದಾರೆ. ಪಂಚ ಸದಸ್ಯ ಸಮಿತಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಂತೆ ಉಗ್ರಾಣವನ್ನು ತೆರೆಯದಿರಲು ನಿರ್ಧರಿಸಿದರೂ ಸುಪ್ರೀಂಕೋರ್ಟ್ಗೆ ತೆರೆಯಲು ಆದೇಶಿಸುವ ಅಧಿಕಾರ ಇದೆ. ಜನರ ಪರ ಅಥವಾ ವಿರೋಧಿ ಭಾವನೆ ಅಥವಾ ದೈವಾಜ್ಞೆಗಳನ್ನು ಕಾನೂನು ಪ್ರಕಾರ ನ್ಯಾಯಾಂಗ ಮನ್ನಿಸುವಂತಿಲ್ಲ. ಅದು ವಾಸ್ತವದ ನೆಲೆಗಟ್ಟಿನಲ್ಲಿ ತೀರ್ಪು ನೀಡುತ್ತದೆ. ಹೀಗಾಗಿ ಅನಂತನ ಬಿ ಉಗ್ರಾಣ ಈಗ ಅಪಾರ ಕುತೂಹಲದ ಕೇಂದ್ರ ಬಿಂದುವಾಗಿದೆ.












Click it and Unblock the Notifications