7 ವರ್ಷವಾದರೂ ಹೂತಿದ್ದ ಬಾಬಾ ಶವ ಕೊಳೆತಿಲ್ಲ!

ಶಿವ ಶರಣರ ಹಿಂದೂ ವಿಧಿ ವಿಧಾನದಂತೆ ಅಂಬೇಡ್ಕರ್ ಚೌಕ ಸಮೀಪದಲ್ಲಿಯೇ ಸ್ವಾಮೀಜಿಯ ಅಂತ್ಯ ಕ್ರಿಯೆ ಮಾಡಿದ್ದರು. ಸ್ವಾಮೀಜಿ ಪವಾಡ ಪರುಷರಾಗಿದ್ದು, ಮೃತ ದೇಹ 7 ವರ್ಷವಾದರೂ ಕೊಳೆತಿಲ್ಲವಾದ್ದರಿಂದ ಇದು ದೈವಿ ಪವಾಡವೆನ್ನುತ್ತಾರೆ ಮನೆಯವರು ಮತ್ತು ಸ್ಥಳೀಯರು.
ಪ್ರತಿಯೊಬ್ಬ ಭಕ್ತರ ಕೈಯಲ್ಲಿ ಭಜನೆ ಮಾಡುವ ತಾಳಗಳು. ಮಹಿಳೆಯರ ಕೈಯಲ್ಲಿ ಆರತಿ ಬೆಳಗುವ ದೀಪಗಳು. ದಾರಿಯುದ್ದಕ್ಕೂ ಮುಗಿಲು ಮುಟ್ಟುವ ನೂರಾರು ಭಕ್ತರ ಓ ನಮ: ಶಿವಾಯ ಜಯಘೋಷಗಳು ಮೊಳಗಿದ್ದವು. ಸ್ವಾಮೀಜಿಗಳ ಮೃತ ದೇಹವನ್ನು ಅನ್ವರ ಕುಟುಂಬದವರು ತಮ್ಮ ಮನೆಯ ಪಕ್ಕದಲ್ಲಿಯೇ ಸ್ವಾಮೀಜಿ ಹೆಂಡತಿ ಹೊನ್ನಮ್ಮಾ, ಮಗ ಡಾ.ಭಗವಂತ ಅನ್ವರ್ ಅಂತ್ಯ ಸಂಸ್ಕಾರ ಮಾಡಿದರು.
ಈ ಅಂತ್ಯ ಸಂಸ್ಕಾರ ನೋಡಲು ನೂರಾರು ಜನ ಆಗಮಿಸಿ ಸ್ವಾಮೀಜಿಯ ದರ್ಶನ ಪಡೆದರು. ಇದು ಒಂದು ರೀತಿಯ ದೈವಿ ಪವಾಡವಾಗಿದೆ. ಇನ್ನೊಂದು ರೀತಿಯಲ್ಲಿ ವೈಜ್ಞಾನಿಕ ಹಿನ್ನೆಲೆಯಿಂದ ನೋಡಿದರೆ ಶಿವಶರಣರ ಅಂತ್ಯಕ್ರೀಯೆ ಮಾಡುವಾಗ ಉಪ್ಪು ಜಾಸ್ತಿ ಹಾಕುವುದರಿಂದ ಈ ರೀತಿ ಶವ ಕೊಳೆಯುವುದಿಲ್ಲ ಎನ್ನುತ್ತಾರೆ ಹಿರಿಯ ನಾಗರಿಕರು.
ಅಂಬೇಡ್ಕರ್ ನಗರ ಸಭೆ ಸದಸ್ಯ ಶಂಕರ ಸಾಗರ ಇಲ್ಲಿ ಮಠವನ್ನು ಮಾಡಲಾಗುವುದು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಅಂತ್ಯ ಸಂಸ್ಕಾರವಾದ ಜಾಗದಲ್ಲಿ ಮಠವಾದರೆ ಅಲ್ಲಿಯೂ ಕೂಡ ಸ್ವಾಮೀಜಿಗಳು ಪವಾಡಗಳನ್ನು ಮಾಡುವರೇ ಎನ್ನುವುದು ಭಕ್ತರಲ್ಲಿ ಕುತೂಹಲ ಮೂಡಿಸಿದೆ.












Click it and Unblock the Notifications